ಭಟ್ಕಳ: ಜ.4ರಂದು ಬೆಳಗ್ಗೆ ತಾಲೂಕಿನ ಬೆಳಕೆ ಪಂಚಾಯತ್ ವ್ಯಾಪ್ತಿಯ ಕಂಚಿಕೇರಿಯ ನಾಗರಾಜ ಗಣಪತಿ ಹೆಗಡೆ ಎಂಬುವವರ ಮನೆಯಲ್ಲಿ ಯಾರು ಇಲ್ಲದ ವೇಳೆ ಹಾಡಹಗಲೇ ಮನೆ ಬಾಗಿಲು ಮುರಿದು ನಗದು ಹಾಗೂ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಮೀಣ ಠಾಣಾ ಪೊಲೀಸರ ಕ್ಷೀಪ್ರ ತನಿಖೆ ನಡೆಸಿದ್ದು ಆರೋಪಿಯನ್ನು ಮಾಲು ಸಮೇತ ಬಂಧಿಸಿದ್ದಾರೆ.
ಕುಂದಾಪುರದ ಕೋಟೇಶ್ವರದ ವಿಲ್ಸನ್ ಅಲಿಯಾಸ ಬಾಳಾ ತಂದೆ ಪಿಯದಾದ್ ಲೂಪಿಸ್(28) ಬಂಧಿತ ಆರೋಪಿ. ಜ.4ರಂದು ಬೆಳಿಗ್ಗೆ 8.30 ಸುಮಾರಿಗೆ ಮನೆಯ ಬಾಗಿಲು ಮುರಿದು 75 ಸಾವಿರ ನಗದು ಹಾಗೂ 48 ಸಾವಿರ ಮೌಲ್ಯದ (16 ಗ್ರಾಂ ತೂಕದ)ಬಂಗಾರದ ಚೈನು, ಎರಡು ಉಂಗುರ, ಒಂದು ಜೊತೆ ಕಿವಿಯೋಲೆ ಕಳುವು ಮಾಡಲಾಗಿತ್ತು. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಮನೆಯ ಮಾಲೀಕ ನಾಗರಾಜ ಗಣಪತಿ ಹೆಗಡೆ ದೂರು ನೀಡಿದ್ದರು.
ಆರೋಪಿತನಿಂದ ಒಟ್ಟು 38.54 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.