ETV Bharat / state

ರಾಮನಗರದಲ್ಲಿಎಪಿಎಂಸಿ ಸೇವೆ ಅಬಾಧಿತ; ಹಬ್ಬದ ಖರೀದಿ ವೇಳೆ ಜನಜಂಗುಳಿ

author img

By

Published : Mar 24, 2020, 1:12 PM IST

ramanagara
ರಾಮನಗರ

ರಾಮನಗರದಲ್ಲಿ ದಿನಬಳಕೆಯ ಅತ್ಯವಶ್ಯಕ ವಸ್ತುಗಳಾದ ಹಾಲಿನ ಅಂಗಡಿ, ಮೆಡಿಕಲ್ ಶಾಪ್ ಹೊರತುಪಡಿಸಿ ಎಲ್ಲವೂ ಬಂದ್ ಆಗಬೇಕು ಎಂದು ಸರ್ಕಾರ ಖಡಕ್ ಸೂಚನೆ ನೀಡಿದೆ. ಆದ್ರೆ, ಆದೇಶದ ಹೊರತಾಗಿಯೂ ಜನತೆ ಅಗತ್ಯ ವಸ್ತುಗಳ ಖರೀದಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ಕಂಡು ಬಂತು.

ರಾಮನಗರ : ರಾಜ್ಯಾದ್ಯಂತ ಲಾಕ್​ಡೌನ್ ಘೋಷಣೆ ಹೊರತಾಗಿಯೂ ನಗರ ಕೃಷಿ ಮಾರುಕಟ್ಟೆ ಮಾತ್ರ ಎಂದಿನಂತೆ ಕಾರ್ಯನಿರ್ವಹಿಸುತ್ತಿತ್ತು. ಇಲ್ಲಿ ಜನರು ಅಗತ್ಯ ವಸ್ತುಗಳ ಕೊಳ್ಳುವಿಕೆಯಲ್ಲಿ ಬ್ಯುಸಿಯಾಗಿದ್ದರು.

ಯುಗಾದಿ ಹಬ್ಬ ಇರುವುದರಿಂದ ಜನರು ಮಾರುಕಟ್ಟೆಯಲ್ಲಿ ಹೂ,ತರಕಾರಿ ಹಾಗು ಹಣ್ಣುಗಳನ್ನು ಕೊಳ್ಳಲು ಜನರು ಮುಗಿ ಬಿದ್ದರು. ಅವಶ್ಯಕ ವಸ್ತುಗಳಾದ ಹಾಲಿನ ಅಂಗಡಿ, ಮೆಡಿಕಲ್ ಶಾಪ್ ಹೊರತಾಗಿ ಎಲ್ಲವೂ ಬಂದ್ ಆಗಬೇಕು ಎಂದು ಸರ್ಕಾರ ಖಡಕ್ ಸೂಚನೆ ನೀಡಿದೆ.

ರಾಮನಗರದ ರಸ್ತೆಯಲ್ಲಿ ವಾಹನಗಳ ಓಡಾಟ, ಮಾರುಕಟ್ಟೆಯಲ್ಲಿ ಜನರ ಖರೀದಿ ಎಂದಿನಂತಿತ್ತು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.