ETV Bharat / state

ಕೋವಿಡ್​ಗೆ ಕವಲೆದುರ್ಗಮಠದ ಸ್ವಾಮೀಜಿ ಲಿಂಗೈಕ್ಯ

author img

By

Published : Jun 7, 2021, 6:21 PM IST

Updated : Jun 7, 2021, 7:45 PM IST

swamiji
swamiji

ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಮಠಗಳಲ್ಲಿ ಒಂದಾದ ಕವಲೆದುರ್ಗ ಮಠದ ಶ್ರೀಗಳಾದ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿಗಳು ಕೋವಿಡ್​​ನಿಂದ ಲಿಂಗೈಕ್ಯರಾಗಿದ್ದಾರೆ.

ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ಮಠಗಳಲ್ಲಿ ಒಂದಾದ ಕವಲೆದುರ್ಗ ಮಠದ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿಗಳು ಕೋವಿಡ್​ನಿಂದ ಲಿಂಗೈಕ್ಯರಾಗಿದ್ದಾರೆ.

ತೀರ್ಥಹಳ್ಳಿ ತಾಲೂಕು ಕವಲೇದುರ್ಗ ಮಠದ ಶಿವಚಾರ್ಯ ಸ್ವಾಮೀಜಿಗಳಿಗೆ ಕಳೆದ ಒಂದು ವಾರದ ಹಿಂದೆ ಕೊರೊನಾ ಕಾಣಿಸಿಕೊಂಡಿತ್ತು. ಇವರು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಉಸಿರಾಟದ ಸಮಸ್ಯೆ ಉಂಟಾದ ಕಾರಣ ಶಿವಮೊಗ್ಗದ ನಾರಾಯಣ ಹೃದಯಾಲಯಕ್ಕೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಲಿಂಗೈಕ್ಯರಾಗಿದ್ದಾರೆ. ಅಪಾರ ಭಕ್ತಗಣ ಹೊಂದಿದ ಸ್ವಾಮೀಜಿಗಳ ನಿಧನಕ್ಕೆ ಗಣ್ಯರು‌ ಕಂಬನಿ‌ ಮಿಡಿದಿದ್ದಾರೆ.

Last Updated :Jun 7, 2021, 7:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.