ETV Bharat / state

ರಕ್ಷಾ ಬಂಧನದ ಉಡುಗೊರೆಯಾಗಿ ಸರ್ಕಾರ ಗೃಹ ಲಕ್ಷ್ಮಿ ಯೋಜನೆ ಜಾರಿ ಮಾಡಿದೆ: ಸಚಿವ ಮಧು ಬಂಗಾರಪ್ಪ

author img

By ETV Bharat Karnataka Team

Published : Aug 30, 2023, 8:08 PM IST

ಗೃಹ ಲಕ್ಷ್ಮಿ ಯೋಜನೆಯ ಚೆಕ್ ವಿತರಣೆ
ಗೃಹ ಲಕ್ಷ್ಮಿ ಯೋಜನೆಯ ಚೆಕ್ ವಿತರಣೆ

ಶಿವಮೊಗ್ಗ ಜಿಲ್ಲಾಡಳಿತದ ವತಿಯಿಂದ ನಗರದ ಅಂಬೇಡ್ಕರ್​ ಭವನದಲ್ಲಿಂದು ನಡೆದ ಗೃಹ ಲಕ್ಷ್ಮಿ ಯೋಜನೆಗೆ ಸಚಿವ ಮಧು ಬಂಗಾರಪ್ಪ ಚಾಲನೆ ಕೊಟ್ಟರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತು

ಶಿವಮೊಗ್ಗ : ರಕ್ಷಾ ಬಂಧನದ ಉಡುಗೊರೆಯಾಗಿ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. "ರಕ್ಷಾ ಬಂಧನದ‌ ದಿನದಂದು ಮನೆಯ ಯಜಮಾನಿಗೆ ಅಣ್ಣನ ರೀತಿಯಲ್ಲಿ ಒಂದು ಬಹುಮಾನ ಕೊಡಲಾಗಿದೆ" ಎಂದರು.

"ಚುನಾವಣೆಗೂ ಮುನ್ನ ನಿಮಗೆ ನೀಡಿದ ಆಶ್ವಾಸನೆಯಂತೆ ಈಗ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದ್ದೇವೆ. ಶಕ್ತಿ ಯೋಜನೆ ಈಗಾಗಲೇ ಜಾರಿಯಾಗಿದೆ. ಇದರಿಂದ ನೀವು ಗಂಡಸರ ರೀತಿ ಊರೂರು ಸುತ್ತಬಹುದು. ಹಸಿದವರ ಹೊಟ್ಟೆಗೆ ಊಟ‌ ನೀಡಬೇಕೆಂದು ಅಕ್ಕಿ ನೀಡಲಾಗುತ್ತಿದೆ. 5 ಕೆ.ಜಿ ಅಕ್ಕಿ ನೀಡಲಾಗದೇ ಹೋಗಿದ್ದಕ್ಕೆ ನಿಮ್ಮ ಖಾತೆಗೆ ಹಣ ಹಾಕಲಾಗುತ್ತಿದೆ. ಗೃಹಜ್ಯೋತಿ ಯೋಜನೆ ಜಾರಿ ಮಾಡಿದ್ದೇವೆ. ಅದರಂತೆ ಲಕ್ಷಾಂತರ ಮನೆಗಳಿಗೆ ಶೂನ್ಯ ಬಿಲ್ ಬಂದಿದೆ" ಎಂದು ಹೇಳಿದರು.

"ಸರ್ಕಾರ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಗ್ಯಾಸ್ ಸಿಲಿಂಡರ್ ದರ ಏರಿಕೆಯಾದ ಕಾರಣಕ್ಕೆ ಗ್ರಾಮೀಣ ಭಾಗದ ಜನರು ಕಟ್ಟಿಗೆ ಕಡೆ ಹೋಗಿದ್ದಾರೆ. ಕಾಡಿಗೆ ಹೋದ್ರೆ ಅರಣ್ಯ ಇಲಾಖೆಯವರು ಬಿಡಲ್ಲ. ಈಗ 2 ಸಾವಿರ ರೂ. ಹಣ ನೀಡಲಾಗುತ್ತಿದೆ. ಇದರಿಂದ ನಿಮ್ಮ ಕುಟುಂಬ ನಿರ್ವಹಣೆ ಮಾಡಬಹುದು. ಮನೆಯಲ್ಲಿ ಗೃಹಿಣಿಯರು" ಸಿಎಂ ಎಂದು ತಿಳಿಸಿದರು.

