ETV Bharat / state

ರಾಹುಲ್‌ ದಾವೂದ್‌ ತಮ್ಮ, ಕುಮಾರಸ್ವಾಮಿ ಇಮ್ರಾನ್‌ ಖಾನ್‌ ಅಳಿಯ.. ಯತ್ನಾಳ್ ವ್ಯಂಗ್ಯ

author img

By

Published : Jan 22, 2020, 7:56 PM IST

basavanagowda-patil-yatnal
ಶಾಸಕ ಬಸನಗೌಡ ಪಾಟೀಲ ಯತ್ನಾಳ್

ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್​, ಮಂಗಳೂರು ವಿಮಾನ ನಿಲ್ದಾಣ ಬಳಿ ಬಾಂಬ್ ಪತ್ತೆ ಪ್ರಕರಣ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ವಿಜಯಪುರ: ಮಂಗಳೂರು ವಿಮಾನ ನಿಲ್ದಾಣ ಬಳಿ ಬಾಂಬ್ ಪತ್ತೆ ಪ್ರಕರಣ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಮಂಗಳೂರು ಏರಪೋರ್ಟ್​ನಲ್ಲಿ ಸಿಕ್ಕ ಬಾಂಬ್​ ಅಣಕು ಪ್ರದರ್ಶನದಂತಿತ್ತು ಎನ್ನುವ ಮಾಜಿ ಸಿಎಂ ಹೆಚ್​ಡಿಕೆ ಹೇಳಿಕೆ ನಾಚಿಕೇಡಿನ ಸಂಗತಿ. ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರಿಗೆ ಸರ್ಕಾರದಿಂದ ಮಾನಸಿಕ ಚಿಕಿತ್ಸೆ ನೀಡುವ ಅವಶ್ಯಕತೆ ಇದೆ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ್

ಅವರು ಸಿಎಂ ಆಗಿದ್ದೆ ಅಣುಕ ಪ್ರದರ್ಶನದಂತಿತ್ತು. ಅವರಿಗೆ ದೇಶ, ಸೈನಿಕರು, ರಾಜ್ಯದ ಹಿತ ಯಾವುದೂ ಕಾಣುವುದಿಲ್ಲ. ಕುಮಾರಸ್ವಾಮಿ ಕರ್ನಾಟಕದ ಓವೈಸಿ ಆಗಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಲು ಯತ್ನಿಸಿದ ವ್ಯಕ್ತಿ ಆದಿತ್ಯರಾವ್​ ಆತ ಓರ್ವ ಹಿಂದು. ಆತನ ಬಂಧನವಾಗಿದೆ. ಪೊಲೀಸ್ ಇಲಾಖೆ ಉತ್ತಮ ಕಾರ್ಯ ಮಾಡಿದೆ ಎಂದು ಶ್ಲಾಘಿಸಿದರು.

ನಿನ್ನೆ ಕಲಬುರ್ಗಿಯಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾಡಿದ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ್ ಅವರ ಭಾ಼ಷಣ ಪಾಕಿಸ್ತಾನದ ಲೀಡರ್ ತರ ಇತ್ತು. ದಾವುದ್ ಇಬ್ರಾಹಿಂ ತಮ್ಮ ರಾಹುಲ್ ಗಾಂಧಿ, ಇಮ್ರಾನ್ ಖಾನ ಅಳಿಯ ಕುಮಾರಸ್ವಾಮಿ ಎಂಬಂತೆ ಇತ್ತು ಎಂದು ವ್ಯಂಗ್ಯವಾಡಿದರು.

Intro:ವಿಜಯಪುರ


Body:ವಿಜಯಪುರ: ಮಂಗಳೂರು ವಿಮಾನ ನಿಲ್ದಾಣ ಬಳಿ ಬಾಂಬ್ ಪತ್ತೆ ಪ್ರಕರಣ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಖಾರವಾಗಿ ಪ್ರತಿಕ್ರಿಯೆ ನೀಡಿದ್ದು, ಮಂಗಳೂರು ಏರಪೋರ್ಟ್ ಸಿಕ್ಕ ಅಣಕು ಪ್ರದರ್ಶನದಂತಿತ್ತು. ಎನ್ನುವ ಹೇಳಿಕೆ ನಾಚಿಕೇಡಿತನದಿಂದ ಕೂಡಿದೆ ಎಂದರು.
ವಿಜಯಪುರ ದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರಿಗೆ ಸರ್ಕಾರದಿಂದ ಮಾನಸಿಕ ಚಿಕಿತ್ದೆ ನೀಡುವ ಅವಶ್ಯಕತೆ ಇದೆ.. ಅವರು ಸಿಎಂ ಆಗಿದ್ದೆ ಅಣುಕ ಪ್ರದರ್ಶನದಂತಿದೆ ಎಂದರು.
ಅವರಿಗೆ ದೇಶ, ಸೈನಿಕರು, ರಾಜ್ಯದ ಹಿತ ಯಾವುದು ಕಾಣುವದಿಲ್ಲ ಕುಮಾರಸ್ವಾಮಿ ಕರ್ನಾಟಕ ದ ಓವೈಸಿ ಆಗಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಂಗಳೂರು ವಿಮಾನ ನಿಲ್ದಾಣ ಬಾಂಬ್ ಸ್ಪೋಟಿಸಲು ಯತ್ನಿಸಿದ ವ್ಯಕ್ತಿ ಆದಿತ್ಯರಾವ ಆತ ಓರ್ವ ಹಿಂದು, ಆತನ ಬಂಧನವಾಗಿದೆ. ಪೊಲೀಸ್ ಇಲಾಖೆ ಉತ್ತಮ ಕಾರ್ಯ ಮಾಡಿದೆ ಎಂದು ಶ್ಲಾಘಿಸಿದರು.
ನಿನ್ನೆ ಕಲಬುರ್ಗಿಯಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾಡಿದ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ ಅವರ ಭಾ಼ಷಣ ಪಾಕಿಸ್ತಾನದ ಲೀಡರ್ ತರ ಇತ್ತು. ದಾವುದ್ ಇಬ್ರಾಹಿಂ ತಮ್ಮ ರಾಹುಲ್ ಗಾಂಧಿ, ಇಮ್ರಾನ್ ಖಾನ ಅಳಿಯ ಕುಮಾರಸ್ವಾಮಿ ಎಂಬಂತೆ ಇತ್ತು. ಎಂದರು.


Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.