ETV Bharat / state

ಶುಂಠಿ ಬೆಳೆಗಾರರಿಗೆ ವಿಶೇಷ ಸಲಹೆ

author img

By

Published : Aug 22, 2019, 8:54 AM IST

ಶುಂಠಿ ಬೆಳೆ

ತೀವ್ರವಾಗಿ ಸುರಿದ ಮಳೆಯಿಂದಾಗಿ ಶುಂಠಿ ಬೆಳೆಗೆ ಕೊಳೆ ರೋಗ ಸೇರಿದಂತೆ ಮತ್ತಿತರ ರೋಗಗಳು ಬಾರದಂತೆ ತಡೆಗಟ್ಟುವಿಕೆಗೆ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ನಿರ್ದೇಶಕರು ಶುಂಠಿ ಬೆಳೆಗಾರರಿಗೆ ಸಲಹೆಗಳನ್ನು ನೀಡಿದ್ದಾರೆ.

ಶಿವಮೊಗ್ಗ: ಜಿಲ್ಲೆಯಲ್ಲಿ ಹೆಚ್ಚಿದ ಮಳೆ ಕಾರಣದಿಂದಾಗಿ ಶುಂಠಿಗೆ ಶಿಲೀಂದ್ರ ಮತ್ತು ದುಂಡಾಣು ಗಡ್ಡೆ ಕೊಳೆ ರೋಗ ಕಂಡುಬರುವ ಸಾಧ್ಯತೆ ಇರುವುದರಿಂದ ರೈತರು ಅವುಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ನಿರ್ದೇಶಕರು ಸೂಚಿಸಿದ್ದಾರೆ.

ರೋಗಕ್ಕೆ ತುತ್ತಾದ ಗಿಡಗಳ ಎಲೆ ತುದಿ ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಪೂರ್ತಿ ಎಲೆ ಹಳದಿಯಾಗುತ್ತದೆ. ನಂತರ ಗಿಡ ಒಣಗಿ ಬುಡದ ಭಾಗ ಕೊಳೆಯುತ್ತದೆ. ಈರೋಗಗಳನ್ನು ನಿಯಂತ್ರಿಸಲು ರೋಗಗ್ರಸ್ಥ ಗಡ್ಡೆಗಳನ್ನು ತೆಗೆದು ಹಾಕಿ, ನಂತರ 3 ಗ್ರಾಂ ಕಾಪರ್ ಆಕ್ಸಿಕ್ಲೋರೈಡ್, 50 ಡಬ್ಲ್ಯೂಪಿ ಮತ್ತು 0.5 ಗ್ರಾಂ ಸ್ಟ್ರಪ್ಟೊಸೈಕ್ಲೀನ್ ಅಥವಾ 2.5 ಗ್ರಾಂ ಮೆಟಾಲಾಕ್ಸಿಲ್ ಅಥವಾ ಬೋರ್ಡೋ ದ್ರಾವಣವನ್ನು ಪ್ರತಿ ಒಂದು ಲೀಟರ್ ನೀರಿನಲ್ಲಿ ಬೆರೆಸಿ ರೋಗ ಬಂದ ಗಿಡಕ್ಕೆ ಹಾಗೂ ಸುತ್ತಮುತ್ತ ಹಾಕಬೇಕು. ಎಲೆಚುಕ್ಕಿ ರೋಗಕ್ಕೂ ಸಹ ಮೇಲಿನ ಕ್ರಮಗಳನ್ನು ಅನುಸರಿಸಿ ನಿಯಂತ್ರಣಕ್ಕೆ ತರಬಹುದು ಎಂದಿದ್ದಾರೆ.

ಇದರ ಜೊತೆಗೆ ಕಾಂಡ ಕೊರೆಯುವ ಹುಳವಿನ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದ್ದು, ರೈತರು ಈ ಹುಳುವಿನ ಬಾಧೆ ಬಗ್ಗೆ ಜಾಗ್ರತೆ ವಹಿಸಬೇಕು. ಶುಂಠಿ ಗಿಡದ ಕಾಂಡದ ಮೇಲೆ ಅಡ್ಡದಾದ ರಂಧ್ರಗಳು ಕಂಡು ಬಂದು, ಗಿಡಗಳು ಒಣಗುತ್ತಿದ್ದಲ್ಲಿ ಅವುಗಳನ್ನು ಗುರುತಿಸಿ 1.7 ಮಿಲಿ ಡೈಮಿಥೋಯೇಟ್, 30 ಇಸಿ ಅಥವಾ 1 ಮಿಲಿ ಮೊನೋಕ್ರೋಟೋಫಾಸ್, 36 ಎಸ್​​ಎಲ್ ಅಥವಾ 2 ಮಿಲಿ ಮೆಲಾಥಿಯಾನ್, 50 ಇಸಿಯನ್ನು ಪ್ರತಿ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಹತೋಟಿಗೆ ತರಬಹುದಾಗಿದೆ ಎಂದು ನಿರ್ದೇಶಕರು ಶುಂಠಿ ಬೆಳೆಗಾರರಿಗೆ ಸಲಹೆ ಸೂಚನೆ ನೀಡಿದ್ದಾರೆ.