"ಸರ್ಕಾರ ಬಂದಾಗ ಟೀಕೆ, ಟಿಪ್ಪಣಿ ಮಾಡುತ್ತಾರೆ. ಅವರಿಗೆ ಉತ್ತರ ನೀಡಬೇಕೆಂದು ನುಡಿದಂತೆ ನಡೆಯುತ್ತಿದ್ದೇವೆ. ಭಾರತದಲ್ಲಿಯೇ ಅದ್ಭುತವಾದ ಕಾರ್ಯಕ್ರಮ ನಡೆಸುತ್ತಿದ್ದೇವೆ. ನಮ್ಮ ಯೋಜನೆ ಇಲ್ಲಿಗೆ ನಿಲ್ಲಲ್ಲ, ಮುಂದೆಯೂ ಇರುತ್ತದೆ ಎಂದು ಭರವಸೆ ನೀಡಿದರು. 3.60 ಲಕ್ಷ ಕುಟುಂಬದವರು ಅರ್ಜಿ ಸಲ್ಲಿಸಿದ್ದಾರೆ. ಇನ್ನೂ 30 ಸಾವಿರ ಕುಟುಂಬಗಳು ಅರ್ಜಿ ಸಲ್ಲಿಕೆ‌ ಮಾಡುವಂತೆ ತಿಳಿಸಬೇಕು" ಎಂದು ಸಚಿವರು ಹೇಳಿದರು.

ಜಿಲ್ಲೆಯ ಎಲ್ಲಾ ಮಹಿಳೆಯರು, ಫಲಾನುಭವಿಗಳು ಗ್ಯಾರಂಟಿ ಯೋಜನೆ ಪಡೆಯುವಂತೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ನಂತರ ಸಾಂಕೇತಿಕವಾಗಿ ಎಲ್ಲಾ ಧರ್ಮದ ಮಹಿಳೆಯರನ್ನು ವೇದಿಕೆ ಮೇಲೆ ಕರೆಯಿಸಿ ಚೆಕ್ ನೀಡಲಾಯಿತು.

ವೇದಿಕೆಯಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ, ಎಸ್ಪಿ‌ ಮಿಥುನ್ ಕುಮಾರ್, ಮಹಿಳಾ ಮಕ್ಕಳ ನಿರ್ದೇಶಕ ಸಂತೋಷ್ ಹಾಜರಿದ್ದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ

ಕುವೆಂಪು ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ವಿಮಾನ ಹಾರಾಟವು ಜಿಲ್ಲೆಯ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ. ಸೋಗಾನೆಯ ವಿಮಾನ ನಿಲ್ದಾಣಕ್ಕೆ ಭೇಟಿ‌ ನೀಡಿದ ಅವರು, ವಿಮಾನ ನಿಲ್ದಾಣದ ಟರ್ಮಿನಲ್ ವೀಕ್ಷಣೆ ಮಾಡಿದರು.

ನಂತರ ಇಂಡಿಗೋ ಸಂಸ್ಥೆಯ ಬಸ್​ನಲ್ಲಿ ರನ್ ವೇ, ಏರ್ ಟ್ರಾಫಿಕ್ ಕಂಟ್ರೋಲರ್ ಸೇರಿದಂತೆ ವಿಮಾನ ನಿಲ್ದಾಣಕ್ಕೆ ಒಂದು ಸುತ್ತು ಹಾಕಿ ಬಂದರು. ನಂತರ ಮಾಧ್ಯಮದರ ಜೊತೆ ಮಾತನಾಡಿ, "ಬಹಳ ವಿಶಾಲವಾಗಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ನಾನು ಎಲ್ಲವನ್ನೂ ವೀಕ್ಷಣೆ ಮಾಡಿಕೊಂಡು ಬಂದಿದ್ದೇನೆ. ನಾಳೆಯಿಂದ ವಿಮಾನ‌ ಹಾರಾಟ ಪ್ರಾರಂಭವಾಗಲಿದೆ. ರಾತ್ರಿ ವಿಮಾನ ಹಾರಾಟಕ್ಕೆ ಇನ್ನೂ ಸಮಯ ಬೇಕಾಗುತ್ತದೆ. ವಿಮಾನ ನಿಲ್ದಾಣವನ್ನು ಜನರು ಉಪಯೋಗ ಮಾಡಿಕೊಳ್ಳಬೇಕು" ಎಂದು ಮನವಿ ಮಾಡಿದರು.

ಇದನ್ನೂ ಓದಿ: ಪ್ರಧಾನಿ‌ ಮೋದಿಯವರು ಪುಕ್ಸಟ್ಟೆ ಗ್ಯಾಸ್ ನೀಡಿದ್ರೆ ನಾನು ಬಿಜೆಪಿಯವರಿಗೆ ಹಾರ ಹಾಕ್ತಿನಿ: ಸಚಿವ ಮಧು ಬಂಗಾರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.