ETV Bharat / state

ಚುನಾವಣೆ ನಂತ್ರ ಪಂಚಮಸಾಲಿಗರನ್ನು ಒಬಿಸಿಗೆ ಸೇರಿಸುವಂತೆ ಒತ್ತಾಯ; ಜಯಮೃತ್ಯುಂಜಯ ಶ್ರೀ

author img

By

Published : Apr 22, 2023, 9:36 PM IST

Basava Jaya Mruthyunjaya shree addressed the press conference.
ಬಸವ ಜಯಮೃತ್ಯುಂಜಯ ಶ್ರೀಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ನೀಡಿರುವ ಮೀಸಲಾತಿ ಸೌಲಭ್ಯ ಪಡೆಯುವಂತೆ ಪಂಚಮಸಾಲಿ ಸಮುದಾಯಕ್ಕೆ ಬಸವ ಜಯಮೃತ್ಯುಂಜಯ ಶ್ರೀಗಳು ಸಲಹೆ ನೀಡಿದ್ದಾರೆ.

ಪಂಚಮಸಾಲಿ ಲಿಂಗಾಯತ ಮೀಸಲು ಸೌಲಭ್ಯ ಪಡೆದುಕೊಳ್ಳುವಂತೆ ಜಯಮೃತ್ಯುಂಜಯ ಶ್ರೀಗಳ ಸಲಹೆ

ತುಮಕೂರು: ಸತತ 2 ವರ್ಷ 5 ತಿಂಗಳ ಕಾಲ ರಾಜ್ಯದಲ್ಲಿ ಬಹಳ ದೊಡ್ಡ ಹೋರಾಟ ಹಾಗೂ ಚಳವಳಿಯನ್ನು ಮಾಡಲಾಯಿತು. ಮೊದಲ ‌ಹಂತದಲ್ಲಿ ಯಶಸ್ಸು ಪಡೆಯಲಾಗಿದೆ. ಪಂಚಮಸಾಲಿ ಲಿಂಗಾಯತ ಮೀಸಲಾತಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕೂಡಲಸಂಗಮ ಮಠದ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮೆಲ್ಲರ ಆರಾಧ್ಯ ದೈವ ಆಗಿರುವ ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ಗೌರವ ನಮನ‌ ಸಲ್ಲಿಸಿ, ಪರಮ ಪೂಜ್ಯ ಸಿದ್ದಲಿಂಗ ಶ್ರೀಗಳ ಅಶೀರ್ವಾದ ಪಡೆದಿದ್ದೇವೆ. ನಮ್ಮ ಈ ಐತಿಹಾಸಿಕ ಹೋರಾಟಕ್ಕೆ ಪಕ್ಷಾತೀತ, ಜಾತ್ಯತೀತವಾಗಿ ಯಾರೆಲ್ಲ ಸಹಕಾರ ಹಾಗೂ ನಮ್ಮ ಯಶಸ್ಸಿಗೆ ಬೆಂಬಲ‌ ಕೊಟ್ಟಿದ್ದಾರೋ ಅವರೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.

ರಾಜ್ಯದ 48 ಭಾಗದಲ್ಲಿ ಮೊದಲ ಹಂತದ ಬೃಹತ್ ಪ್ರವಾಸ: ಇಂದಿನಿಂದ ರಾಜ್ಯದಲ್ಲಿ ಶರಣು ಒಂದಾನು ಎಂಬ ಯಾತ್ರೆ ಆರಂಭಿಸುವ ಮೂಲಕ 10 ನೇ ತಾರೀಖಿನವರೆಗೆ ರಾಜ್ಯದ 48 ಭಾಗದಲ್ಲಿ ಮೊದಲ ಹಂತದ ಬೃಹತ್ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ‌. ಹೀಗಾಗಿ ಪೂಜ್ಯರ ಅಶೀರ್ವಾದ ಪಡೆದುಕೊಂಡು ಹೋಗ್ಬೇಕು ಅಂತ ಶ್ರೀ ಮಠಕ್ಕೆ ಬಂದಿದ್ದೇನೆ. ಈ ಒಂದು ಹೋರಾಟಕ್ಕೆ 2D ಎಂಬ ಹೊಸ ಮೀಸಲಾತಿ ನಮ್ಮ‌ ಸಮುದಾಯಕ್ಕೆ ನೀಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಿದ್ದಗಂಗಾ ಮಠದ ಫಲವೇ ನಮ್ಮ ಹೋರಾಟಕ್ಕೆ ಜಯ: ನಾವು ಕೇಳಿದ್ದು ಲಿಂಗಾಯತ ಪಂಚಮಸಾಲಿ ಹಾಗೂ ಲಿಂಗಾಯತ ಉಪನಾಮಗಳಿಗೆ ಮೀಸಲಾತಿ. ಆದರೆ ಸರ್ಕಾರ ಎಲ್ಲಾ ಲಿಂಗಾಯತ ಒಳಪಂಗಡಗಳನ್ನು ಒಳಗೊಂಡಂತೆ ಹೊಸ ಪ್ರವರ್ಗವನ್ನು ಸೃಷ್ಟಿಸಿದೆ. ಈ ಮೂಲಕ ಆರಂಭದಲ್ಲಿ ನ್ಯಾಯ ಕೊಡುವಂತಹ ಕೆಲಸವನ್ನು ಮಾಡಿದೆ.

