ETV Bharat / state

ನಾಮಫಲಕದಲ್ಲಿ ಇನ್ನೂ ಹಾಲಿ ಸಚಿವರಾಗಿಯೇ ಉಳಿದ ಶಾಸಕ ವೆಂಕಟರಾವ್ ನಾಡಗೌಡ!

author img

By

Published : Sep 1, 2019, 10:00 AM IST

ಶಾಸಕ ವೆಂಕಟರಾವ್ ನಾಡಗೌಡ

ಸಿಂಧನೂರಿನ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವೆಂಕಟರಾವ್ ನಾಡಗೌಡ ಮೈತ್ರಿ ಸರ್ಕಾರದ ಅವಧಿಯಲ್ಲಿ ಪಶುಸಂಗೋಪನೆ ಸಚಿವರಾಗಿದ್ದರು. ಅಂದು ಹಾಕಲಾದ ನಾಮಫಲಕವನ್ನು ಇಂದಿಗೂ ಕೂಡ ತೆಗೆದಿಲ್ಲ.

ರಾಯಚೂರು: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಿದ್ರು ಆ ಅವಧಿಯಲ್ಲಿ ಸಚಿವರಾಗಿದ್ದ ಶಾಸಕ ವೆಂಕಟರಾವ್​ ನಾಡಗೌಡ ಹೆಸರು ಮಾತ್ರ ನಾಮಫಲಕದಲ್ಲಿ ಇನ್ನೂ ಸಚಿವ ಅಂತಾ ಹಾಗೆಯೇ ಇದೆ.

ಹೌದು, ಸಿಂಧನೂರಿನ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವೆಂಕಟರಾವ್ ನಾಡಗೌಡ ಹಿಂದಿನ ಮೈತ್ರಿ ಸರ್ಕಾರದಲ್ಲಿ ಪಶುಸಂಗೋಪನೆ ಸಚಿವರಾಗಿದ್ದರು. ಆಗ ಅವರ ಕಚೇರಿಗೆ ಹಾಕಲಾಗಿದ್ದ ನಾಮಫಲಕವನ್ನು ಇನ್ನೂ ತೆಗೆದಿಲ್ಲ.

ನಾಮಫಲಕದಲ್ಲಿ ಹಾಲಿ ಸಚಿವರಾಗಿ ಉಳಿದ ಶಾಸಕ ವೆಂಕಟರಾವ್ ನಾಡಗೌಡ

ಸರ್ಕಾರ ಪತನವಾಗಿ ಹಲವು ದಿನಗಳು ಕಳೆದು ವೆಂಕಟರಾವ್ ನಾಡಗೌಡ ಈಗ ಮಾಜಿ ಸಚಿವರಾಗಿ, ಹಾಲಿ ಶಾಸಕರಾಗಿದ್ದಾರೆ. ಆದ್ರೆ ಅವರು ಸಚಿವರಾಗಿದ್ದ ಸಮಯದಲ್ಲಿ ಹಾಕಲಾದ ನಾಮಫಲಕವನ್ನ ಮಾತ್ರ ತೆರವು ಮಾಡಿಲ್ಲ. ಅಲ್ಲದೆ ಸಚಿವ ಅಂತಾ ಬರೆದಿರುವ ನಾಮಫಲಕ ಇಂದಿಗೂ ರಾರಾಜಿಸುತ್ತಿದೆ.

Intro:ಸ್ಲಗ್: ನಾಮಫಲಕದಲ್ಲಿ ಹಾಲಿ ಸಚಿವರಾಗಿ ಉಳಿದ ಶಾಸಕ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 01-೦9-2019
ಸ್ಥಳ: ರಾಯಚೂರು
ಆಂಕರ್: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಪತನವಾಗಿದೆ. Body:ಈ ಅವಧಿಯಲ್ಲಿ ಸಚಿವರಾಗಿದ್ದ ಶಾಸಕರು ಸಹ ಮಾಜಿ ಸಚಿವರು ಆಗಿದ್ದಾರೆ. ಆದ್ರೆ ಸಿಂಧನೂರು ಮಾಜಿ ಸಚಿವ ಹಾಗೂ ಹಾಲಿ ಶಾಸಕ ವೆಂಕಟರಾವ್ ನಾಡಗೌಡ ಅವರ, ಹಿಂದೆ ಮೈತ್ರಿ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದ ತಮ್ಮ ಕಚೇರಿಗೆ ತೆರಳಲು ಹಾಕಿದ ನಾಮಫಲಕ ಹಾಕಲಾಗಿತ್ತು. ಆದ್ರೆ ಇದೀಗ ಮೈತ್ರಿ ಸರಕಾರ ಪತನವಾಗಿ ಹಲವು ದಿನಗಳು ಕಳೆದಿದ್ದು, ವೆಂಕಟರಾವ್ ನಾಡಗೌಡ ಮಾಜಿ ಸಚಿವರು ಆಗಿದ್ದು, ಹಾಲಿ ಶಾಸಕರು ಆಗಿದ್ದಾರೆ. ಆದ್ರೆ ಅವರ ಸಚಿವರಾಗಿದ್ದ ಸಮಯದಲ್ಲಿ ಹಾಕಲಾದ ನಾಮಫಲಕವನ್ನ ತೆರವು ಮಾಡಿಲ್ಲ. ಅಲ್ಲದೆ ಹಾಲಿ ಸಚಿವರಾಗಿರುವ ನಾಮಫಲಕ ಇಂದಿಗೂ ರಾರಾಜಿಸುತ್ತಿದೆ. Conclusion:ಇನ್ನು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ವೆಂಕಟರಾವ್ ನಾಡಗೌಡ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವರಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.