ETV Bharat / state

ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ಕುರಿತು ಹೈಕಮಾಂಡ್​ ನಿರ್ಧರಿಸುತ್ತೆ: ಸಂಗಣ್ಣ ಕರಡಿ

author img

By

Published : Nov 14, 2019, 11:12 PM IST

ಕೊಪ್ಪಳ ಸಂಸದ ಸಂಗಣ್ಣ ಕರಡಿ

ಜೆಡಿಎಸ್-ಕಾಂಗ್ರೆಸ್ ಒಳ ಜಗಳದಿಂದ ಬೇಸತ್ತು ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದಾರೆ. ಈಗ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡುವ ಕುರಿತು ಹೈಕಮಾಂಡ್ ತೀರ್ಮಾನಿಸುತ್ತೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.


ರಾಯಚೂರು: ಬಿಜೆಪಿ ಯಾವುದೇ ಕುದುರೆ ವ್ಯಾಪಾರ ಮಾಡಿಲ್ಲ. ಜೆಡಿಎಸ್-ಕಾಂಗ್ರೆಸ್​ನಲ್ಲಿದ್ದ ಒಳ ಜಗಳದಿಂದ ಬೇಸತ್ತು ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಒಳ ಬೇಗುದಿಯಿಂದ ಮಸ್ಕಿಯ ಪ್ರತಾಪ್ ಗೌಡ ರಾಜೀನಾಮೆ ನೀಡಿದ್ದರು. ಈಗ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡುವ ಕುರಿತು ಹೈಕಮಾಂಡ್ ತೀರ್ಮಾನಿಸುತ್ತೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.

ಉಪ ಚುನಾವಣೆಯಲ್ಲಿ ಟಿಕೆಟ್​ ನೀಡುವ ಕುರಿತು ಹೈಕಮಾಂಡ್​ ನಿರ್ಧರಿಸುತ್ತೆ: ಸಂಗಣ್ಣ ಕರಡಿ

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡ ದಿಶಾ ಸಭೆಯ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಯಚೂರಿನ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪ್ ಗೌಡ ಕಾಂಗ್ರೆಸ್ ಒಳ ಜಗಳದಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಅವರೀಗ ಚುನಾವಣೆಗೆ ನಿಲ್ಲಬಹುದೆಂದು ಸುಪ್ರೀಂಕೋರ್ಟ್​ ತಿಳಿಸಿದೆ. ಬಿಜೆಪಿಯಿಂದ ಟಿಕೆಟ್ ಯಾರಿಗೆ ನೀಡಬೇಕೆಂದು ಪಕ್ಷದ ವರಿಷ್ಠರು, ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.

ರಾಹುಲ್ ಗಾಂಧಿ ಅವರಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಹಿರಿಯ ನಾಯಕರು ಯಾವುದೇ ವಿಚಾರ ಹಾಗೂ ಟೀಕೆ ಮಾಡುವ ಮುನ್ನ ಆಧಾರಗಳಿದ್ದರೆ ನೋಡಬೇಕು. ಇಲ್ಲದೇ ಹೋದಲ್ಲಿ‌ ಮುಜುಗರಕ್ಕೆ ಈಡಾಗುವುದು ಸಾಮಾನ್ಯ ಎಂದು ತಿಳಿಸಿದರು.

Intro:ಬಿಜೆಪಿ ಯಾವುದೇ ಕುದುರೆ ವ್ಯಾಪಾರ ಮಾಡಿಲ್ಲ, ಜೆಡಿಎಸ್- ಕಾಂಗ್ರೆಸ್ ನಲ್ಲಿದ್ದ ಒಳ ಜಗಳದಿಂದ ಬೇಸತ್ತು ಅತೃಪ್ತ ಶಾಸಕರು ರಾಜಿನಾಮೆ ನೀಡಿದ್ದಾರೆ,ಕಾಂಗ್ರೆಸ್ ಒಳ ಬೇಗುದಿಯಿಂದ ಮಸ್ಕಿಯ ಪ್ರತಾಪ್ ಗೌಡ ರಾಜಿನಾಮೆ ನೀಡಿದ್ದರು, ಈಗ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡುವ ಕುರಿತು ಹೈಕಮಾಂಡ್ ತೀರ್ಮಾನಿಸುತ್ತೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.