ಸತ್ಯಾಗ್ರಹಕ್ಕೆ ಕುಳಿತ ಸಂದರ್ಭದಲ್ಲಿ ಉತ್ತರ ಕರ್ನಾಟಕ ಸಾವಿರಾರು ಮಂದಿಗೆ ಅನ್ನ ಆಶ್ರಯ ಕೊಟ್ಟು, ಕರ್ನಾಟಕದಲ್ಲಿ ಯಾವ ಮಠಾಧೀಶರು ಕೊಡಲಾಗದ ಅಶೀರ್ವಾದವನ್ನು ಶ್ರೀ ಸಿದ್ದ ಗಂಗಾ ಮಠ ಕೊಟ್ಟಿದೆ. ಸಿದ್ದಗಂಗಾ ಮಠದ ಫಲವೇ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದ್ದು ಎಂದು ಕೂಡಲಸಂಗಮ ಶ್ರೀ ಹೇಳಿದ್ರು.

ಕೇಂದ್ರ ಸರ್ಕಾರದ ಒಬಿಸಿ ಶಿಫಾರಸಿಗೆ ಒತ್ತಾಯ: ಈ ಸಂದರ್ಭದಲ್ಲಿ ಪಕ್ಷಾತೀತವಾಗಿ ಧನ್ಯವಾದ ಹೇಳ್ತಿನಿ. ಚುನಾವಣೆ ಮುಗಿದ ನಂತರ ಕೇಂದ್ರ ಸರ್ಕಾರದ ಒಬಿಸಿ ಶಿಫಾರಸಿಗೆ ಒತ್ತಾಯ ಹಾಗೂ ಹೋರಾಟ ಮಾಡ್ತಿವಿ. ಸರ್ಕಾರ ಎಲ್ಲಾ ಲಿಂಗಾಯತರಿಗೆ ಅವಕಾಶ ಮಾಡಿಕೊಟ್ಟಿದೆ. ಒಂದು ಹಂತದಲ್ಲಿ ಸರ್ಕಾರ ನೀಡಿರುವ ಮೀಸಲಾತಿ ನಮಗೆ ಸಮಾಧಾನ ತಂದಿದೆ ಎಂದು ಸಂತೃಪ್ತಿ ವ್ಯಕ್ತಪಡಿಸಿದರು.

ನಮ್ಮ ಮಕ್ಕಳಿಗೆ ಎಷ್ಟರಮಟ್ಟಿಗೆ ಮೀಸಲಾತಿ ಕೊಡ್ಬೇಕೋ. ಅದನ್ನು ಕೊಡುವಂತಹ ಕೆಲಸವನ್ನು ರಾಜ್ಯ ಸರ್ಕಾರ‌ ಮಾಡಿದೆ. ನಮ್ಮ ಪಂಚಮಸಾಲಿ ಹೋರಾಟದಿಂದ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ನಾಯಕರಿಗೆ, ಎಲ್ಲಾ ಪಕ್ಷದಲ್ಲೂ ಮಾನ್ಯತೆ ನೀಡಿ ಹೆಚ್ಚಿನ ಸ್ಥಾನಮಾನ ಸಿಕ್ಕಿದೆ. ಪಂಚಮಸಾಲಿ ಹೋರಾಟದ ಫಲ. ಈ ಹೋರಾಟದಲ್ಲಿ ದುಡಿದ ಕಟ್ಟಕಡೆಯ ವ್ಯಕ್ತಿಗೆ ಸಲ್ಲಬೇಕು ಎಂದು ಹೇಳಿದರು.

ಇದನ್ನೂಓದಿ:ಬಿಜೆಪಿ ಮತ್ತು ಆರ್​ಎಸ್​ಎಸ್​ನವರು ನನ್ನನ್ನು ರಾಜಕೀಯ ದ್ವೇಷದಿಂದ ಸೋಲಿಸಬೇಕೆಂದು ನಿಂತಿದ್ದಾರೆ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.