ETV Bharat / state

ದರೋಡೆಕೋರರನ್ನು ಖೆಡ್ಡಾಗೆ ಕೆಡವಿದ ಖಾಕಿ..11 ದ್ವಿಚಕ್ರವಾಹನ, 11 ಮೊಬೈಲ್​ ವಶ!

author img

By

Published : Jul 22, 2021, 7:25 AM IST

ಕನಕಪುರ ಮತ್ತು ಬಿಡದಿ ಗ್ರಾಮಾಂತರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ದರೋಡೆಗಳಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಿದ್ದಾರೆ.
ಬಂಧಿತರು
ಬಂಧಿತರು

ರಾಮನಗರ: ಕಳ್ಳತನ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಪುರ ಹಾಗೂ ಬಿಡದಿ ಗ್ರಾಮಾಂತರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಲಕ್ಕಿ ಅಲಿಯಾಸ್ ಗುಂಡ, ರಾಜೇಶ್ ಅಲಿಯಾಸ್ ರಾಜ, ರಿಯಾಜ್ ಅಹ್ಮದ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಚೂರಿ, ಮಚ್ಚು, 11 ದ್ವಿಚಕ್ರವಾಹನ, 11 ಮೊಬೈಲ್​​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರು
ಬಂಧಿತರು

ಬಿಡದಿ ಹಾಗೂ ದೊಡ್ಡಮುದವಾಡಿ ರಸ್ತೆಯಲ್ಲಿ 7 ಜನರ ಗುಂಪು ಮಾರಕಾಸ್ತ್ರ ಹಿಡಿದು ದರೋಡೆಗೆ ಹೊಂಚು ಹಾಕುತ್ತಿತ್ತು ಎನ್ನಲಾಗಿದೆ. ಖಚಿತ ಮಾಹಿತಿ ಪಡೆದ ಬಿಡದಿ ಪಿಎಸ್​ಐ ಹೇಮಂತ್​ ತ್ವರಿತ ಕಾರ್ಯಾಚರಣೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹಲವರು ತಲೆ ಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರೆದಿದೆ.

ಇದನ್ನೂ ಓದಿ: ವೇಶ್ಯಾವಾಟಿಕೆ ನಡೆಸುತಿದ್ದ ಲಾಡ್ಜ್ ಮೇಲೆ ಪೊಲೀಸ್ ದಾಳಿ: ಬಾಂಗ್ಲಾ ಯುವತಿಯ ರಕ್ಷಣೆ

ಆರೋಪಿಗಳು 12 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ರಾಮನಗರ ಎಸ್​ಪಿ ಗಿರೀಶ್ ಅಭಿನಂದನೆ ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.