Body:ಅವರಿಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡ ದಿಶಾ ಸಭೆಯ ಮುನ್ನ ಮಾಧ್ಯಮ ಗಳೊಂದಿಗೆ ಮಾತನಾಡಿ, ರಾಯಚೂರಿನ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪ್ ಗೌಡ ಕಾಂಗ್ರೆಸ್ ಒಳ ಜಗಳದಿಂದ ಬೇಸತ್ತು ರಾಜಿನಾಮೆ ನೀಡಿದ್ದು, ಸುಪ್ರೀಂ ಕೋರ್ಟ್ನಿಂದ ಈಗ ಚುನಾವಣೆಗೆ ನಿಲ್ಲಬಹುದು ಎಂದು ಹೇಳಿದ್ದು ಬಿಜೆಪಿಯಿಂದ ಟಿಕೆಟ್ ಯಾರಿಗೆ ನೀಡಬೇಕೆಂದು ಪಕ್ಷದ ವರಿಷ್ಟರು ,ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.
ಬಿಜೆಪಿ ಕಾರ್ಯಕರ್ತರು ಪ್ರತಾಪ್ ಗೌಡರಿಗೆ ಟಿಕೆಟ್ ನೀಡಬೇಕೆಂದು ಹೇಳುತಿದ್ದಾರೆ ಎಂದ ಅವರು ಬಿಜೆಪಿ ಪರಾಜಿತ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅವರು ಅಸಮಧಾನಗೊಂಡಿದ್ದಾರೆಂಬುದು ಸತ್ಯವಲ್ಲ ಅವರು ಯಾವುದೇ ಅಸಮಧಾನ ವ್ಯಕ್ತಪಡಿಸಿಲ್ಲ, ಈಗಾಗಲೇ ಸಭೆ ಮಾಡಿ‌ ಸಂದಾನ ಮಾಡಿದ್ದೇವೆ ಸಣ್ಣ ಪುಟ್ಟ ಗೊಂದಲಗಳು ಇವೆ ನಿಜ ಕಾರ್ಯಕರ್ತರು ಒಂದು ಪಕ್ಷದಿಂದ ಹೋರಾಟ ಮಾಡಿದ್ದಾರೆ ಕಾರ್ಯಕರ್ತರನ್ನು ಸಮಾಧಾನ ಮಾಡುತ್ತೇವೆ ಎಂದರು.

ರಾಹುಲ್ ಗಾಂಧಿ ಅವರಿಗೆ ಸುಪ್ರಿಂ ಕೋರ್ಟ್ ಚಾಟಿ ಬೀಸಿದ ಕುರಿತು ಪ್ರತಿಕ್ರಿಯಿಸಿ, ಹಿರಿಯ ನಾಯಕರು ಯಾವುದೇ ವಿಚಾರ ಹಾಗೂ ಟೀಕೆ ಮಾಡುವ ಮುನ್ನ ಸಂಯಮ ಹಾಗೂ ಆಧಾರಗಳಿದ್ದರೆ ಆರೋಪ, ಟೀಕೆ ಮಾಡಬೇಕು ಇಲ್ಲದೇ ಹೋದಲ್ಲಿ‌ ಮುಜುಗರಕ್ಕೆ ಈಡಾಗುವುದು ಸಾಮಾನ್ಯ ಎಂದು ಪ್ರಧಾನಿ ಮೋದಿ ಅವರ ಚೌಕಿದಾರ್ ಚೋರ್ ಕುರಿತ ವಿವಾದದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.