ETV Bharat / state

ಆರೋಗ್ಯವಂತ ಮಕ್ಕಳಿಗಾಗಿ ಪೋಲಿಯೋ ಲಸಿಕೆ ಹಾಕಿಸಿ.. ಜಿಪಂ ಸಿಇಒ ಲಕ್ಷ್ಮಿಕಾಂತರೆಡ್ಡಿ ಮನವಿ..

author img

By

Published : Jan 19, 2020, 2:20 PM IST

National Pulse Polio Campaign
ಪಲ್ಸ್ ಪೋಲಿಯೊ ಅಭಿಯಾನ

ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಜಿಪಂ ಸಿಇಒ ಲಕ್ಷ್ಮಿಕಾಂತ ರೆಡ್ಡಿ ಚಾಲನೆ ನೀಡಿದರು.

ರಾಯಚೂರು: ಮಕ್ಕಳು ಆರೋಗ್ಯದಿಂದ ಇರಬೇಕಾದರೆ ಪಾಲಕರು ತಪ್ಪದೇ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕೆಂದು ಜಿಪಂ ಸಿಇಒ ಲಕ್ಷ್ಮಿಕಾಂತರೆಡ್ಡಿ ತಿಳಿಸಿದರು. ನಗರದ ಕೆಇಬಿ ಸರ್ಕಾರಿ ಪ್ರಾಥಮಿಕ ಹಿರಿಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಯಚೂರು ತಾಲೂಕಿನಲ್ಲಿ ಸುಮಾರು ಎರಡೂವರೆ ಲಕ್ಷ ಮಕ್ಕಳಿಗೆ ಇಂದು ಪೋಲಿಯೋ ಹಾಕಲಾಗುತ್ತಿದೆ. ರಾಯಚೂರು ತಾಲೂಕಿನಲ್ಲಿ 2,35 ಮೇಲ್ವಿಚಾರಕರನ್ನು ನೇಮಿಸಲಾಗಿದೆ. 1,000 ಬೂತ್​ಗಳು ಹಾಗೂ 3,450 ಪೋಲಿಯೋ ಡ್ರಾಪ್​ಗಳಿವೆ ಎಂದರು.

ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆ, ಸಮುದಾಯದ ಭವನ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಜನವರಿ 23ರವರೆಗೆ ಪೋಲಿಯೋ ಲಸಿಕೆ ಹಾಕಲಾಗುತ್ತದೆ. ಈ ನಿಟ್ಟಿನಲ್ಲಿ ಪಾಲಕರು ತಪ್ಪದೇ ಮಕ್ಕಳಿಗೆ ಲಸಿಕೆ ಹಾಕಿಸಲು ಮನವಿ ಮಾಡಿದರು.

Intro:ರಾಯಚೂರು. ಜ.19
ಐದು ವರ್ಷದೊಳಗಿನ ಮಕ್ಕಳು ಅರೋಗ್ಯ ವಂತರಾಗಿರಬೇಕಾದರೆ ಪಾಲಕರು ತಪ್ಪದೇ ತಮ್ಮ ಮಕ್ಕಳಿಗೆ ಪೊಲೀಯೂ ಲಸಿಕೆ ಹಾಕಿಸಬೇಕೆಂದು ಜಿ.ಪಂ ಸಿಇಒ ಲಕ್ಷ್ಮಿಕಾಂತರೆಡ್ಡಿ ಅವರು ತಿಳಿಸಿದರು.
Body:ಅವರು ಇಂದು ನಗರದ ಕೆಇಬಿ ಸರಕಾರಿ ಪ್ರಾಥಮಿಕ ಹಿರಿಯ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಪಲ್ಸ್ ಪೋಲಿಯೊ ಅಭಿಯಾನಕ್ಕೆ ಮಗುವಿಗೆ ಪೊಲೀಯೂ ಹನಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೊಲೀಯೂ ಹನಿ ಹಾಕಿಸಬೇಕು, ರಾಯಚೂರು ತಾಲೂಕಿನಲ್ಲಿ ಸುಮಾರು ಎರಡು ವರೆ ಲಕ್ಷ ಮಕ್ಕಳಿಗೆ ಇಂದು ಪೊಲೀಯೂ ಹಾಕಲಾಗುತ್ತದೆ. ಶೂನ್ಯದಿಂದ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಾಲಕರು ಪೊಲೀಯೂ ಹಾಕಿಸಬೇಕು ಎಂದರು.
ರಾಯಚೂರು ತಾಲೂಕಿನಲ್ಲಿ ೨೩೫ ಮೇಲ್ವಿಚಾರಕನ್ನು ನೇಮಿಸಲಾಗಿದೆ. ೧೦೦೦ಬೂತ್ ಗಳಿವೆ. ೩೪೫೦ ಪೊಲೀಯೂ ಡ್ರಾಪ್ ಗಳಿವೆ. ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆ ಮತ್ತು ಸಮುದಾಯದ ಭವನ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೊಲೀಯೂ ಹನಿ ಹಾಕಲಾಗುತ್ತದೆ ಎಂದರು.
ಇಂದಿನಿಂದ ಇದೇ ಜನವರಿ ೨೩ ರ ವರೆಗೆ ಪೊಲೀಯೂ ಹಾಕಲಾಗುತ್ತದೆ. ಈ ನಿಟ್ಟಿನಲ್ಲಿ ಪಾಲಕರು ತಪ್ಪದೇ ನಿಮ್ಮ ಮಕ್ಕಳಿಗೆ ಪೊಲೀಯೂ ಹನಿ ಹಾಕಿಸಬೇಕು ಎಂದರು.
ಜಿಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ರಾಮಕೃಷ್ಣ ಯತೀಶ್ ಕುಮಾರ್ ಡಾಕ್ಟರ್ ಗಣೇಶ್ ಡಾಕ್ಟರ್ ಜಾಕಿರ್ ಡಾಕ್ಟರ್ ವಿಜಯ ಡಾಕ್ಟರ್ ಸುರೇಂದ್ರಬಾಬು ಡಾಕ್ಟರ್ ಲಲಿತ ಉಪ ನಿರ್ದೇಶಕ ವೀರನಗೌಡ ಗೋಕುಲ ಡಾಕ್ಟರ್ ಜಯಂತಿ ಡಾಕ್ಟರ್ ವೆಂಕಟೇಶ್ ನಾಯಕ ಡಾಕ್ಟರ್ ಬಸವರಾಜ ವೆಂಕಟೇಶ್ ಏನ್ ಶಿವಶಂಕರ ವೀರೇಶ ವಿಶ್ವನಾಥ ಹಿರೇಮಠ ಜೈಕುಮಾರ್ ರವಿಕುಮಾರ ಕೃಷ್ಣ ಪ್ರಕಾಶ್ ಅಪರ ಜಿಲ್ಲಾಧಿಕಾರಿ ದುರ್ಗೇಶ ಡಾಕ್ಟರ್ ಲಕ್ಷ್ಮೀಬಾಯಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.