ತುಮಕೂರು: ಒಂದೆಡೆ ಅರಣ್ಯ ಇಲಾಖೆ ಅಧಿಕಾರಿಗಳು ನರಭಕ್ಷಕ ಚಿರತೆಯನ್ನು ಸೆರೆ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಇನ್ನೊಂದೆಡೆ ಚಿರತೆ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವುದು ಮುಂದುವರೆದಿದೆ.
ಇದಕ್ಕೆ ಸಾಕ್ಷಿ ಎಂಬಂತೆ ತುಮಕೂರು ತಾಲೂಕು ಹೊಳಕಲ್ ಗ್ರಾಮದ ಬಳಿ ಹೊಲದಿಂದ ಮನೆಕಡೆಗೆ ಬರುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ಮಾಡಿದೆ. ಮನೋಹರ್ ಎಂಬುವರ ಮೇಲೆ ಹಿಂಬದಿಯಿಂದ ದಾಳಿ ಮಾಡಿರುವ ಚಿರತೆ ಪರಚಿ ಕಾಲ್ಕಿತ್ತಿದೆ.
ನಂತರ ಸಮೀಪದ ಪೊದೆಯೊಳಗೆ ಅವಿತುಕೊಂಡ ಚಿರತೆಯನ್ನು ಓಡಿಸಲು ಗ್ರಾಮಸ್ಥರು ಚಿರಾಡಿ ತೊಡಗಿದರು. ಸಾಕಷ್ಟು ಹೊತ್ತು ಪೊದೆಯಲ್ಲಿಯೇ ಅವಿತುಕೊಂಡಿದ್ದ ಚಿರತೆ ಸ್ವಲ್ಪ ಹೊತ್ತಿನ ನಂತರ ಸಮೀಪದ ಪೊದೆಯ ಬಳಿ ಓಡಿ ಹೋಗಿ ಕಣ್ಮರೆಯಾಗಿದೆ.