ETV Bharat / state

ತಿ.ನರಸೀಪುರ: ತಾಯೂರಿನ ಬಳಿ ಚಿರತೆ ಓಡಾಟ-ವಿಡಿಯೋ

author img

By

Published : Dec 2, 2022, 10:57 AM IST

ತಿ.ನರಸೀಪುರ ತಾಲೂಕಿನ ತಾಯೂರಿನ ಬಳಿ ರಾತ್ರಿ ಮತ್ತೊಂದು ಚಿರತೆ ಕಂಡುಬಂದಿದೆ. ಚಿರತೆಗಳು ಗ್ರಾಮದ ಸಮೀಪ ಬರುತ್ತಿರುವುದು ಜನರಲ್ಲಿ ಭಯ ಉಂಟುಮಾಡಿದೆ.

Etv Bharat
ತಿ ನರಸೀಪುರ ತಾಯೂರಿನ ನಡುರಸ್ತೆಯಲ್ಲಿ ಚಿರತೆಯ ರಾಜಾರೋಷ ಓಡಾಟ

ಮೈಸೂರು: ತಿ.ನರಸೀಪುರ ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಮೀತಿ ಮೀರುತ್ತಿದೆ. ಒಂದು ತಿಂಗಳಲ್ಲಿ ಈಗಾಗಲೇ ಇಬ್ಬರು ಬಲಿಯಾಗಿದ್ದಾರೆ. ಮತ್ತೊಂದೆಡೆ, ಚಿರತೆಗಳ ಓಡಾಟ ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ.

ತಿ ನರಸೀಪುರ ತಾಯೂರಿನ ನಡುರಸ್ತೆಯಲ್ಲಿ ಚಿರತೆಯ ರಾಜಾರೋಷ ಓಡಾಟ

ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟೂರಾದ ಸಿದ್ದರಾಮನಹುಂಡಿಯ 5 ಕಿ.ಮೀ.ಅಂತರದಲ್ಲಿರುವ ತಾಯೂರು ಗ್ರಾಮದ ರಸ್ತೆಯಲ್ಲಿ ಚಿರತೆ ಕಾಣ ಸಿಕ್ಕಿದೆ. ರಾತ್ರಿ ವೇಳೆ ತಮ್ಮ ಗ್ರಾಮಕ್ಕೆ ಕಾರಿನಲ್ಲಿ ಹೋಗುತ್ತಿದ್ದವರು ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ: ಚಿರತೆಗೆ ಶೂಟೌಟ್‌ ಆದೇಶ, ಮೃತ ಯುವತಿ ಕುಟುಂಬಕ್ಕೆ ₹7 ಲಕ್ಷ ಪರಿಹಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.