ETV Bharat / state

ಗಂಗಾವತಿ : ವಿದ್ಯುತ್ ಟವರ್​ನಿಂದ ಬಿದ್ದು ಪಶ್ಚಿಮ ಬಂಗಾಳದ ಕಾರ್ಮಿಕ ಸಾವು

author img

By

Published : Jul 13, 2021, 1:19 PM IST

West Bengal labor died in gangavati
ಪಶ್ಚಿಮ ಬಂಗಾಳದ ಕಾರ್ಮಿಕ ಸಾವು

ಟವರ್ ಏರುವ ಸಂದರ್ಭದಲ್ಲಿ ಸೂಕ್ತ ಜೀವ ರಕ್ಷಕ ಸಾಧನ-ಸಲಕರಣೆಗಳನ್ನು ನೀಡದಿರುವುದು ತನ್ನ ಸಹೋದರನ ಸಾವಿಗೆ ಕಾರಣ ಎಂದು ಮೃತನ ಸಹೋದರ ಎಸ್ ಕೆ ರಾಕಿವುಲ್ಲಾ ಎಂಬ ಯುವಕ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..

ಗಂಗಾವತಿ : ಜೆಸ್ಕಾಂ ಇಲಾಖೆಯ ವಿದ್ಯುತ್ ಟವರ್ ಮೇಲೆ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಕನಕಗಿರಿ ತಾಲೂಕಿನಲ್ಲಿ ನಡೆದಿದೆ.

ಕನಕಗಿರಿ ತಾಲೂಕಿನ ತಿಪ್ಪನಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ಯುವಕನ್ನು ಪಶ್ಚಿಮ ಬಂಗಾಳದ ಚಂಡಿಪುರ ಮಾಲ್ವಾ ಜಿಲ್ಲೆಯ ಕಸ್ಕೂಲ್ ಎಂಬ ಗ್ರಾಮದ ಎಸ್ ಕೆ ಜಾಕೀರ್ ವುಲ್ಲಾ ಜಾಹೀರುಲ್ಲಾ (24) ಎಂದು ಗುರುತಿಸಲಾಗಿದೆ.

ಪಶ್ಚಿಮ ಬಂಗಳಾದಿಂದ ವಿದ್ಯುತ್ ಟವರ್ ಜೋಡಣಾ ಕಾರ್ಯಕ್ಕೆ ಸುಮಾರು 15ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಆಗಮಿಸಿದ್ದಾರೆ. ಕೊಪ್ಪಳ ತಾಲೂಕಿನ ಹೊಸಲಿಂಗಾಪುರದ ವಿ ಆರ್ ಪಾಟೀಲ್ ನೇತೃತ್ವದಲ್ಲಿ ಕಾಮಗಾರಿ ನಡೆಯುತ್ತಿದ್ದು, ಅವರ ನಿಲಕ್ಷ್ಯಕ್ಕೆ ಯುವಕ ಬಲಿಯಾಗಿದ್ದಾನೆ ಎನ್ನುವ ಆರೋಪ ಕೇಳಿ ಬಂದಿವೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಜನಸಂಖ್ಯೆ ನಿಯಂತ್ರಣ ಕಾಯ್ದೆಗೆ ತರಲು ಇದು ಸಕಾಲ : ಸಿ ಟಿ ರವಿ

ಟವರ್ ಏರುವ ಸಂದರ್ಭದಲ್ಲಿ ಸೂಕ್ತ ಜೀವ ರಕ್ಷಕ ಸಾಧನ-ಸಲಕರಣೆಗಳನ್ನು ನೀಡದಿರುವುದು ತನ್ನ ಸಹೋದರನ ಸಾವಿಗೆ ಕಾರಣ ಎಂದು ಮೃತನ ಸಹೋದರ ಎಸ್ ಕೆ ರಾಕಿವುಲ್ಲಾ ಎಂಬ ಯುವಕ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.