ಭಟ್ಕಳ: ಗುಜರಾತ್ನ ಕೆಡಾ ಲೋಕಸಭಾ ಕ್ಷೇತ್ರದ ಸಂಸದ ದೇವಸಿಂಹ್ ಚೌವ್ಹಾಣ್ ಹಾಗೂ ಅವರ ಕುಟುಂಬದವರು ರಾಜ್ಯದ ಪ್ರಸಿದ್ಧ ಮುರ್ಡೇಶ್ವರ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ಕೆಡಾ ಲೋಕಸಭಾ ಕ್ಷೇತ್ರದ ಸಂಸದ ದೇವಸಿಂಹ್ ಚೌವ್ಹಾಣ್ ಹಾಗೂ ಅವರ ಕುಟುಂಬದವರು ಮೊದಲು ಮಾತೋಬಾರನ ದರ್ಶನ ಪಡೆದು ನಂತರ ಮುರ್ಡೇಶ್ವರದ ಸೊಬಗನ್ನು ವಿಕ್ಷೀಸಿದರು.
ಭಟ್ಕಳ ಬಿಜೆಪಿ ಘಟಕ ಗಜರಾತ್ ಸಂಸದರನ್ನು ಸ್ವಾಗತಿಸಿ ಆತಿಥ್ಯ ನೀಡಿತು. ಈ ಸಂದರ್ಭದಲ್ಲಿ ಭಟ್ಕಳ ಬಿಜೆಪಿ ಘಟಕದ ತಾಲೂಕು ಅಧ್ಯಕ್ಷ ಸುಬ್ರಾಯ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಭಾಸ್ಕರ ದೈಮನೆ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಿರಣ್ ನಾಯ್ಕ ಹಾಗೂ ಯುವ ಮೋರ್ಚಾ ಉಪಾಧ್ಯಕ್ಷ ಜಯಂತ ಮೂಡಲಮನೆ ಸೇರಿದಂತೆ ಇತರರು ಇದ್ದರು.