ತುಮಕೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಆರೋಪ ಹಿನ್ನೆಲೆ ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಭಿಮಾನಿಯೊಬ್ಬರು ಗುಬ್ಬಿ ಶಾಸಕ ಶ್ರೀನಿವಾಸ್ ಅವರನ್ನು ದೂರವಾಣಿ ಮೂಲಕ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ. ಈ ಆಡಿಯೋ ಈಗ ವೈರಲ್ ಆಗಿದೆ.
ಶಾಸಕ ಶ್ರೀನಿವಾಸ್ ಅವರ ಜೊತೆ ಫೋನ್ನಲ್ಲಿ ಮಾತನಾಡಿದ ಹೆಚ್ಡಿಕೆ ಅಭಿಮಾನಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕುಮಾರಸ್ವಾಮಿ ಅವರ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಿಮ್ಮ ಅಭಿಮಾನಿಗಳಂತೆ ಕುಮಾರಸ್ವಾಮಿ ಅವರಿಗೂ ಅಭಿಮಾನಿಗಳಿದ್ದಾರೆ. ಜೆಡಿಎಸ್ ಬಡವರ ಪಕ್ಷ, ಅಲ್ಲಿಯೇ ನೀವು ಗೆದ್ದು ಬಂದಿದ್ದು, ಕುಮಾರ ಸ್ವಾಮಿ ಅವರ ಬಗ್ಗೆ ಹಗುರವಾಗಿ ಮಾತನಾಡಬೇಡಿ, ಪ್ರಾಣ ಹೋದರೂ ನಾವು ಜೆಡಿಎಸ್ಗೆ ಬೆಂಬಲ ಕೊಡುವುದನ್ನು ನಿಲ್ಲಿಸಲ್ಲ. ನೀವು ಜೆಡಿಎಸ್ ಪಕ್ಷ ಬಿಟ್ಟು ಗೆದ್ದು ತೋರಿಸಿ ಎಂದು ಸವಾಲ್ ಹಾಕಿದ್ದಾರೆ.
ಇದನ್ನೂ ಓದಿ: ತಾಕತ್ತಿದ್ರೆ ಬರಲಿ, ಗಂಡಸಾದ್ರೆ ನನ್ನ ಎದುರು ಸ್ಪರ್ಧಿಸಲಿ: ಹೆಚ್ಡಿಕೆಗೆ ಶಾಸಕ ಶ್ರೀನಿವಾಸ್ ಓಪನ್ ಚಾಲೆಂಜ್