ETV Bharat / state

'ಮೈಸೂರು ದಸರಾ ಎಂದರೆ ಕುಸ್ತಿ, ಕುಸ್ತಿ ಎಂದರೆ ದಸರಾ': ಕುತೂಹಲದ ಮಾಹಿತಿ

author img

By ETV Bharat Karnataka Team

Published : Oct 10, 2023, 8:04 PM IST

Updated : Oct 10, 2023, 9:07 PM IST

ದಸರಾದಲ್ಲಿ ಕುಸ್ತಿ ಪಂದ್ಯಾವಳಿ
ದಸರಾದಲ್ಲಿ ಕುಸ್ತಿ ಪಂದ್ಯಾವಳಿ

ಇಂದಿಗೂ ಮೈಸೂರು ದಸರಾ ಸಂದರ್ಭದಲ್ಲಿ ರಾಜ ಪರಂಪರೆಯ ಕುಸ್ತಿ ಪಂದ್ಯಾವಳಿ ನಡೆಯುತ್ತದೆ.

ಮೈಸೂರು : ರಾಜ ಪರಂಪರೆಯ ಪ್ರತೀಕವಾದ ಕುಸ್ತಿಗೆ ಮೈಸೂರು ದಸರಾದಲ್ಲಿ ತನ್ನದೇ ಆದ ಮಹತ್ವವಿದೆ. ಇಲ್ಲಿ ದಸರಾ ಎಂದರೆ ಕುಸ್ತಿ, ಕುಸ್ತಿ ಎಂದರೆ ದಸರಾ ಎನ್ನುವಷ್ಟರ ಮಟ್ಟಿಗೆ ಜನರ ಉಸಿರಾಗಿದೆ. ನಾಡಹಬ್ಬದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕುಸ್ತಿಯ ಗರಡಿ ಮನೆಗಳು ಹೇಗಿವೆ, ಕುಸ್ತಿ ಪಟುಗಳು ಹೇಗೆ ತಯಾರಾಗುತ್ತಾರೆ, ಕುಸ್ತಿಯಲ್ಲಿ ಎಷ್ಟು ವಿಧ, ದಸರಾದಲ್ಲಿ ನಾಡ ಕುಸ್ತಿ ಹೇಗೆ ನಡೆಯುತ್ತದೆ ಎಂಬೆಲ್ಲ ವಿವರ ಇಲ್ಲಿದೆ.

ಪೈಲ್ವಾನ್ ಚಂದ್ರಶೇಖರ್ ಮಾತು

ರಾಜ ವಂಶಸ್ಥರು ನಗರದಲ್ಲಿ ಕುಸ್ತಿ ಗರಡಿ ಮನೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಇಂದಿಗೂ ಪರಂಪರೆಯ ಕುಸ್ತಿ ಪಂದ್ಯಾವಳಿಗಳು ದಸರಾ ವೇಳೆ ನಡೆಯುತ್ತವೆ. ನಗರದಲ್ಲಿ ನೂರಕ್ಕೂ ಹೆಚ್ಚು ಗರಡಿ ಮನೆಗಳಿವೆ. ಪ್ರತಿನಿತ್ಯ ತರಬೇತಿಗಳು ನಡೆಯುತ್ತಲೇ ಇರುತ್ತವೆ.

ಕುಸ್ತಿ
ಕುಸ್ತಿ

ಗರಡಿ ಮನೆಯಲ್ಲಿ ತರಬೇತಿಗಳು ವರ್ಷಪೂರ್ತಿ ನಡೆಯುತ್ತವೆ. ಈ ಮೂಲಕ ನಾಡಹಬ್ಬ ದಸರಾಗೆ ಯುವಕರು ತಯಾರಾಗುತ್ತಾರೆ. ಪ್ರತಿನಿತ್ಯ ಈ ಮನೆಗಳಲ್ಲಿ ಗುರುಗಳಿಂದ ಕುಸ್ತಿಯ ಅಭ್ಯಾಸ, ಆಹಾರ ಕ್ರಮ ಎಲ್ಲವೂ ನಿಯಮದ ರೀತಿಯಂತೆ ನಡೆಯುತ್ತವೆ. ಅದಕ್ಕಾಗಿಯೇ ಮೈಸೂರಿನಲ್ಲಿ ಕುಸ್ತಿ ಉಳಿವಿಗಾಗಿ ಜಿಲ್ಲಾ ಕುಸ್ತಿ ಸಂಘ ಎಂದು ಸ್ಥಾಪನೆ ಮಾಡಲಾಗಿದೆ. ಈ ಮೂಲಕ ಶಿಸ್ತುಬದ್ಧ ತರಬೇತಿ ಪಡೆದ ಪೈಲ್ವಾನರು ರಾಜ್ಯಾದ್ಯಂತ ಅಲ್ಲದೇ, ಹೊರ ರಾಜ್ಯಗಳಲ್ಲೂ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯುತ್ತಾರೆ ಎಂದು ಸ್ವತಃ ಪೈಲ್ವಾನ್ ಆಗಿದ್ದ ಚಂದ್ರಶೇಖರ್ ಈಟಿವಿ ಭಾರತ್​ಗೆ ವಿವರಿಸಿದರು.

