ETV Bharat / state

ಸಂಸದೆ ಸುಮಲತಾಗೆ ಹಬ್ಬದ ಉಡುಗೊರೆ ಕಳುಹಿಸಿದ ಮಂಡ್ಯ ರಕ್ಷಣಾ ವೇದಿಕೆ

author img

By

Published : Sep 7, 2021, 12:08 PM IST

mandya
ಹಬ್ಬದ ಉಡುಗೊರೆ ಕಳುಹಿಸಿದ ಮಂಡ್ಯ ರಕ್ಷಣಾ ವೇದಿಕೆ

ಮಂಡ್ಯ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶಂಕರ್ ಬಾಬು ಸೇರಿದಂತೆ ಸಂಘಟನೆಯ ಸದಸ್ಯರು ಸೇರಿ ಮಂಡ್ಯದ ಸೊಸೆ ಸುಮಲತಾ ಅಂಬರೀಶ್​ಗೆ ಹಬ್ಬದ ಉಡುಗೊರೆಯಾಗಿ ಸೀರೆ, ಬಳೆ ಸೇರಿದಂತೆ ಇನ್ನಿತರ ಬಾಗೀನ ವಸ್ತುಗಳನ್ನು ಕೋರಿಯರ್ ಮೂಲಕ ಕಳಿಸಿಕೊಟ್ಟಿದ್ದಾರೆ.

ಮಂಡ್ಯ: ಜಿಲ್ಲೆಯಲ್ಲಿ ರೈತರ ಹೋರಾಟಕ್ಕೆ ಕೈ ಜೋಡಿಸಿ ಮತ್ತು ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ದ ಧ್ವನಿ ಎತ್ತಿರುವ ಸಂಸದೆ ಸುಮಲತಾ ಅಂಬರೀಶ್​ ಅವರಿಗೆ ಮಂಡ್ಯ ರಕ್ಷಣಾ ವೇದಿಕೆ ವತಿಯಿಂದ ಗೌರಿ ಹಬ್ಬದ ಉಡುಗೊರೆಯನ್ನು ಕಳುಹಿಸಲಾಗಿದೆ.

ಮಂಡ್ಯ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶಂಕರ್ ಬಾಬು ಸೇರಿದಂತೆ ಸಂಘಟನೆಯ ಸದಸ್ಯರು ಸೇರಿ ಮಂಡ್ಯದ ಸೊಸೆ ಸುಮಲತಾ ಅಂಬರೀಶ್​ಗೆ ಹಬ್ಬದ ಉಡುಗೊರೆಯಾಗಿ ಸೀರೆ, ಬಳೆ ಸೇರಿದಂತೆ ಇನ್ನಿತರ ಬಾಗೀನ ವಸ್ತುಗಳನ್ನು ಕೋರಿಯರ್ ಮೂಲಕ ಕಳಿಸಿಕೊಟ್ಟಿದ್ದಾರೆ. ಈ ವೇಳೆ ಹಬ್ಬದ ಶುಭಾಶಯ ಕೂಡ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಂಕರ್ ಬಾಬು, ಸಂಘಟನೆ ಸದಸ್ಯರಾದ ವೀಣಾಬಾಯಿ, ಬೀರಪ್ಪ, ಹರೀಶ್, ಚಂದ್ರಶೇಖರ್ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.