ETV Bharat / state

ನಿಯಮ ಉಲ್ಲಘಿಂಸಿದ್ದಲ್ಲದೇ ಪೊಲೀಸರಿಗೆ ಆವಾಜ್​ ಹಾಕಿದವನ ಮೇಲೆ ಕೇಸ್​​

author img

By

Published : Mar 28, 2020, 1:59 PM IST

Case filed on the one who broke rule in Bhatkal
ನಿಯಮ ಉಲ್ಲಘಿಂಸಿದ್ದಲ್ಲದೇ ಪೊಲೀಸರಿಗೆ ಅವಾಜ್​ ಹಾಕಿದವನ ಮೇಲೆ ಪ್ರಕರಣ ದಾಖಲು

ಕೊರೊನಾ ‌ವೈರಸ್ ತಡೆಗೆ ದೇಶಾದ್ಯಂತ ಲಾಕ್ ಡೌನ್‌ ಇದ್ದರೂ ರಸ್ತೆ ಮೇಲೆ ಅನವಶ್ಯಕವಾಗಿ ತಿರುಗಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ‌ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಟ್ಕಳ: ಕೊರೊನಾ ‌ವೈರಸ್ ತಡೆಗೆ ದೇಶಾದ್ಯಂತ ಲಾಕ್ ಡೌನ್‌ ಇದ್ದರೂ ರಸ್ತೆ ಮೇಲೆ ಅನಾವಶ್ಯಕವಾಗಿ ತಿರುಗಾಟ ನಡೆಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ‌ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Case filed on the one who broke rule in Bhatkal
ನಿಯಮ ಉಲ್ಲಘಿಂಸಿದ್ದಲ್ಲದೇ ಪೊಲೀಸರಿಗೆ ಅವಾಜ್​ ಹಾಕಿದವನ ಮೇಲೆ ಪ್ರಕರಣ ದಾಖಲು

ಪಟ್ಟಣದ ತಖಿಯಾ ಸ್ಟ್ರೀಟ್ ನ 39 ವರ್ಷದ ಕೆ. ಎಂ ಶಾಜೀರ್ ಎಂಬಾತನ ಮೇಲೆ ಪೊಲೀಸರು ಪ್ರಕರಣ ‌ದಾಖಲಿಸಿದ್ದಾರೆ. ಭಟ್ಕಳದಲ್ಲಿ ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾದ ಹಿನ್ನೆಲೆ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ತುರ್ತು ಘೋಷಣೆಯಾಗಿತ್ತು. ಇದಾದ ನಂತರ ಯಾರೂ ಮನೆಯಿಂದ ಹೊರಬರದಂತೆ, ಅನವಶ್ಯಕವಾಗಿ ಓಡಾಡದಂತೆ ಸೂಚನೆ‌ ನೀಡಲಾಗಿತ್ತು. ಆದರೆ, ಶಾಜೀರ್​ ಅನವಶ್ಯಕವಾಗಿ ಬೈಕ್ ‌ನಲ್ಲಿ ತಿರುಗಾಟ ನಡೆಸುತ್ತಿದ್ದಿದ್ದನ್ನು ಗಮನಿಸಿದ ಪೊಲೀಸರು ಈ ಹಿಂದೆಯೇ ಎರಡು ಬಾರಿ ವಾರ್ನಿಂಗ್ ಸಹ ಮಾಡಿದ್ದರು. ಆದರೂ ಲೆಕ್ಕಿಸದೇ, ಮಾಸ್ಕ್ ಧರಿಸದೇ ‌ತಿರುಗಾಟ ನಡೆಸುತ್ತಿದ್ದ ಶಾಜೀರ್​ ಅನ್ನು ಪೊಲೀಸರು ತಡೆದು ಪ್ರಶ್ನಿಸಿದಾಗ ಪೊಲೀಸರಿಗೇ ಬೈದಿದ್ದಾನೆ ಎನ್ನಲಾಗಿದೆ.

ತನಗೆ ವಿನಾಕಾರಣ ಲಾಠಿಯಿಂದ ಹೊಡೆದಿದ್ದಾರೆಂದು ಪೊಲೀಸರ ಮೇಲೆ ಮೇಲಧಿಕಾರಿಗಳಿಗೆ ದೂರು ಕೊಡುತ್ತೇನೆ ಎಂದು ಬೆದರಿಕೆ ಹಾಕಿದ ಹಿನ್ನೆಲೆ ಆರೋಪಿಯ ವಿರುದ್ದ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 52/2020, ಕಲಂ 188, 270, 504, 506 ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.