ETV Bharat / state

ಲಾಡ್ಜ್​ನಲ್ಲಿ ಕ್ವಾರಂಟೈನ್​​ ಆಗಿದ್ದ ಯುವಕ ನೇಣಿಗೆ ಶರಣು; ಕಾರಣ ನಿಗೂಢ!

author img

By

Published : Apr 23, 2021, 1:46 PM IST

Updated : Apr 23, 2021, 2:45 PM IST

Quarantine young man committed suicide, Quarantine young man committed suicide in Murdeshwar, Murdeshwar crime news, ಕ್ವಾರಂಟೈನ್​ನಲ್ಲಿದ್ದ ಯುವಕ ಆತ್ಮಹತ್ಯೆ, ಮುರ್ಡೇಶ್ವರದಲ್ಲಿ ಕ್ವಾರಂಟೈನ್​ನಲ್ಲಿದ್ದ ಯುವಕ ಆತ್ಮಹತ್ಯೆ, ಮುರ್ಡೇಶ್ವರ ಅಪರಾಧ ಸುದ್ದಿ,
ಲಾಡ್ಜ್​ನಲ್ಲಿ ಕ್ಯಾರಂಟೈನ್​ ಆಗಿದ್ದ ಯುವಕ ನೇಣಿಗೆ ಶರಣು

ಲಾಡ್ಜ್​ವೊಂದರಲ್ಲಿ ಕ್ವಾರಂಟೈನ್​ ಆಗಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದಲ್ಲಿ ನಡೆದಿದೆ.

ಮುರ್ಡೇಶ್ವರ: ಪುಣೆಯಿಂದ ಊರಿಗೆ ಮರಳಿ ಮುರುಡೇಶ್ವರದ ಲಾಡ್ಜ್​ನಲ್ಲಿ ಕ್ವಾರಂಟೈನ್​ಲ್ಲಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುರ್ಡೇಶ್ವರದಲ್ಲಿ ನಡೆದಿದೆ.

ಭಟ್ಕಳ ತಾಲೂಕಿನ ಬೆಂಗ್ರೆ ನಿವಾಸಿ 28 ವರ್ಷದ ವೆಂಕಟೇಶ ಸುಕ್ರಯ್ಯ ದೇವಾಡಿಗ ಕಳೆದ 13 ವರ್ಷಗಳಿಂದ ಪುಣೆಯ ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಊರಿನಲ್ಲಿ ಏನಾದರು ಕಾರ್ಯಕ್ರಮ ಇದ್ದರೆ ವರ್ಷಕ್ಕೆ ಒಂದು ಬಾರಿ ಊರಿಗೆ ಬಂದು ಹೋಗುತಿದ್ದನಂತೆ.

ವೆಂಕಟೇಶ 5-6 ದಿನಗಳ ಹಿಂದೆ ಪುಣೆಯಿಂದ ಮುರ್ಡೇಶ್ವರಕ್ಕೆ ಬಂದಿದ್ದ. ಪುಣೆಯಲ್ಲಿ ಕೊರೊನಾ ಹೆಚ್ಚಾಗಿರುವುದರಿಂದ ಮನೆಗೆ ಹೋಗದೆ ಇಲ್ಲಿನ ಪೆಟ್ರಿಶಿಯಾ ಲಾಡ್ಜಿನಲ್ಲಿ ರೂಮ್ ಮಾಡಿಕೊಂಡು ಕ್ವಾರಂಟೈನ್​ ಆಗಿದ್ದ. ಈ ನಡುವೆ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ರಾತ್ರಿ ಲಾಡ್ಜಿನ ಕೊಠಡಿಯ ಕಿಟಕಿಗೆ ಟವೆಲ್​ ಕಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಮೃತನ ಸಹೋದರ ಗಣಪತಿ ಸುಕ್ರಯ್ಯ ದೇವಾಡಿಗ ಮುರುಡೇಶ್ವರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Last Updated :Apr 23, 2021, 2:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.