ETV Bharat / state

ಸಂತ್ರಸ್ತೆ ಯಾರ ಜೊತೆಯೂ ಮಾತನಾಡುವ ಸ್ಥಿತಿಯಲ್ಲಿಲ್ಲ: ಸಚಿವೆ ಶಶಿಕಲಾ ಜೊಲ್ಲೆ

author img

By

Published : Aug 26, 2021, 10:22 PM IST

ಸಚಿವೆ ಶಶಿಕಲಾ ಜೊಲ್ಲೆ
ಸಚಿವೆ ಶಶಿಕಲಾ ಜೊಲ್ಲೆ

ಅತ್ಯಾಚಾರ ಸಂತ್ರಸ್ತೆ ಸ್ಥಿತಿ ಸ್ಥಿರವಾಗಿದ್ದು, ಆಕೆ ಸದ್ಯ ಯಾರ ಜತೆಯೂ ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದು ವಕ್ಫ್​​ ಹಾಗೂ ಹಜ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಮೈಸೂರು : ಅತ್ಯಾಚಾರ ಸಂತ್ರಸ್ತೆ ನಾನು ಇನ್ನೂ ಎರಡು ದಿನ ಯಾರ ಜೊತೆಯೂ ಮಾತಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ಅವರನ್ನು ಮಾತನಾಡಿಸಲು ಹೋಗಿಲ್ಲ ಎಂದು ಮುಜರಾಯಿ, ವಕ್ಫ್​​ ಹಾಗೂ ಹಜ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರಂ ನಿರ್ಜನ ಪ್ರದೇಶದಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ನಂತರ ಮಾತನಾಡಿದ ಅವರು, ಬೇರೆ ಸರ್ಕಾರಗಳು ಇದ್ದಾಗಲೂ ಈ ರೀತಿ ಕೇಸ್ ಆಗಿವೆ. ನಮ್ಮ ಸರ್ಕಾರ ಈ ಕೇಸ್ ಅನ್ನು ಗಂಭೀರವಾಗಿ ಪರಿಗಣಿಸಿದೆ. ಶೀಘ್ರವೇ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದರು.

ಇದನ್ನೂ ಓದಿ: Mysuru Gangrape Case: ಮೂವರು ಆರೋಪಿಗಳ ಬಂಧನ?..ಪೊಲೀಸ್​ ತನಿಖೆ ಇನ್ನಷ್ಟು ಚುರುಕು!!

ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಮಧ್ಯಾಹ್ನದಿಂದ ಊಟ ಮಾಡುತ್ತಿದ್ದಾಳೆ. ನನಗೆ ಎರಡು - ಮೂರು ದಿನ ವಿಶ್ರಾಂತಿ ಬೇಕು. ಆವರೆಗೆ ನಾನು ಯಾರ ಜತೆಯೂ ಮಾತಾಡಲ್ಲ ಎಂದಿದ್ದಾಳೆ ಎಂದು ಜೊಲ್ಲೆ ಹೇಳಿದರು. ಪೋಷಕರು ಅದೇ ಮಾತನ್ನು ಹೇಳಿದ್ದಾರೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.