ETV Bharat / state

ಜುಬಿಲಂಟ್​ ಕಾರ್ಖಾನೆಗೆ ಸಚಿವ ಸೋಮಶೇಖರ್​ ಭೇಟಿ

author img

By

Published : Apr 11, 2020, 9:40 PM IST

Updated : Apr 11, 2020, 10:04 PM IST

Minister Somashekhar visits Jubilant factory
ಸಚಿವ ಸೋಮಶೇಖರ್​ ಭೇಟಿ

ಮೈಸೂರಿನ ಜುಬಿಲಂಟ್​ ಕಾರ್ಖಾನೆಗೆ ಸಚಿವ ಎಸ್​.ಟಿ.ಸೋಮಶೇಖರ್​ ಭೇಟಿ ನೀಡಿ, ಕೊರೊನಾ ಸೋಂಕಿನ ಬಗ್ಗೆ ಮಾಹಿತಿ ಪಡೆದರು.

ಮೈಸೂರು: ಕೊರೊನಾ ಸೋಂಕು ಹೆಚ್ಚಾಗಿ ಕಂಡು ಬರುತ್ತಿರುವ ಜುಬಿಲಂಟ್ ಕಾರ್ಖಾನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಅಧಿಕಾರಗಳಿಂದ ಮಾಹಿತಿ ಪಡೆದರು.

ಸಚಿವ ಸೋಮಶೇಖರ್​ ಭೇಟಿ

ಜಿಲ್ಲೆಯ ಕೊರೊನಾ ಸೋಂಕಿನ ಹಾಟ್​ ಸ್ಪಾಟ್ ಆಗಿರುವ ನಂಜನಗೂಡಿನ ತಾಂಡ್ಯ ಕೈಗಾರಿಕಾ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಜಿಲ್ಲೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಜುಬಿಲಂಟ್ ಕಾರ್ಖಾನೆಯನ್ನು ಈಗಾಗಲೇ ಕೊರೊನಾ ವೈರಸ್​ನಿಂದ ಮುಚ್ಚಲಾಗಿದೆ. ಆದರೂ ಜುಬಿಲಂಟ್ ಕಾರ್ಖಾನೆಯ ಒಳಗೆ 20 ಸೆಕ್ಯುರಿಟಿ ಗಾರ್ಡ್​ಗಳು ಕೆಲಸ ಮಾಡುತ್ತಿದ್ದು, ಅವರ ಆರೋಗ್ಯದ ದೃಷ್ಟಿಯಿಂದ ಕಾರ್ಖಾನೆ ಒಳಗಡೆ ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸಚಿವರಿಗೆ ವಿವರಿಸಿದರು.

ನಂಜನಗೂಡು ಬಳಿ ಇರುವ ಕೆಲವು ಬಡಾವಣೆಯಲ್ಲಿ ಇಲ್ಲಿನ‌ ನೌಕರರನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿದ್ದು, ಅದರ ಬಗ್ಗೆಯೂ ಸಹ ಸಚಿವರು ಮಾಹಿತಿ ಪಡೆದರು. ಜೊತೆಗೆ ನಂಜನಗೂಡಿನ ನಿರಾಶ್ರಿತರ ಶಿಬಿರಗಳಿಗೂ ಸಹ ಸಚಿವರು ಭೇಟಿ ನೀಡಿದರು.

Last Updated :Apr 11, 2020, 10:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.