ETV Bharat / state

ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದ ಯುವಕ ನಾಪತ್ತೆ ; ಮುಂದುವರಿದ ಹುಡುಕಾಟ

author img

By

Published : May 30, 2022, 2:36 PM IST

young man miss who went to a party with friends in Karwar, young man missing in Uttara Kannada, Uttara Kannada crime news, ಕಾರವಾರದಲ್ಲಿ ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗಿದ್ದ ಯುವಕ ನಾಪತ್ತೆ, ಉತ್ತರ ಕನ್ನಡದಲ್ಲಿ ಯುವಕ ನಾಪತ್ತೆ, ಉತ್ತರ ಕನ್ನಡ ಅಪರಾಧ ಸುದ್ದಿ,
ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದ ಯುವಕ ನಾಪತ್ತೆ

ಸಂಜೆ 4 ಗಂಟೆಗೆ ಮಗನ ಜೊತೆಗೆ ತೆರಳಿದ್ದ ವಿನಾಯಕ ಪೆಡ್ನೇಕರ್​ ಮನೆಯ ಬಳಿಗೆ ಬಂದು ದಿಗಂಬರ ಹಳ್ಳದಲ್ಲಿ ಸ್ನಾನಕ್ಕೆ ಹೋದಾಗ ಮುಳುಗಿದ್ದಾನೆ. ಅವನನ್ನು ಮೇಲೆತ್ತಲು ಸಾಧ್ಯವಾಗಿಲ್ಲ. ಕೂಡಲೇ ಅವನೊಂದಿಗೆ ತೆರಳಿ ಹುಡುಕಾಟ ನಡೆಸಿದ್ರೂ ಮಗ ಪತ್ತೆಯಾಗಿಲ್ಲ‌..

ಕಾರವಾರ : ಸ್ನೇಹಿತರೊಂದಿಗೆ ಪಾರ್ಟಿಗೆಂದು ತೆರಳಿದ್ದ ಯುವಕನೊಬ್ಬ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಘಟನೆ ಜೊಯಿಡಾ ತಾಲೂಕಿನ ಅಣಶಿಯಲ್ಲಿ ನಡೆದಿದೆ. ಅಣಶಿಯ ದಿಗಂಬರ ಮಡಿವಾಳ (23) ಕಾಣೆಯಾದ ಯುವಕ ಎಂದು ಗುರುತಿಸಲಾಗಿದೆ.

ಸ್ನೇಹಿತ ಉದಯ ಪೆಡ್ನೇಕರ್​ ಹುಟ್ಟುಹಬ್ಬವಿದೆ. ಅಣಶಿ ಫಾರೆಸ್ಟ್ ಡಿಪಾರ್ಟಮೆಂಟ್​ನವರು ಕರೆಯುತ್ತಿದ್ದಾರೆ. ನೇಚರ್ ಕ್ಯಾಂಪ್ ಬಳಿ ಇರುವ ಕಾಪೋಯಿ ಹಳ್ಳದ ಬಳಿ ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಗೆ ಹೋಗಿ ಊಟ ಮಾಡಿ ಬರುತ್ತೇನೆ ಎಂದು ದಿಗಂಬರ ಬೆಳಗ್ಗೆ ಹೋಗಿದ್ದಾನೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಸಂಜೆ 4 ಗಂಟೆಗೆ ಮಗನ ಜೊತೆಗೆ ತೆರಳಿದ್ದ ವಿನಾಯಕ ಪೆಡ್ನೇಕರ್​ ಮನೆಯ ಬಳಿಗೆ ಬಂದು ದಿಗಂಬರ ಹಳ್ಳದಲ್ಲಿ ಸ್ನಾನಕ್ಕೆ ಹೋದಾಗ ಮುಳುಗಿದ್ದಾನೆ. ಅವನನ್ನು ಮೇಲೆತ್ತಲು ಸಾಧ್ಯವಾಗಿಲ್ಲ. ಕೂಡಲೇ ಅವನೊಂದಿಗೆ ತೆರಳಿ ಹುಡುಕಾಟ ನಡೆಸಿದ್ರೂ ಮಗ ಪತ್ತೆಯಾಗಿಲ್ಲ‌.

ಹೀಗಾಗಿ, ನಮ್ಮ ಮಗನನ್ನು ಹುಡುಕಿಕೊಡುವಂತೆ ಆತನ ತಂದೆ ಶಿವಾನಂದ ಮಡಿವಾಳ ದೂರು ನೀಡಿದ್ದಾರೆ. ಈ ಬಗ್ಗೆ ಜೋಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.