ETV Bharat / state

ಅರಮನೆಯಲ್ಲಿ ಆನೆ ಮರಿಗೆ ನಾಮಕರಣ.. 'ಶ್ರೀದತ್ತಾತ್ರೇಯ' ಹೆಸರಿಟ್ಟ ರಾಜಮಾತೆ ಪ್ರಮೋದ ದೇವಿ

author img

By

Published : Sep 15, 2022, 7:18 PM IST

ಪ್ರಮೋದ ದೇವಿ ಒಡೆಯರ್
ಪ್ರಮೋದ ದೇವಿ ಒಡೆಯರ್

ಅಭಿಮನ್ಯು ನೇತೃತ್ವದ ಗಜಪಡೆ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಅರಮನೆಗೆ ಬಂದಿದ್ದು, ಅವುಗಳಲ್ಲಿ ಒಂದಾದ ಲಕ್ಷ್ಮೀ ಎಂಬ ಹೆಣ್ಣಾನೆ ಮೊನ್ನೆ ರಾತ್ರಿ ಅರಮನೆ ಅಂಗಳದಲ್ಲಿ ಗಂಡು ಮರಿಗೆ ಜನ್ಮ ನೀಡಿತ್ತು.

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಆನೆ ಲಕ್ಷ್ಮಿ ಮೊನ್ನೆ ಗಂಡು ಮರಿಗೆ ಜನ್ಮ ನೀಡಿದ್ದು, ಅದಕ್ಕೆ ಶ್ರೀದತ್ತಾತ್ರೇಯ ಎಂದು ರಾಜಮಾತೆ ಪ್ರಮೋದ ದೇವಿ ಒಡೆಯರ್ ಅವರು ನಾಮಕರಣ ಮಾಡಿದ್ದಾರೆ.

ಅಭಿಮನ್ಯು ನೇತೃತ್ವದ ಗಜಪಡೆ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಅರಮನೆಗೆ ಬಂದಿದ್ದು, ಅವುಗಳಲ್ಲಿ ಒಂದಾದ ಲಕ್ಷ್ಮೀ ಎಂಬ ಹೆಣ್ಣಾನೆ ಮೊನ್ನೆ ರಾತ್ರಿ ಅರಮನೆ ಅಂಗಳದಲ್ಲಿ ಗಂಡು ಮರಿಗೆ ಜನ್ಮ ನೀಡಿತ್ತು.

ಶ್ರೀದತ್ತಾತ್ರೇಯ ಎಂದು ಆನೆಗೆ ನಾಮಕರಣ ಮಾಡಿರುವುದು
ಶ್ರೀದತ್ತಾತ್ರೇಯ ಎಂದು ಆನೆಗೆ ನಾಮಕರಣ ಮಾಡಿರುವುದು

ಅದಾದ ಬಳಿಕ ತಾಯಿ ಮತ್ತು ಮರಿಯ ಆರೋಗ್ಯ ಸಂಬಂಧ ಅರಮನೆಯಲ್ಲಿ ಅವುಗಳ ಪಾಲನೆಗೆ ರಾಜಮಾತೆ ಆಶ್ರಯ ನೀಡಿದ್ದರು. ಇಂದು ಲಕ್ಷ್ಮಿ ಆನೆಯ ಮರಿಗೆ ರಾಜಮಾತೆ ಪ್ರಮೋದ ದೇವಿ ಒಡೆಯರ್ ಅವರು ಶ್ರೀದತ್ತಾತ್ರೇಯ ಎಂದು ನಾಮಕರಣ ಮಾಡಿದ್ದಾರೆ.

ಓದಿ: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ವೇಗ: ಪಾಲಿಕೆಗೆ ಜಿಲ್ಲಾಡಳಿತ ಸಾತ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.