ETV Bharat / state

ಪ್ರವಾಹದಿಂದ ದಸರೆಗೆ ತೊಂದರೆಯಿಲ್ಲ, ಈ ಬಾರಿ ವಿಜೃಂಭಣೆಯ ನಾಡಹಬ್ಬ: ಬಿಎಸ್​​​​ವೈ

author img

By

Published : Aug 12, 2019, 10:01 PM IST

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ರಾಜ್ಯದಲ್ಲಿ ಪ್ರವಾಹ ಇದೆಯೆಂದು ದಸರಾ ಸರಳವಾಗಿ ಆಚರಣೆಯಾಗುವುದಿಲ್ಲ, ವಿಜೃಂಭಣೆಯಿಂದಲೇ ದಸರಾ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ಮೈಸೂರು: ಪ್ರವಾಹದಿಂದ ನಾಡಹಬ್ಬ ದಸರಾಕ್ಕೆ ತೊಂದರೆಯಾಗುವುದಿಲ್ಲ. ದಸರಾ ವಿಜೃಂಭಣೆಯಿಂದ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ‌.

ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರವಾಹದಿಂದ ಸರಳ ದಸರಾ ಆಚರಣೆಯಾಗುವುದಿಲ್ಲ. ವಿಜೃಂಭಣೆಯಿಂದಲೇ ದಸರಾ ಮಾಡುತ್ತೇವೆ ಎಂದು ಹೇಳಿದರು.

ಸಿಎಂ‌ ಬಿಎಸ್​​​​ವೈ ಪ್ರತಿಕ್ರಿಯೆ

ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ತಾತ್ಕಾಲಿಕ ವ್ಯವಸ್ಥೆ ಮಾಡಿ‌ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಕೇಂದ್ರ ಹಾಗೂ ರಾಜ್ಯದಿಂದ ಪ್ರವಾಹ ಪೀಡಿತರಿಗೆ ಪರಿಹಾರ ನೀಡಲಾಗುವುದು. ಈ ಬಗ್ಗೆ ಕೇಂದ್ರಕ್ಕೆ ಈಗಾಗಲೇ ಮನವರಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

Intro:ಬಿಎಸ್ ವೈ


Body:ಬಿಎಸ್ ವೈ


Conclusion:ದಸರಾ ವಿಜೃಂಭಣೆಯಿಂದ ನಡೆಯುತ್ತೆ: ಸಿಎಂ‌ ಬಿಎಸ್ ವೈ
ಮೈಸೂರು: ಪ್ರವಾಹದಿಂದ ನಾಡ ದಸರಾಕ್ಕೆ ತೊಂದರೆಯಾಗುವುದಿಲ್ಲ, ದಸರಾ ವಿಜೃಂಭಣೆಯಿಂದ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ‌.
ನಂಜನಗೂಡು ದೇವಸ್ಥಾನಕ್ಕೆ ಭೇಟಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರವಾಹದಿಂದ ಸರಳ ದಸರಾ ಆಚರಣೆಯಾಗುವುದಿಲ್ಲ. ವಿಜೃಂಭಣೆಯಿಂದಲ್ಲೇ ದಸರಾ ಮಾಡುತ್ತಿನಿ ಎಂದು ಹೇಳಿದರು.
ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 5ಲಕ್ಷ ರೂ ಪರಿಹಾರ ನೀಡಲಾಗುವುದು.ತಾತ್ಕಾಲಿಕ ವ್ಯವಸ್ಥೆ ಮಾಡಿ‌ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತಿವಿ ಎಂದರು.
ಕೇಂದ್ರ ಹಾಗೂ ರಾಜ್ಯದಿಂದ ಪ್ರವಾಹ ಪೀಡಿತರಿಗೆ ಪರಿಹಾರ ನೀಡಲಾಗುವುದು.ಕೇಂದ್ರಕ್ಕೆ ಈಗಾಗಲೇ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.