ETV Bharat / state

ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 10 ಎಮ್ಮೆಗಳ ರಕ್ಷಣೆ..... ಹೇಗಿತ್ತು ಚೇಸಿಂಗ್​?

author img

By

Published : Nov 20, 2019, 11:22 PM IST

ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 10 ಎಮ್ಮೆಗಳ ರಕ್ಷಣೆ

ಮೀನು ತುಂಬುವ ಕಂಟೇನರ್​​ ವಾಹನದಲ್ಲಿ ಭಟ್ಕಳದ ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಭಟ್ಕಳ/ಉತ್ತರ ಕನ್ನಡ: ಅಂಕೋಲಾ ಹೊನ್ನಾವರ ಭಾಗದಿಂದ ಭಟ್ಕಳದ ಕಸಾಯಿಖಾನೆಗೆ ಸಾಗಿಸುತ್ತಿದ್ದ 10 ಎಮ್ಮೆ ಹಾಗೂ ಒಂದು ಕರುವನ್ನು ಪೊಲೀಸರು ರಕ್ಷಿಸಿದ್ದಾರೆ.

ಕಸಾಯಿಖಾನೆಗೆ ಸಾಗಣೆ ಮಾಡುವ ಉದ್ದೇಶದಿಂದ ಮೀನು ತುಂಬುವ ಲಾರಿ(ಕಂಟೇನರ್​​)ಯಲ್ಲಿ 10 ಎಮ್ಮೆ ಹಾಗೂ ಒಂದು ಕರು ಅಕ್ರಮವಾಗಿ ಸಾಗಣೆ ಮಾಡುವ ವೇಳೆ ಮಂಕಿ ಪಿಎಸ್​​ಐ ಅವರ ಖಚಿತ ಮಾಹಿತಿ ಮೇರೆಗೆ ಮಂಕಿ ಪೊಲೀಸರು ಹಾಗೂ ಭಟ್ಕಳ ಪೊಲೀಸರು ಕಾರ್ಯಾಚರಣೆ ನಡೆಸಿ ಭಟ್ಕಳದ ಡೊಂಗರಪಳ್ಳಿ ಸಮೀಪ ಮೀನು ಲಾರಿಯನ್ನು ಅಡ್ಡಗಟ್ಟಿ ಜಾನುವಾರುಗಳನ್ನು ವಶಕ್ಕೆ ಪಡೆಯಲಾಯಿತು.

ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 10 ಎಮ್ಮೆಗಳ ರಕ್ಷಣೆ

ಈ ವೇಳೆ, ಲಾರಿ ಚಾಲಕ ಬ್ಯಾರಿಕೇಡ್​​ ಲೆಕ್ಕಿಸದೇ ಪೊಲೀಸರ ಮೇಲೆ ನುಗ್ಗಿಸಿದ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಶಿರಾಲಿ ಚೆಕ್​​ಪೋಸ್ಟ್​ಗೆ ಪೊಲೀಸರು ಮಾಹಿತಿ ರವಾನಿಸಿದ್ದಾರೆ. ಆದರೆ ಶಿರಾಲಿಯಲ್ಲಿಯೂ ಚಾಲಕ ಬ್ಯಾರಿಕೇಡ್​​​ಗೆ ನುಗ್ಗಿಸಿ ಲಾರಿಯ ಮುಂದಿದ್ದ ಖಾಸಗಿ ಅವರ ಬುಲೋರೋ ವಾಹನಕ್ಕೆ ಡಿಕ್ಕಿ ಹೊಡೆದು ಅಲ್ಲಿಂದಲೂ ಪರಾರಿಯಾಗಿದ್ದರು. ಆದರೆ ಇದಾಗ ಬಳಿಕ ಭಟ್ಕಳ ಪೊಲೀಸರು ಲಾರಿಯನ್ನು ಹಿಂಬಾಲಿಸಿ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ್ದಾರೆ. ಭಟ್ಕಳದ ಡೊಂಗರಪಳ್ಳಿ ಬಳಿ ಅಡ್ಡಗಟ್ಟಿ ವಾಹನ ಚಾಲಕನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ವಾಹನದಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದಾರೆ. ಈ ನಡುವೆ ಮೀನು ಲಾರಿಯನ್ನು ಭಟ್ಕಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Intro:ಭಟ್ಕಳ: ಅಂಕೋಲಾ ಹೊನ್ನಾವರ ಭಾಗದಿಂದ ಭಟ್ಕಳದ ಕಸಾಯಿಖಾನೆಗೆ ಸಾಗಾಟ ಮಾಡುವ ಉದ್ದೇಶದಿಂದ ಮೀನು ತುಂಬುವ ಲಾರಿ(ಕಂಟೇನರ)ಯಲ್ಲಿ 10 ಎಮ್ಮೆ ಹಾಗೂ ಒಂದು ಕರುವನ್ನು ಅಕ್ರಮವಾಗಿ ಸಾಗಾಟ ಮಾಡುವ ವೇಳೆ ಮಂಕಿ ಪಿಎಸೈ ಅವರ ಖಚಿತ ಮಾಹಿತಿ ಮೇರೆಗೆ ಮಂಕಿ ಪೊಲೀಸರು ಹಾಗೂ ಭಟ್ಕಳ ಪೊಲೀಸರ ಕ್ಷೀಪ್ರ ಗತಿಯ ಕಾರ್ಯಚರಣೆಯಿಂದ ಬುಧವಾರದಂದು ಬೆಳ್ಳಂಬೆಳಗ್ಗೆ ಭಟ್ಕಳದ ಡೊಂಗರಪಳ್ಳಿ ಸಮೀಪ ಮೀನು ಲಾರಿಯನ್ನು ಅಡ್ಡಗಟ್ಟು ಜಾನುವಾರನ್ನು ವಶಕ್ಕೆ ಪಡೆಯಲಾಯಿತು.

Body:ವಾಹನ ಸಂಖ್ಯೆ ಕೆ.ಎ.47 5375 ರಲ್ಲಿ ಅಕ್ರಮವಾಗಿ 10 ಎಮ್ಮೆ ಹಾಗೂ 1 ಕರುವನ್ನು ಸಾಗಾಟ ಮಾಡುತ್ತಿದ್ದಾರೆಂಬ ಮಾಹಿತಿಯನ್ನಾಧರಿಸಿದ ಮಂಕಿ ಠಾಣಾ ಪಿಎಸೈ ಪಿ.ಬಿ. ಕೊಣ್ಣುರು ಅವರು ಮಂಕಿಯಲ್ಲಿ ಹೆದ್ದಾರಿಗೆ ಅಡ್ಡಲಾಗಿ ಬ್ಯಾರಿಗೇಟ್ಸನ್ನು ಅಳವಡಿಸಿ ವಾಹನ ತಡೆಗೆ ಯತ್ನಿಸಿದ್ದಾರೆ. ಈ ವೇಳೆ ಲಾರಿ ಚಾಲಕ ಬ್ಯಾರಿಗೇಟ್ಸನ್ನು ಲೆಕ್ಕಿಸದೇ ಪೊಲೀಸರ ಮೇಲೆ ನುಗ್ಗಿಸಿದ ಮುನ್ನಡೆದ ಹಿನ್ನೆಲೆ ಶಿರಾಲಿಯ ಪೊಲೀಸ ಚೆಕ್‍ಪೋಸ್ಟಗೆ ಮಾಹಿತಿ ರವಾನಿಸಿದ್ದಾರೆ.



