ETV Bharat / state

ಚುನಾವಣೆಯಲ್ಲಿ ಸೋತಿದ್ದಕ್ಕೆ ಸಿದ್ದರಾಮಯ್ಯ ಲೋಕಾಭಿರಾಮದಲ್ಲಿ ಮಾತನಾಡಿದ್ದಾರೆ: ಪರಮೇಶ್ವರ್

author img

By

Published : Dec 22, 2020, 3:38 PM IST

ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್​
ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್​

ನಾವು ರಾಜಕಾರಣದಲ್ಲಿ ಒಂದು ಹಂತ ತಲುಪಿದ್ದೇವೆ. ನಾವೇನೇ ಹೇಳಿದ್ರೂ ಜನ ಅದನ್ನ ಸೂಕ್ಷ್ಮ ದೃಷ್ಟಿಯಿಂದ ನೋಡ್ತಾರೆ. ಹಾಗಾಗಿ ನಾವು ಏನೇ ಮಾತಾಡ್ಬೇಕಾದ್ರೆ ಯಾವುದೇ ಪಕ್ಷದ ಮುಖಂಡರಿರಲಿ ಅಥವಾ ನಮ್ಮ ಪಕ್ಷದವರೆ ಇರಲಿ. ನನ್ನ ಅನಿಸಿಕೆ ಏನು ಅಂದ್ರೆ ನಮ್ಮ ಮಾತು ಸಂಯಮದಿಂದ ಇರಬೇಕಾಗುತ್ತದೆ ಎಂದು ಡಾ.ಜಿ. ಪರಮೇಶ್ವರ್​ ಹೇಳಿದ್ದಾರೆ.

ತುಮಕೂರು: ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಸೋತಿದ್ದಕ್ಕೆ ಲೋಕಭಿರಾಮದಲ್ಲಿ ಮಾತನಾಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್​ ಹೇಳಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ತುಮಕೂರಿನಲ್ಲಿ ಮಾತನಾಡಿದ ಅವರು, ಏನ್ರಯ್ಯಾ ಎಲ್ರೂ ಸೇರಿ ನನ್ನನ್ನು ಸೋಲಿಸಿ ಬಿಟ್ರಲ್ಲ. ಅದನ್ನ ರಾಜಕೀಯ ಮಾಡಿ, ರಾಜ್ಯದ ಚರ್ಚೆ ಎನ್ನುವ ರೀತಿಯಲ್ಲಿ ತೆಗೆದುಕೊಂಡು ಹೋಗುವುದು ಬೇಡ ಅನ್ನೋದು ನನ್ನ ಅನಿಸಿಕೆ. ನನಗೆ ಆಶ್ಚರ್ಯ ಆಗುತ್ತೆ, ನಾವು ರಾಜಕಾರಣದಲ್ಲಿ ಒಂದು ಹಂತ ತಲುಪಿದ್ದೀವಿ. ನಾವೇನೇ ಹೇಳಿದ್ರೂ ಜನ ಅದನ್ನ ಸೂಕ್ಷ್ಮ ದೃಷ್ಟಿಯಿಂದ ನೋಡ್ತಾರೆ. ಹಾಗಾಗಿ ನಾವು ಏನೇ ಮಾತಾನಬೇಕಾದರೂ ಯಾವುದೇ ಪಕ್ಷದ ಮುಖಂಡರಿರಲಿ ಅಥವಾ ನಮ್ಮ ಪಕ್ಷದವರೇ ಇರಲಿ. ನನ್ನ ಅನಿಸಿಕೆ ಏನು ಅಂದ್ರೆ ನಮ್ಮ ಮಾತು ಸಂಯಮದಿಂದ ಇರಬೇಕಾಗುತ್ತದೆ ಎಂದರು.

ಓದಿ:ಜನವರಿ 9ಕ್ಕೆ ರೈಲ್‌ ಬಂದ್‌ ಚಳವಳಿ ಮಾಡುತ್ತೇವೆ: ವಾಟಾಳ್ ಘೋಷಣೆ

ಸುಮ್ನೆ ನಾವು ಜನಗಳಿಗೆ ಎಂಟರ್ಟೈನ್ಮೆಂಟ್ ಆಗಬಾರದು. ವಿ ಶುಡ್ ನಾಟ್ ಬಿಕಂ ಎಂಟರ್ಟೈನ್ಮೆಂಟ್ ಮೆಟಿರಿಯಲ್ ಎಂದರು. ದೇವೇಗೌಡರ ಸೋಲಿಗೆ ಅತೀಯಾದ ಆತ್ಮವಿಶ್ವಾಸ ಕಾರಣ ಎಂಬ ಎಸ್.ಆರ್. ಶ್ರೀನಿವಾಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಹೇಳೋದನೆಲ್ಲಾ ಹೇಳ್ತಾರೆ. ಅದಕ್ಕೆಲ್ಲ ಪ್ರತಿಕ್ರಿಯೆ ನಿಡೋಕಾಗುತ್ತಾ. ಚುನಾವಣೆನೂ ಆಯ್ತು ಫಲಿತಾಂಶನೂ ಬಂತು. ನಾವ್ಯಾರಿಗೋ ಹೇಳಿ ಬಿಡಬಹುದು, ಅದಕ್ಕೆಲ್ಲ ಪ್ರತಿಕ್ರಿಯೆ ನೀಡೋಕೆ ಆಗಲ್ಲ, ಅದೆಲ್ಲ ಚೆನ್ನಾಗಿರಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.