ETV Bharat / state

ಭಟ್ಕಳ ಪುರಸಭೆ-ಜಾಲಿ ಪ.ಪಂ.ಗೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದಿಂದ ಪ್ರಶಂಸನಾ ಪತ್ರ

author img

By

Published : Jun 3, 2020, 5:00 PM IST

Honored to corona warrior
Honored to corona warrior

ಕೊರೊನಾ ವಿರುದ್ಧದ ಹೋರಾಟದಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವವಾದದ್ದು. ಕೊರೊನಾ ತಡೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಮಹತ್ವದ ಕಾರ್ಯಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ ತಾಲೂಕಿನ ಜಾಲಿ ಪ.ಪಂ ಮತ್ತು ಭಟ್ಕಳ ಪುರಸಭೆಗೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ.

ಭಟ್ಕಳ: ಪಟ್ಟಣದಲ್ಲಿ ಕೊರೊನಾ ತಂದಿಟ್ಟಿರುವ ಸಂಕಷ್ಟದ ನಡುವೆಯೂ ಭಟ್ಕಳ ಪೌರಕಾರ್ಮಿಕರು ಎದೆಗುಂದದೆ ತಮ್ಮ ಪ್ರಾಮಾಣಿಕ ಕರ್ತವ್ಯ ಪಾಲನೆ ಮಾಡಲು ನಿಂತು ಮನೆ-ಮನೆಗೆ ತೆರಳಿ ಸ್ಯಾನಿಟೈಸರ್ ಸಿಂಪಡಿಸಿ ಇತರೆ ಮಹತ್ವದ ಕಾರ್ಯಗಳನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ ತಾಲೂಕಿನ ಜಾಲಿ ಪ.ಪಂ ಮತ್ತು ಭಟ್ಕಳ ಪುರಸಭೆಗೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ.

ಒಂದು ಹಂತದಲ್ಲಿ ಭಟ್ಕಳ ಪಟ್ಟಣ ವ್ಯಾಪ್ತಿ ಕಂಟೈನ್ಮೆಂಟ್ ಝೋನ್ ಆಗಿದ್ದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಆರಂಭದಲ್ಲಿ ಕೊರೊನಾ ಕುರಿತು ಅನೇಕ ಉಹಾಪೋಹಗಳಿದ್ದು, ಯಾವುದು ಮಾಡಬೇಕು, ಮಾಡಬಾರದು ಎನ್ನುವ ಆತಂಕ ಜನರಲ್ಲಿತ್ತು.

Honored to corona warrior
ಕೊರೊನಾ ವಾರಿಯರ್ಸ್​ಗೆ ಪ್ರಶಂಸೆ
ಅಧಿಕಾರಿಗಳಲ್ಲಿಯೂ ಕೊರೊನಾ ಬಗ್ಗೆ ಭಯ ಹಾಗೂ ಅದರ ಕಡಿವಾಣಕ್ಕೆ ಸೂಕ್ತ ಕ್ರಮದ ಬಗ್ಗೆ ಭಾರೀ ಚರ್ಚೆಯಾದ ನಡುವೆಯೂ ಪ್ರಕರಣ ಕಂಡು ಬಂದ ಮನೆಗಳಿಗೆ ಪೌರಕಾರ್ಮಿಕರು ಅಧಿಕಾರಿಗಳ ಸೂಚನೆಯ ಮೇರೆಗೆ ತೆರಳಿ ಔಷಧಿ ಸಿಂಪಡಣೆ ಮಾಡಿದ್ದರು. ಜನರಲ್ಲಿ ಜಾಗೃತಿ ಮೂಡಿಸಿ, ಪ್ರಕರಣ ಪತ್ತೆಯಾದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಜಾಲಿ ಪ.ಪಂ ಮತ್ತು ಪುರಸಭೆ ಮಹತ್ವದ ಕಾರ್ಯನಿರ್ವಹಿಸಿದೆ. ಪರಿಣಾಮ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ನವದೆಹಲಿ ಪ್ರಶಂಸೆ ವ್ಯಕ್ತಪಡಿಸಿ ಪ್ರಶಂಸನಾ ಪತ್ರ ನೀಡಿದೆ.ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಟಿ.ದೇವರಾಜು, ಜಾಲಿ ಪ.ಪಂ ಮುಖ್ಯಾಧಿಕಾರಿ ವೇಣುಗೋಪಾಲ ಶಾಸ್ತ್ರಿ ವೈಯಕ್ತಿಕವಾಗಿ ಪ್ರಶಂಸನಾ ಪತ್ರ ಪಡೆದಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.