ETV Bharat / state

ನಿರುದ್ಯೋಗ ಸಮಸ್ಯೆ: ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ

author img

By

Published : Aug 2, 2019, 12:30 PM IST

ಮೃತ ಯುವಕ ಅರುಣ್

ಅಶೋಕಪುರಂ‌ ನಿವಾಸಿ ಶ್ರೀನಿವಾಸ್ ಎಂಬುವರ ಪುತ್ರ ಅರುಣ್(22) ಆತ್ಮಹತ್ಯೆ ಮಾಡಿಕೊಂಡ ಯುವಕ. ಬಿಕಾಂ ಮುಗಿಸಿದ್ದ ಅರುಣ್​ಗೆ ಕೆಲಸಕ್ಕೆ ಹೋಗುವಂತೆ ತಂದೆ ಶ್ರೀನಿವಾಸ್ ಬುದ್ಧಿವಾದ ಹೇಳಿದ್ದರು. ಕೆಲಸದ ಹುಡುಕಾಟದಲ್ಲಿದ್ದ ಅರುಣ್ ಗುರುವಾರ ರಾತ್ರಿ ಮನೆ ಬಿಟ್ಟು ಹೋಗಿದ್ದು ಮರಳಿ ಬಂದಿರಲಿಲ್ಲ.

ಮೈಸೂರು: ನಿರುದ್ಯೋಗ ಸಮಸ್ಯೆಯಿಂದ ಬೇಸತ್ತ ಯುವಕನೋರ್ವ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಅಶೋಕಪುರಂ‌ ನಿವಾಸಿ ಶ್ರೀನಿವಾಸ್ ಎಂಬುವರ ಪುತ್ರ ಅರುಣ್(22) ಆತ್ಮಹತ್ಯೆ ಮಾಡಿಕೊಂಡ ಯುವಕ. ಬಿಕಾಂ ಮುಗಿಸಿದ್ದ ಅರುಣ್​ಗೆ ಕೆಲಸಕ್ಕೆ ಹೋಗುವಂತೆ ತಂದೆ ಶ್ರೀನಿವಾಸ್ ಬುದ್ಧಿವಾದ ಹೇಳಿದ್ದರು. ಕೆಲಸದ ಹುಡುಕಾಟದಲ್ಲಿದ್ದ ಅರುಣ್ ಗುರುವಾರ ರಾತ್ರಿ ಮನೆ ಬಿಟ್ಟು ಹೋಗಿದ್ದ.‌ ಮಗ ಎಷ್ಟು ಹೊತ್ತಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಆತಂಕಗೊಂಡಿದ್ದರು.

ಅಶೋಕಪುರಂ ಠಾಣೆಗೆ ತೆರಳಿ ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು. ಆದರೆ ಶುಕ್ರವಾರ ಬೆಳಿಗ್ಗೆ ರೈಲ್ವೆ ಹಳಿ ಬಳಿ ಅರುಣ್ ಶವವಾಗಿ ಪತ್ತೆಯಾಗಿದ್ದಾನೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Intro:ಆತ್ಮಹತ್ಯೆBody:ನಿರುದ್ಯೋಗದ ಸಮಸ್ಯೆ ರೈಲಿಗೆ ತಲೆಕೊಟ್ಟುಯುವಕ ಆತ್ಮಹತ್ಯೆಗೆ ಶರಣು
ಮೈಸೂರು:ನಿರುದ್ಯೋಗ ಸಮಸ್ಯೆಯಿಂದ ಬೇಸತ್ತ ಯುವಕನೋರ್ವ ಚಲಿಸುತ್ತಿದ್ದ ರೈಲಿಗೆ ತಲೆಕಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಅಶೋಕಪುರಂ‌ ನಿವಾಸಿ ಶ್ರೀನಿವಾಸ್ ಅವರ ಪುತ್ರ ಅರುಣ್(22) ಆತ್ಮಹತ್ಯೆ ಮಾಡಿಕೊಂಡಾತ.ಬಿಕಾಂ ಮುಗಿಸಿದ್ದ ಅರುಣ್ ಗೆ ಕೆಲಸಕ್ಕೆ ಹೋಗುವಂತೆ ತಂದೆ ಶ್ರೀನಿವಾಸ್ ಬುದ್ದಿವಾದ ಹೇಳಿದ್ದರು. ಕೆಲಸದ ಹುಡುಕಾಟದಲ್ಲಿದ್ದ ಅರುಣ್ ಗುರುವಾರ ರಾತ್ರಿ ಮನೆ ಬಿಟ್ಟು ಹೋಗಿದ್ದ.‌ಮಗ ಎಷ್ಟೊತ್ತಾದರೂ ಮನೆಗೆ ಬಾರದ ಹಿನ್ನಲೆಯಲ್ಲಿ ಪೋಷಕರು ಆತಂಕಗೊಂಡಿದ್ದರು.
ಅಶೋಕಪುರಂ ಠಾಣೆಗೆ ತೆರಳಿ ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು.ಆದರೆ ಶುಕ್ರವಾ ಬೆಳಿಗ್ಗೆ ರೈಲ್ವೆ ಟ್ರಾಕ್ ಬಳಿಕ  ಅರುಣ್ ಶವವಾಗಿ ಪತ್ತೆಯಾಗಿದ್ದಾನೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.Conclusion:ಆತ್ಮಹತ್ಯೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.