ETV Bharat / state

ಮೈಸೂರಿನಲ್ಲಿ ವರುಣಾರ್ಭಟ: ಕುಟುಂಬಸ್ಥರ ಕಣ್ಣೆದುರಿಗೇ ಕೊಚ್ಚಿ ಹೋದ ವ್ಯಕ್ತಿ

author img

By

Published : Oct 25, 2021, 9:42 AM IST

Updated : Oct 25, 2021, 10:01 AM IST

Heavy rain in Mysuru
ಮೈಸೂರಲ್ಲಿ ಧಾರಾಕಾರ ಮಳೆ

ನಿನ್ನೆ ತಡರಾತ್ರಿ ಮೈಸೂರಲ್ಲಿ ಧಾರಾಕಾರ ಮಳೆ ಸುರಿದಿದೆ. ಮನೆಯ ಪಕ್ಕದಲ್ಲಿದ್ದ ಮೋರಿಯಲ್ಲಿ ನೀರು ಹರಿವಿನ ಬಗ್ಗೆ ವೀಕ್ಷಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಜಾರಿ ಬಿದ್ದು ಕೊಚ್ಚಿ ಹೋಗಿದ್ದಾರೆ.

ಮೈಸೂರು: ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಕುಟುಂಬಸ್ಥರ ಕಣ್ಣೆದುರೇ ವ್ಯಕ್ತಿಯೊಬ್ಬರು ಮೋರಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಸಿದ್ದಾರ್ಥ್​ ಲೇಔಟ್​ನ ವಿನಯ ಮಾರ್ಗದ ನಿವಾಸಿ ಎಂ.ಚಂದ್ರೇಗೌಡ ನೀರು ಪಾಲಾಗಿದ್ದಾರೆ.

ಚಂದ್ರೇಗೌಡ, ಮನೆ ಪಕ್ಕದ ಮೋರಿಯ ಬಳಿ ನಿಂತು ನೀರು ಹರಿವಿನ ಬಗ್ಗೆ ವೀಕ್ಷಿಸುತ್ತಿದ್ದಾಗ, ಕಾಲು ಜಾರಿ ಮೋರಿಗೆ ಬಿದ್ದಿದ್ದಾರೆ. ಕುಟುಂಬಸ್ಥರು ಕೂಡಲೇ ಈ ಬಗ್ಗೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಈವರೆಗೆ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಮೈಸೂರಿನ ಕಾರಂಜಿ ಕೆರೆಗೆ ಸಂಪರ್ಕ ಕಲ್ಪಿಸುವ ಕಾಲುವೆಯಲ್ಲಿ ದುರ್ಘಟನೆ ನಡೆದಿದೆ.

‘ರಾಜಕಾಲುವೆ ಒತ್ತುವರಿ ತೆರವುಗೊಳಿಸಿ’

ಆನಂದನಗರ ಬಡಾವಣೆಯ ಮನೆಗಳಿಗೆ ಮಳೆ‌ ನೀರು ನುಗ್ಗಿದ್ದರಿಂದ, ನಿವಾಸಿಗಳು ಪರದಾಡುವಂತಾಯಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಚಾಮುಂಡೇಶ್ವರಿ ಶಾಸಕ ಜಿ‌‌‌.ಟಿ.ದೇವೇಗೌಡ, ಕಾಲುವೆ ಒತ್ತುವರಿ ತೆರವುಗೊಳಿಸಿ, ತಡೆಗೋಡೆ ನಿರ್ಮಾಣ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ರು.

ನೆರೆ ಪೀಡಿತ ಪ್ರದೇಶಗಳಿಗೆ ಜಿಟಿಡಿ ಭೇಟಿ

ಇದನ್ನೂ ಓದಿ: ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು, ನಾಳೆ ಭಾರಿ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್​

Last Updated :Oct 25, 2021, 10:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.