ಕುಸ್ತಿ
ಕುಸ್ತಿ

ಈ ಬಾರಿ 220 ಜೋಡಿ ಭಾಗಿ: ದಸರಾ ಅಂಗವಾಗಿ ಅಕ್ಟೋಬರ್ 15 ರಿಂದ ಅಕ್ಟೋಬರ್ 21 ರವರೆಗೆ 7 ದಿನ ನಗರದ ವಸ್ತು ಪ್ರದರ್ಶನದ ಆವರಣದಲ್ಲಿರುವ ಕುಸ್ತಿ ಅಖಾಡ ಕಾಳಿಂಗ ರಾವ್ ಗಾಯನ ಮಂಟಪದಲ್ಲಿ ಪಂದ್ಯಾವಳಿಗಳು ನಡೆಯಲಿದೆ. ಕಳೆದ ಭಾನುವಾರ ನಾಡಕುಸ್ತಿ ಜೋಡಿ ಕಟ್ಟುವ ಪ್ರಕ್ರಿಯೆ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿದ್ದರು. ಕುಸ್ತಿ ಪಟುಗಳ ತೂಕ ಮತ್ತು ವಯಸ್ಸಿನ ಆಧಾರದ ಮೇಲೆ ಈ ಬಾರಿಯ ನಾಡಹಬ್ಬ ದಸರಾದಲ್ಲಿ 220 ಜೊತೆ ಜೋಡಿ ಕಟ್ಟಲಾಯಿತು. ಕಳೆದ ಬಾರಿಗೆ ಹೋಲಿಸಿದರೆ, ಈ ಸಲ ಕುಸ್ತಿಗೆ ಹೆಚ್ಚಿನ ಪಟುಗಳು ಆಗಮಿಸಿದ್ದು ವಿಶೇಷ. ಮೈಸೂರಿನಲ್ಲಿ ನಾಡ ಕುಸ್ತಿ ಅಂದರೆ ಮಣ್ಣಿನ ಮೇಲೆ ನಡೆಯುವ ಕುಸ್ತಿ ಹೆಚ್ಚು ಪ್ರಸಿದ್ಧಿ ಪಡೆದಿದ್ದು, ಇದರ ಜೊತೆಗೆ ಮ್ಯಾಟ್ ಮೇಲೆ ನಡೆಯುವ ಪಾಯಿಂಟ್ ಕುಸ್ತಿಯೂ ಸಹ ತನ್ನದೇ ಮಹತ್ವ ಪಡೆದಿದೆ.

ಕುಸ್ತಿ
ಕುಸ್ತಿ

ಇಲ್ಲಿ ನಡೆಯುವ ಕುಸ್ತಿ ಪಂದ್ಯಗಳಲ್ಲಿ ಗೆದ್ದವರಿಗೆ ಸಾಹುಕಾರ್ ಚನ್ನಯ್ಯ ಕಪ್, ಮೇಯರ್ ಕಪ್, ಮೈಸೂರು ಮಹಾರಾಜರ ಒಡೆಯರ್ ಕಪ್ ಹಾಗೂ ನಗದು ಬಹುಮಾನ ನೀಡಲಾಗುತ್ತದೆ. ಇದರ ಜೊತೆಗೆ ಹಲವಾರು ಬಿರುದುಗಳನ್ನೂ ಸಹ ನೀಡಿ, ಪಟುಗಳನ್ನು ಗೌರವಿಸಲಾಗುತ್ತದೆ.

ಇದನ್ನೂ ಓದಿ: ಮೈಸೂರು ದಸರಾ: ಪ್ರವಾಸಿಗರಿಗೆ ಚಿನ್ನದ ಸಿಂಹಾಸನ ವೀಕ್ಷಿಸುವ ಭಾಗ್ಯ; ಷರತ್ತುಗಳು ಅನ್ವಯ!

Last Updated :Oct 10, 2023, 9:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.