ಶಿರಾಲಿಯಲ್ಲಿಯೂ ಸಹ ಲಾರಿ ತಡೆಗೆ ಬ್ಯಾರಿಗೇಟ್ಸ ಅಳವಡಿಸಿ ಆರೋಪಿತರ ಸೆರೆಗೆ ಕಾರ್ಯಾಚರಣೆ ಹಾಕಿದ್ದು ಇಲ್ಲಿಯೂ ಸಹ ಲಾರಿ ಚಾಲಕ ಬ್ಯಾರಿಗೇಟ್ಸ ನುಗ್ಗಿಸಿ ಲಾರಿಯ ಮುಂದಿದ್ದ ಖಾಸಗಿ ಅವರ ಬುಲೋರೋ ವಾಹನಕ್ಕೆ ಢಿಕ್ಕಿ ಹೊಡೆದು ಅಲ್ಲಿಂದಲೂ ಪರಾರಿಯಾಗಿದ್ದಾರೆ. ಆದರೆ ಇದಾಗ ಬಳಿಕ ಮಂಕಿ ಹಾಗೂ ಭಟ್ಕಳ ಪೊಲೀಸರು ಆರೋಪಿಯ ಸೆರೆ ಮಾಡಲೇಬೇಕೆಂದು ಮತ್ತೆ ಮೂರನೇ ಬಾರಿ ಜಾನುವಾರು ಸಾಗಿಸುತ್ತಿದ್ದ ಮೀನು ಲಾರಿಯನ್ನು ವೇಗದಲ್ಲಿ ಓವರಟೇಕ ಮಾಡಿ ಸಿನಿಮೀಯ ರೀತಿಯಲ್ಲಿ ಚೆಸ್ ಮಾಡಿ ಭಟ್ಕಳದ ಡೊಂಗರಪಳ್ಳಿ ಬಳಿ ಅಡ್ಡಗಟ್ಟಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದು ಇದರಲ್ಲಿ ಲಾರಿಯಲ್ಲಿದ್ದ ಆರೋಪಿಗಳು ವಾಹನ ಅಲ್ಲಿಯೇ ಬಿಟ್ಟಿ ಪರಾರಿಯಾಗಿದ್ದಾರೆ.



ಪೊಲೀಸರ ಕ್ಷೀಪ್ರಗತಿಯ ಕಾರ್ಯಚರಣೆಯಿಂದ ಮೀನು ಲಾರಿಯಲ್ಲಿದ 10 ಎಮ್ಮೆ ಒಂದು ಕರುವನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಮೀನು ಲಾರಿಯನ್ನು ಭಟ್ಕಳ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು ಜಾನುವಾರನ್ನು ಠಾಣಾ ವ್ಯಾಪ್ತಿಯಲ್ಲಿ ಕಟ್ಟಿ ಹಾಕಲಾಗಿದೆ.



ಘಟನೆಗೆ ಸಂಬಂಧಿಸಿದಂತೆ ಮಂಕಿಯಲ್ಲಿ ಬ್ಯಾರಿಗೇಟ್ಸ ನುಗ್ಗಿದ ಹಿನ್ನೆಲೆ ಮಂಕಿ ಠಾಣೆಯಲ್ಲಿ, ಶಿರಾಲಿ ಪೊಲೀಸ ಚೆಕ್ಪೋಸ್ಟ ಬಳಿಯೂ ಬ್ಯಾರಿಗೇಟ್ಸಗೆ ಢಿಕ್ಕಿ ಮಾಡಿ ಪೊಲೀಸರ ಮೇಲೆ ನುಗ್ಗಿಸಲು ಯತ್ನಿಸಿದ ಹಿನ್ನೆಲೆ ಪ್ರತ್ಯೇಕ ಪ್ರಕರಣವನ್ನು ದಾಖಲಿಸಲಾಗಿದ್ದು, ಅಕ್ರಮ ಜಾನುವಾರು ವಶಕ್ಕೆ ಸಂಬಂಧಿಸಿಂತೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಟ್ಕಳದಲ್ಲಿ ಅಕ್ರಮ ಜಾನುವಾರು ಸಾಗಾಟ ಪ್ರಕರಣ ನಡೆದಿರುವುದು ಮೂರು ಪ್ರಕರಣವಾಗಿದ್ದು ಈ ಬಗ್ಗೆ ಅಕ್ರಮ ತಡೆಗೆ ಪೊಲೀಸರು ಕ್ರಮ ವಹಿಸಬೇಕಾಗಿದೆ.‌Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.