ETV Bharat / state

'ಮೊಮ್ಮಗ ಧವನ್ ರಾಕೇಶ್ ನನ್ನ ಉತ್ತರಾಧಿಕಾರಿ': ಸಿದ್ದರಾಮಯ್ಯ ಘೋಷಣೆ

author img

By

Published : Apr 19, 2023, 4:47 PM IST

Updated : Apr 19, 2023, 5:33 PM IST

Dhawan Rakesh is my successor Siddaramaiah announcement
ಕಾಂಗ್ರೆಸ್ ಸಮಾವೇಶದಲ್ಲಿ ಮೊಮ್ಮಗ ಧವನ್ ರಾಕೇಶ್ ನನ್ನ ಉತ್ತರಾಧಿಕಾರಿ ಸಿದ್ದರಾಮಯ್ಯ ಘೋಷಣೆ

ಇದು ನನ್ನ ಕೊನೆಯ ಚುನಾವಣೆ. ಮೊಮ್ಮಗ ಧವನ್ ಮುಂದಿನ ದಿನಗಳಲ್ಲಿ ನಿಮ್ಮ ಸೇವೆಗೆ ಬರುತ್ತಾನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಮೊಮ್ಮಗ ಧವನ್ ರಾಕೇಶ್ ನನ್ನ ಉತ್ತರಾಧಿಕಾರಿ ಸಿದ್ದರಾಮಯ್ಯ ಘೋಷಣೆ

ಮೈಸೂರು: ಇದು ನನ್ನ ಕೊನೆಯ ಚುನಾವಣೆಯಾಗಿದೆ. ಮುಂದಿನ ದಿನಗಳಲ್ಲಿ ಯತೀಂದ್ರ ಜತೆಗೆ ಧವನ್ ವಿದ್ಯಾಭ್ಯಾಸದ ನಂತರ ನಿಮ್ಮ ಸೇವೆಗೆ ಬರುತ್ತಾನೆ. ದಿವಂಗತ ರಾಕೇಶ್ ಮೇಲೆ ಜನರು ಪ್ರೀತಿ ಇಟ್ಟಿದ್ದರು. ಅದೇ ರೀತಿ ಅವನ ಮಗ ಧವನ್ ರಾಕೇಶ್ ಮೇಲೂ ಜನರಿಗೆ ಪ್ರೀತಿಯಿದೆ ಎಂದು ನಂಜನಗೂಡಿನ ಸಭೆಯಲ್ಲಿಂದು ಸಿದ್ದರಾಮಯ್ಯ ಪರಿಚಯಿಸಿದರು.

ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ನಂಜನಗೂಡು ಹೊರವಲಯದ ಗೋಳೂರಿನ ಬಳಿ ಪಕ್ಷದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಧವನ್ ರಾಕೇಶ್ ಅವರನ್ನು ಸಮಾವೇಶದಲ್ಲಿ ಜನರಿಗೆ ಪರಿಚಯ ಮಾಡಿಕೊಟ್ಟರು. ವೇದಿಕೆ ಮುಂಭಾಗದ ಸಾಲಿನಲ್ಲಿ ಕುಳಿತಿದ್ದ ಧವನ್ ರಾಕೇಶ್‌ನನ್ನು ಕರೆದು, ಮೊಮ್ಮಗ ಧವನ್ ಭವಿಷ್ಯದ ವರುಣ ಕ್ಷೇತ್ರದ ನಾಯಕ, ಇವನು ನನ್ನ ಉತ್ತರಾಧಿಕಾರಿ. ಇದು ನನ್ನ ಕೊನೆಯ ಚುನಾವಣೆ. ಮುಂದಿನ ದಿನಗಳಲ್ಲಿ ಯತೀಂದ್ರರೊಂದಿಗೆ ರಾಜಕೀಯದಲ್ಲಿ ಇರುತ್ತಾರೆ‌ ಎಂದು ತಿಳಿಸಿದರು.

ಧವನ್‌ಗೆ ಈಗ 17 ವರ್ಷ. ವಿದ್ಯಾಭ್ಯಾಸ ಮುಗಿಸಿಕೊಂಡು ನಿಮ್ಮ ಸೇವೆಗೆ ಬರುತ್ತಾನೆ. ರಾಕೇಶ್ ಮೇಲೆ ವರುಣ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಜನರು ಪ್ರೀತಿ ಇಟ್ಟಿದ್ದರು. ಅದೇ ರೀತಿ ಪ್ರೀತಿ ಮೊಮ್ಮಗನ ಮೇಲೂ ಇದೆ. ದಯವಿಟ್ಟು ತಾವು ಆಶೀರ್ವಾದ ಮಾಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

'ಬಿಜೆಪಿ-ಜೆಡಿಎಸ್ ಒಳಒಪ್ಪಂದ': ನನ್ನನ್ನು ಸೋಲಿಸಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಅದ್ದರಿಂದ ಜೆಡಿಎಸ್​ನವರು ಅಭ್ಯರ್ಥಿಯನ್ನು ಬದಲಿಸಿ ಡಾ.ಭಾರತಿ ಶಂಕರ್ ಅವರನ್ನು ಕರೆತಂದು ನಿಲ್ಲಿಸಿದ್ದಾರೆ. ನನ್ನನ್ನು ಸೋಲಿಸಲು ಬಿಜೆಪಿ ಹಾಗೂ ಜೆಡಿಎಸ್ ಹಣದ ಹೊಳೆಯನ್ನೇ ಹರಿಸಬಹುದು. ಕೊನೆಯ ಚುನಾವಣೆಯಲ್ಲಿ ನನ್ನ ಕೈ ಬಿಡಬೇಡಿ ಎಂದು ಕೇಳಿಕೊಂಡರು.

ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸೂಚನೆ ಇದೆ‌. ಆದ್ದರಿಂದ ಬಿಜೆಪಿಯನ್ನು ಸೋಲಿಸಬೇಕು ಎಂದು‌ ಮತದಾರರಲ್ಲಿ ಮನವಿ ಮಾಡಿದ ಸಿದ್ದರಾಮಯ್ಯ, ವರುಣ ಕ್ಷೇತ್ರ ಎನ್ನುವ ಬದಲು ಚಾಮುಂಡೇಶ್ವರಿ ಕ್ಷೇತ್ರದ ಜನರು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗುವುದಿಲ್ಲ ಎಂದು ಹೇಳಿ‌ ತಕ್ಷಣವೇ ವರುಣ ಕ್ಷೇತ್ರದ ಜನರು ಎಂದು ಸರಿಪಡಿಸಿಕೊಂಡರು.

ಇದನ್ನೂಓದಿ: ಶಿಗ್ಗಾಂವಿಯಲ್ಲಿ ಸಿಎಂ ಭರ್ಜರಿ ರೋಡ್​ ಶೋ: ನಟ ಸುದೀಪ್​, ನಡ್ಡಾ ಜತೆಗೆ ಬಂದು ನಾಮಪತ್ರ ಸಲ್ಲಿಕೆ​.. ಕಾಂಗ್ರೆಸ್​​ ಅಂದರೆ ಭ್ರಷ್ಟಾಚಾರ ಎಂದು ನಡ್ಡಾ ವಾಗ್ದಾಳಿ

Last Updated :Apr 19, 2023, 5:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.