Intro:ಶಿವಮೊಗ್ಗ,

ಶುಂಠಿ ಬೆಳೆಗಾರರಿಗೆ ಸಲಹೆ

ಜಿಲ್ಲೆಯಲ್ಲಿ ಹೆಚ್ಚಿದ ಮಳೆ ಕಾರಣದಿಂದಾಗಿ ಶುಂಠಿಗೆ ಶಿಲೀಂದ್ರ ಮತ್ತು ದುಂಡಾಣು ಗಡ್ಡೆ ಕೊಳೆ ರೋಗಗಳು ಕಂಡುಬರುವ ಸಾಧ್ಯತೆ ಇರುವುದರಿಂದ ರೈತರು ಅವುಗಳನ್ನು ನಿಯಂತ್ರಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ನಿರ್ದೇಶಕರು ಸೂಚಿಸಿದ್ದಾರೆ.
ರೋಗಕ್ಕೆ ತುತ್ತಾದ ಗಿಡಗಳ ಎಲೆ ತುದಿ ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಪೂರ್ತಿ ಎಲೆ ಹಳದಿಯಾಗುತ್ತದೆ. ನಂತರ ಗಿಡ ಒಣಗಿ ಬುಡದ ಭಾಗ ಕೊಳೆಯುತ್ತದೆ.
ಈ ರೋಗಗಳನ್ನು ನಿಯಂತ್ರಿರಿಸಲು ರೋಗಗ್ರಸ್ಥ ಗಡ್ಡೆಗಳನ್ನು ತೆಗೆದು ಹಾಕಿ ನಂತರ 3 ಗ್ರಾಂ ಕಾಪರ್ ಆಕ್ಸಿಕ್ಲೋರೈಡ್, 50 ಡಬ್ಲ್ಯೂಪಿ ಮತ್ತು 0.5 ಗ್ರಾಂ ಸ್ಟ್ರಪ್ಟೊಸೈಕ್ಲೀನ್ ಅಥವಾ 2.5 ಗ್ರಾಂ ಮೆಟಾಲಾಕ್ಸಿಲ್ ಅಥವಾ ಬೋರ್ಡೋ ದ್ರಾವಣವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ರೋಗ ಬಂದ ಮಡಿಗೆ ಹಾಗೂ ಸುತ್ತಮುತ್ತ ಹಾಕ ಬೇಕು. ಎಲೆಚುಕ್ಕಿ ರೋಗಕ್ಕೂ ಸಹ ಮೇಲಿನ ಕ್ರಮಗಳನ್ನು ಅನುಸರಿಸಿ ನಿಯಂತ್ರಣಕ್ಕೆ ತರಬಹುದು.
ಇದರ ಜೊತೆಗೆ ಕಾಂಡ ಕೊರೆಯುವ ಹುಳವಿನ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದ್ದು ರೈತರು ಈ ಹುಳುವಿನ ಬಾಧೆ ಬಗ್ಗೆ ಜಾಗ್ರತೆ ವಹಿಸಬೇಕು. ಶುಂಠಿ ಗಿಡದ ಕಾಂಡದ ಮೇಲೆ ಅಡ್ಡದಾದ ರಂಧ್ರಗಳು ಕಂಡು ಬಂದು, ಗಿಡಗಳು ಒಣಗುತ್ತಿದ್ದಲ್ಲಿ ಅವುಗಳನ್ನು ಗುರುತಿಸಿ 1.7 ಮಿಲೀ ಡೈಮಿಥೋಯೇಟ್ 30 ಇಸಿ ಆಥವಾ 1 ಮಿಲೀ ಮೊನೋಕ್ರೋಟೋಫಾಸ್ 36 ಎಸ್ ಎಲ್ ಆಥವಾ 2 ಮಿಲೀ ಮೆಲಾಥಿಯಾನ್ 50 ಇಸಿಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಹತೋಟಿಗೆ ತರಬಹುದಾಗಿದೆ.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.