ETV Bharat / state

ಅಲೆಗಳ ಅಬ್ಬರದ ಬಗ್ಗೆ ಎಚ್ಚರಿಕೆ ನೀಡಿದರೂ ನೀರಿಗಿಳಿದ ಯುವಕ ನಾಪತ್ತೆ.. ಗೋಕರ್ಣ ಪೊಲೀಸರಿಂದ ಶೋಧ

author img

By

Published : Aug 9, 2021, 1:17 PM IST

Youth from Bangalore missing in sea
ಅಲೆಯಲ್ಲಿ ಕೊಚ್ಚಿ ಹೋದ ಯುವಕ: ಪೊಲೀಸರಿಂದ ಶೋಧ

ಸಮುದ್ರದಲ್ಲಿ ಈಜಲು ಹೋದ ಯುವಕ ನೀರು ಪಾಲಾದ ಘಟನೆ ಗೋಕರ್ಣದ ಕಡಲ ತೀರದಲ್ಲಿ ನಡೆದಿದೆ.

ಕಾರವಾರ: ಸಮುದ್ರದಲ್ಲಿ ಸ್ನೇಹಿತರೊಂದಿಗೆ ಈಜಲು ನೀರಿಗಿಳಿದಿದ್ದ ಯುವಕನೋರ್ವ ಅಲೆಗೆ ಕೊಚ್ಚಿ ಹೋಗಿ ನಾಪತ್ತೆಯಾಗಿರುವ ಘಟನೆ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಇಂದು ನಡೆದಿದೆ.

ಬಿಟಿಎಂ ಲೇಔಟ್ ನಿವಾಸಿ ಅರುಣ ಲಕ್ಕಪ್ಪ (22) ನಾಪತ್ತೆಯಾದ ಯುವಕ‌. ಬೆಂಗಳೂರಿನಿಂದ 8 ಮಂದಿ ಸ್ನೇಹಿತರು ಸೇರಿ ಗೋಕರ್ಣಕ್ಕೆ ಪ್ರವಾಸಕ್ಕೆ ಆಗಮಿಸಿದ್ದರು. ಭಾರಿ ಅಲೆಗಳ ಅಬ್ಬರದ ನಡುವೆಯೂ ನೀರಿಗೆ ಇಳಿಯಲು ಮುಂದಾದವರಿಗೆ ಸ್ಥಳೀಯರು ಅಲೆ ಜೋರಾಗಿರುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೂ 8 ಮಂದಿ ಯುವಕರು ಈಜಲು ಸಮುದ್ರಕ್ಕೆ ಇಳಿದು ಮಸ್ತಿಯಲ್ಲಿ ತೊಡಗಿದ್ದರು.

Youth from Bangalore missing in sea
ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋದ ಯುವಕ..

ಈ ವೇಳೆ ಅಲೆಯ ಅಬ್ಬರಕ್ಕೆ ಸಿಕ್ಕಿದ್ದ ಯುವಕ ಕೊಚ್ಚಿಹೋಗಿದ್ದಾನೆ‌. ತಕ್ಷಣ ಉಳಿದವರು ದಡಕ್ಕೆ ಆಗಮಿಸಿ ರಕ್ಷಣೆಗೆ ಮೊರೆಯಿಟ್ಟಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಬೋಟ್​​ಗಳ ಸಹಾಯದೊಂದಿಗೆ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.