ಮೈಸೂರು: ಗೌರಿ-ಗಣೇಶ ಹಬ್ಬಕ್ಕೆ ಕೊರೊನಾ ಕರಿನೆರಳು ತಾಕಿದ್ದು, ಈ ಬಾರಿ ಮೂರ್ತಿಗಳ ವಹಿವಾಟು ಕುಸಿದಿದೆ. ಗ್ರಾಹಕರಿಲ್ಲದೇ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ.
ನಗರದ ಕೆ.ಟಿ. ರಸ್ತೆ, ಕುಂಬಾರಗೇರಿ ಪ್ರದೇಶಗಳಲ್ಲಿ ಗಣೇಶ ಮೂರ್ತಿಗಳ ವ್ಯಾಪಾರ ಮಂದಗತಿಯಲ್ಲಿ ಸಾಗಿದೆ. ಸರ್ಕಾರದ ಮಾರ್ಗಸೂಚಿ ಹಾಗೂ ಕೊರೊನಾ ಹಾವಳಿಯಿಂದ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಇತ್ತ ಮೂರ್ತಿ ತಯಾರಕರು, ಮಾರಾಟಗಾರರು ಸಂಪೂರ್ಣ ಅತಂತ್ರವಾಗಿದ್ದಾರೆ. ಕಲಾವಿದರ ವರ್ಷದ ಕೂಳಿಗೂ ಕುತ್ತು ಬಂದಿದೆ.