ETV Bharat / state

ಡ್ರೋನ್​ ಮೂಲಕ ನಡುಗಡ್ಡೆ ಜನರಿಗೆ ಔಷಧ, ಅಗತ್ಯ ವಸ್ತುಗಳ ಪೂರೈಕೆ: ವಿಡಿಯೋ

author img

By

Published : Aug 21, 2020, 1:21 PM IST

Updated : Aug 21, 2020, 1:47 PM IST

Supply of essential items
ಡ್ರೋಣ ಕ್ಯಾಮೆರಾ ಮೂಲಕ ಅಗತ್ಯ ವಸ್ತುಗಳ ಪೂರೈಕೆ

ನಾರಾಯಣಪುರ ಜಲಾಶಯದಿಂದ ನೀರು ಹರಿಬಿಟ್ಟ ಪರಿಣಾಮ ಕರಕಲಗಡ್ಡಿ ನಡುಗಡ್ಡೆಯಲ್ಲಿನ ಜನರು ಅತಂತ್ರ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದು, ಅಲ್ಲಿನ ಜನರಿಗೆ ಅಗತ್ಯ ವಸ್ತು ಸೇರಿದಂತೆ ಔಷಧ ಮತ್ತು ಮಾತ್ರೆಯನ್ನು ಡ್ರೋನ್​​ ಮೂಲಕ ಕಳುಹಿಸಿಕೊಡಲಾಯಿತು.

ರಾಯಚೂರು: ನಾರಾಯಣಪುರ ಅಣೆಕಟ್ಟೆಯಿಂದ ಹೆಚ್ಚಿನ ಪ್ರಮಾಣದ ನೀರು ಹರಿಬಿಟ್ಟಿ ಪರಿಣಾಮ ಕರಕಲಗಡ್ಡಿ ನಡುಗಡ್ಡೆಯಲ್ಲಿನ ಜನರು ಸಿಲುಕಿಕೊಂಡಿದ್ದು, ಪಾರ್ಶ್ವವಾಯು ಪೀಡಿತನಿಗೆ ಔಷಧ ಸೇರಿದಂತೆ ಉಳಿದ ಜನರಿಗೆ ಅಗತ್ಯ ವಸ್ತುಗಳನ್ನು ಡ್ರೋನ್​​ ಕ್ಯಾಮೆರಾದ ಸಹಾಯದಿಂದ ಪೂರೈಕೆ ಮಾಡಲಾಯಿತು.

ಡ್ರೋನ್​ ಕ್ಯಾಮೆರಾ ಮೂಲಕ ಅಗತ್ಯ ವಸ್ತುಗಳ ಪೂರೈಕೆ

ತಾಲೂಕು ಸಹಾಯಕ ಆಯುಕ್ತ ರಾಜಶೇಖರ ಡಂಬಳ ನೇತೃತ್ವದಲ್ಲಿ ಕರಕಲಗಡ್ಡಿಯಲ್ಲಿ ವಾಸವಿರುವ ಕುಟುಂಬಸ್ಥರ ಮನವಿ ಮೇರೆಗೆ ಈ ಕಾರ್ಯ ನಡೆದಿದ್ದು, ಕೃಷಿ ವಿಶ್ವವಿದ್ಯಾಲಯದ ಡ್ರೋನ್​​​ ನಿಯಂತ್ರಣಾಧಿಕಾರಿಗಳ ಸಹಯೋಗದಲ್ಲಿ ಔಷಧ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಮಾಡುವ ಯಶಸ್ವಿ ಕಾರ್ಯಾಚರಣೆ ನಡೆಯಿತು. ನಾರಾಯಣಪುರ ಅಣೆಕಟ್ಟೆಯಿಂದ ತೀವ್ರ ಪ್ರಮಾಣದ ನೀರು ಹರಿಬಿಟ್ಟಿದ್ದರಿಂದ ಕರಕಲಗಡ್ಡಿ ಜನರ ಸ್ಥಳಾಂತರ ಸಾಧ್ಯವಾಗಿರಲಿಲ್ಲ. ನಡುಗಡ್ಡೆಯಲ್ಲಿ ಸಿಲುಕಿರುವ ಅನಾರೋಗ್ಯ ಪೀಡಿತ ವ್ಯಕ್ತಿಗೆ ಮಾತ್ರೆ ನೀಡುವುದು ಮತ್ತು ಅಗತ್ಯ ಪಡಿತರ ನೀಡಲು ಈ ಮಾರ್ಗ ಅನಿವಾರ್ಯ ಎಂದು ತಿಳಿದ ತಾಲೂಕು ಆಡಳಿತ ಡ್ರೋನ್ ಮೂಲಕ ವಸ್ತುಗಳನ್ನು ಪೂರೈಸಿ ಜನರ ಕಷ್ಟಕ್ಕೆ ಸ್ಪಂದಿಸಿದೆ.

ಈ ವೇಳೆ, ಸಹಾಯಕ ಆಯುಕ್ತ ರಾಜಶೇಖರ ಡಂಬಳ ಮಾತನಾಡಿ, ನಡುಗಡ್ಡೆ ಪ್ರದೇಶಗಳ ಜನತೆ ರಕ್ಷಣೆಗೆ ನಮ್ಮ ಆಡಳಿತ ಬದ್ಧವಾಗಿದೆ. ಅಲ್ಲಿನ ಜನರ ಪರಿಸ್ಥಿತಿ ಅರಿತ ನಾವು ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಅಲ್ಲಿನ ಜನರ ಸಹಕಾರ ತಮಗೆ ಅತ್ಯಗತ್ಯ ಎಂದರು.

Last Updated :Aug 21, 2020, 1:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.