ETV Bharat / state

ತಂದೆಯ ಬುದ್ಧಿ ಮಾತಿಗೆ ಮನನೊಂದು ಯುವಕ ಆತ್ಮಹತ್ಯೆ..!

author img

By

Published : May 26, 2020, 7:57 PM IST

Young man commits suicide in Bhatkal
ಮುಹ್ಮದ್ ಮುಸ್ತಾಖಿಮ್ ಶೇಕ್ (22) ಮೃತ ಯುವಕ

ಭಟ್ಕಳದಲ್ಲಿ ತಂದೆಯ ಬುದ್ಧಿ ಮಾತಿಗೆ ಬೇಸರಗೊಂಡು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಭಟ್ಕಳ : ತಂದೆಯ ಬುದ್ಧಿ ಮಾತಿಗೆ ಮನನೊಂದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಗರದಲ್ಲಿ ನಡೆದಿದೆ.

Young man commits suicide in Bhatkal
ಮುಹ್ಮದ್ ಮುಸ್ತಾಖಿಮ್ ಶೇಕ್ (22) ಮೃತ ಯುವಕ

ಅಜಾದ್ ನಗರದ ಮುಹ್ಮದ್ ಮುಸ್ತಾಖಿಮ್ ಶೇಕ್ (22) ಮೃತ ಯುವಕ ಎಂದು ತಿಳಿದು ಬಂದಿದೆ. ಅಲ್ಯೂಮಿನಿಯಂ ಕೆಲಸ ಮಾಡಿಕೊಂಡಿದ್ದ ಮುಹ್ಮದ್, ಲಾಕ್​​ಡೌನ್​ ಬಳಿಕ ಕೆಲಸವಿಲ್ಲದೇ ಬೇರೆ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದ.

Young man commits suicide in Bhatkal
ಮುಹ್ಮದ್ ಮುಸ್ತಾಖಿಮ್ ಶೇಕ್ (22) ಮೃತ ಯುವಕ

ಮೃತ ಯುವಕನ ತಂದೆ ಸಣ್ಣ-ಪುಟ್ಟ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇರುವಂತೆ ಹಾಗೂ ಈ ಮೊದಲೇ ಮಾಡುತ್ತಿದ್ದ ಅಲ್ಯೂಮಿನಿಯಂ ಕೆಲಸವನ್ನೇ ಲಾಕ್​​ಡೌನ್​​ ಬಳಿಕವೂ ಮುಂದುವರೆಸುವಂತೆ ಬುದ್ಧಿವಾದ ಹೇಳಿದ್ದರಂತೆ. ಈ ಬುದ್ಧಿವಾದ ಹೇಳಿದ್ದಕ್ಕೆ ಮನೆಯ ಕೋಣೆಗೆ ಹೋಗಿ ವೇಲ್​ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ತಂದೆಯ ಬುದ್ಧಿ ಮಾತಿಗೆ ಮನನೊಂದು ಯುವಕ ಆತ್ಮಹತ್ಯೆ

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಇಲ್ಲಿನ ಪೊಲೀಸರು, ಯುವಕನ ಮೃತ ದೇಹವನ್ನು ಭಟ್ಕಳ ತಾಲೂಕು ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಪಿ.ಎಸ್.ಐ ಭರತ್ ನಾಯಕ ಮತ್ತು ಎ. ಎಸ್.ಐ ನಾರಾಯಣ್ ಬೊರೈ ತನಿಖೆ ಕೈಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.