ETV Bharat / state

ತುಮಕೂರು: ಸಚಿವ ಸುಧಾಕರ್ ಎದುರೇ ನಾಯಕ ಸಮುದಾಯದವರ ಗದ್ದಲ, ಗಲಾಟೆ

author img

By

Published : Jul 27, 2022, 2:18 PM IST

Nayak community member quarrel in Tumkur, quarrel in front of Minister Sudhakar in Tumkur, Tumkur news, BJP Janotsava meeting, ನಾಯಕ್ ತುಮಕೂರಿನಲ್ಲಿ ನಾಯಕ ಸಮುದಾಯದವರ ವಾಗ್ವಾದ, ತುಮಕೂರಿನಲ್ಲಿ ಸಚಿವ ಸುಧಾಕರ್ ಮುಂದೆ ವಾಗ್ವಾದ, ತುಮಕೂರು ಸುದ್ದಿ, ಬಿಜೆಪಿ ಜನೋತ್ಸವ ಸಭೆ, Etv Bharat Karnataka news, Etv Bharat Kannada news, ಈಟಿವಿ ಭಾರತ ಕರ್ನಾಟಕ ಸುದ್ದಿ, ಈಟಿವಿ ಭಾರತ್​ ಕನ್ನಡ ಸುದ್ದಿ,
ಸಚಿವ ಸುಧಾಕರ್ ಎದುರಲ್ಲೇ ನಾಯಕ ಸಮುದಾಯದವರ ಗದ್ದಲ

ತುಮಕೂರಿಗೆ ಸಚಿವರ ಭೇಟಿ- ಡಾ. ಸುಧಾಕರ್ ಎದುರೇ ನಾಯಕ ಸಮುದಾಯವದರ ಗದ್ದಲ, ಗಲಾಟೆ- ಸಮಾಧಾನ ಪಡಿಸಿದ ಸ್ಥಳೀಯ ಮುಖಂಡರು

ತುಮಕೂರು : ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೂ ಕಾರ್ಯಕರ್ತರು ಹಾಗೂ ನಾಯಕ ಸಮುದಾಯದ ಮುಖಂಡರು, ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಜನೋತ್ಸವ ಪೂರ್ವಭಾವಿ ಸಮಾವೇಶದಲ್ಲಿ ಭಾರಿ ಗದ್ದಲವೇ ನಡೆಯಿತು.

ನಾಯಕ ಸಮುದಾಯದವರ ಗದ್ದಲ ವಿಡಿಯೋ

ಸಚಿವ ಸುಧಾಕರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಯಕ ಸಮುದಾಯದ ಮುಖಂಡರು ಭಾರಿ ಗಲಾಟೆ ಮಾಡಿದರು. ಬಿಜೆಪಿ ಶಾಸಕ ಡಾ. ರಾಜೇಶ್ ಗೌಡ ಅವರು ನಾಯಕ ಸಮುದಾಯ ಹಾಗೂ ಹಿಂದೂ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಮಂಜು ಆರೋಪಿಸಿ ಗಲಾಟೆ ಮಾಡಿದರು. ನಂತರ ಸ್ಥಳೀಯ ಮುಖಂಡರು ಹಾಗೂ ಪೊಲೀಸರು ಅವರನ್ನು ಸಮಾಧಾನಪಡಿಸಿ ಕಾರ್ಯಕ್ರಮದಿಂದ ಹೊರಗೆ ಕರೆದುಕೊಂಡು ಹೋದರು.

ಓದಿ: ಕಾಂಗ್ರೆಸ್​​​​ನವರು ಬಿಜೆಪಿ ನೋಡಿ ಕಲಿಯಬೇಕಿದೆ: ಸಚಿವ ಸುಧಾಕರ್ ಟಾಂಗ್​​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.