ETV Bharat / state

ಮಾವಿನ ಹಣ್ಣು ನೀಡಿ ಮಕ್ಕಳ ಬಾಯಿ ಸಿಹಿಯಾಗಿಸಿದ ಸಿದ್ದಗಂಗಾ ಶ್ರೀ

author img

By

Published : Jul 4, 2021, 8:11 PM IST

Siddaganga Swamiji distributes mangoes
ಮಕ್ಕಳಿಗೆ ಮಾವಿನ ಹಣ್ಣು ವಿತರಿಸಿದ ಸಿದ್ದಗಂಗಾ ಸ್ವಾಮೀಜಿ

ಸುಮಾರು 250 ಅನಾಥ ಮಕ್ಕಳು ಕೊರೊನಾ ಸಂದರ್ಭದಲ್ಲಿ ಮಠದಲ್ಲಿಯೇ ಆಶ್ರಯ ಪಡೆದಿದ್ದಾರೆ. ಈ ಮಕ್ಕಳಿಗೆ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾವಿನ ಹಣ್ಣು ನೀಡಿ ಬಾಯಿ ಸಿಹಿಯಾಗಿಸಿದರು.

ತುಮಕೂರು: ಸಿದ್ಧಗಂಗಾ ಮಠದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಾವಿನ ಮರಗಳಿವೆ. ತೋಟದಲ್ಲಿ ಪ್ರತಿ ವರ್ಷ ಮಾವು ಕಟಾವಿಗೆ ಬಂದ ನಂತರ ಅವುಗಳನ್ನು ಮಠದಲ್ಲಿನ ಮಕ್ಕಳಿಗೆ ವಿತರಣೆ ಮಾಡಲಾಗುತ್ತದೆ. ಈ ಬಾರಿ ಕೊರೊನಾ ಸೋಂಕು ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ಮಕ್ಕಳು ತಮ್ಮ ಊರುಗಳಿಗೆ ತೆರಳಿದ್ದಾರೆ.

ಆದರೆ ಪೋಷಕರಿಲ್ಲದ ಸುಮಾರು 250 ಅನಾಥ ಮಕ್ಕಳು ಕೊರೊನಾ ಸಂದರ್ಭದಲ್ಲಿಯೂ ಮಠದಲ್ಲಿಯೇ ಆಶ್ರಯ ಪಡೆದಿದ್ದಾರೆ. ಆ ಮಕ್ಕಳಿಗೆ ಸಿದ್ದಲಿಂಗ ಸ್ವಾಮೀಜಿ ಮಾವಿನ ಹಣ್ಣನ್ನು ನೀಡಿ ಬಾಯಿ ಸಿಹಿ ಮಾಡಿದ್ದಾರೆ. ತೋಟದಲ್ಲಿನ ಬಹುತೇಕ ಮಾವಿನ ಹಣ್ಣನ್ನು ಪ್ರತಿ ವರ್ಷ ಮಠದ ಸಾವಿರಾರು ಮಕ್ಕಳಿಗೆ ಊಟದ ಜೊತೆಯಲ್ಲಿ ನೀಡಲಾಗುತ್ತಿತ್ತು. ಈ ಬಾರಿ ಮಕ್ಕಳು ಮಠದಲ್ಲಿಲ್ಲದ ಕಾರಣ ಇರುವಂತಹ ಸಿಬ್ಬಂದಿ ಹಾಗೂ ಮಕ್ಕಳಿಗೆ ಸ್ವಾಮೀಜಿಯೇ ಮುಂದೆ ನಿಂತು ಹಣ್ಣುಗಳನ್ನು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.