ETV Bharat / state

ಕೇರಳ ಗಡಿ ಭಾಗಕ್ಕೆ ದಿಢೀರ್ ಭೇಟಿ ನೀಡಿದ ಸಚಿವ ಎಸ್.ಟಿ.ಸೋಮಶೇಖರ್​

author img

By

Published : Apr 14, 2020, 8:05 PM IST

ಸಚಿವ ಎಸ್.ಟಿ. ಸೋಮಶೇಖರ್
ಸಚಿವ ಎಸ್.ಟಿ. ಸೋಮಶೇಖರ್

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕೇರಳ-ಕರ್ನಾಟಕ ಚೆಕ್ ಪೋಸ್ಟ್​​ನ ಬಾವಲಿ ಸ್ಥಳಕ್ಕೆ ಸಚಿವ ಎಸ್​​.ಟಿ.ಸೋಮಶೇಖರ್ ಭೇಟಿ ನೀಡಿದ್ರು. ಬರುವ ಹಾಗೂ ಹೋಗುವ ವಾಹನಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರಿಂದ ಮಾಹಿತಿ ಪಡೆದರು.

ಮೈಸೂರು: ಕೇರಳದ ಗಡಿ ಭಾಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಕೇರಳ-ಕರ್ನಾಟಕ ಚೆಕ್ ಪೋಸ್ಟ್ ಇರುವ ಬಾವಲಿ ಸ್ಥಳಕ್ಕೆ ಸಚಿವ ಎಸ್​​.ಟಿ.ಸೋಮಶೇಖರ್ ಭೇಟಿ ನೀಡಿದ್ರು. ಕೊರೊನಾ ತಡೆಗಟ್ಟಲು ತೆಗೆದುಕೊಂಡ ಕ್ರಮಗಳು, ಕೇರಳದಿಂದ ಪ್ರತಿದಿನ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬರುವ ಹಾಗೂ ಹೋಗುವ ವಾಹನಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರಿಂದ ಮಾಹಿತಿ ಪಡೆದರು.

ಗಡಿ ಭಾಗದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಕೊರೊನಾ ಸೋಂಕಿನ ಬಗ್ಗೆ ಯಾವ ರೀತಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆದರು. ಜೊತೆಗೆ ಪ್ರತಿದಿನ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಕೇರಳದಿಂದ ಬರುವ ಹಾಗೂ ಕರ್ನಾಟಕದಿಂದ ಹೋಗುವ ಗೂಡ್ಸ್ ವಾಹನಗಳ ಬಗ್ಗೆ ಯಾವ ರೀತಿ ಕೆಲಸ ಮಾಡಬೇಕು ಎಂಬ ಬಗ್ಗೆ ಸಚಿವರು ಚೆಕ್ ಪೋಸ್ಟ್​​ನ ಸಿಬ್ಬಂದಿಗೆ ಮಾರ್ಗದರ್ಶನ ಸಹ ಮಾಡಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.