ETV Bharat / state

ಗಂಗಾವತಿ: ವಿವಾದಿತ DySP, ಸಿಪಿಐ, PSI ಗಳಿಗೆ ಕಡ್ಡಾಯ ರಜೆ ಶಿಕ್ಷೆ

author img

By

Published : Jul 20, 2021, 1:50 PM IST

Gangavathi
ಕಡ್ಡಾಯ ರಜೆ ಶಿಕ್ಷೆ

ಕೊಲೆ ಆರೋಪ ಹಿನ್ನೆಲೆ ಹೊಂದಿದ್ದ ರಾಜಕೀಯ ವ್ಯಕ್ತಿಗಳ ಮದುವೆ ಸಮಾರಂಭಕ್ಕೆ ಹಾಜರಾಗಿದ್ದ ಮೂವರು ಪೊಲೀಸ್ ಅಧಿಕಾರಿಗಳಿಗೆ ಕಡ್ಡಾಯ ರಜೆ ಶಿಕ್ಷೆ ನೀಡಲಾಗಿದೆ. ಈ ಬಗ್ಗೆ ಎಸ್​ಪಿ ಟಿ.ಶ್ರೀಧರ ಸೂಚನೆ‌ ನೀಡಿದ್ದಾರೆ.

ಗಂಗಾವತಿ: ಕೊಲೆ ಆರೋಪದ ಹಿನ್ನೆಲೆ ಹೊಂದಿದ್ದ ರಾಜಕೀಯ ವ್ಯಕ್ತಿಗಳ ಮದುವೆ ಸಮಾರಂಭಕ್ಕೆ ಹಾಜರಾಗಿದ್ದ ಮೂವರು ಪೊಲೀಸ್ ಅಧಿಕಾರಿಗಳ ತಲೆದಂಡವಾಗಿದೆ.

ಗಂಗಾವತಿ ಡಿವೈಎಸ್​ಪಿ ರುದ್ರೇಶ್ ಉಜ್ಜನಕೊಪ್ಪ, ಗಂಗಾವತಿ ಗ್ರಾಮೀಣ ಸಿಪಿಐ ಉದಯರವಿ ಹಾಗೂ ಕನಕಗಿರಿ ಪಿಎಸ್ಐ ತಾರಾಬಾಯಿ ಇದೀಗ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಡಿಜೆ ಮತ್ತು ಐಜಿ ಪ್ರವೀಣ್ ಸೂದ್, ಐಜಿ ಮನೀಷ್ ಕರವೇಕರ ನಿರ್ದೇಶನದ ಮೆರೆಗೆ ಎಸ್​ಪಿ ಟಿ.ಶ್ರೀಧರ ಸೂಚನೆ‌ ನೀಡಿದ್ದಾರೆ.

ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದ ಹನುಮೇಶ ನಾಯಕ ಅವರ ಪುತ್ರ ಆನಂದ್​ ಎಂಬಾತನ ವಿವಾಹ ಸಮಾರಂಭಕ್ಕೆ ಈ ಅಧಿಕಾರಿಗಳು ಸಮವಸ್ತ್ರ ಸಮೇತ ಭೇಟಿ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.

ವಿದ್ಯಾರ್ಥಿ ಯಲ್ಲಾಲಿಂಗನ ಕೊಲೆ ಪ್ರಕರಣದಲ್ಲಿ ಹನುಮೇಶ ನಾಯಕ ಮತ್ತು ಬೆಂಬಲಿಗರ ಕೈವಾಡ ಇರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇನ್ನು ಪ್ರಕರಣ ನ್ಯಾಯಾಲಯದ ಹಂತದಲ್ಲಿದ್ದು, ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮದುವೆ ಸಮಾರಂಭಕ್ಕೆ ಭೇಟಿ ನೀಡಿದ್ದು, ವಿವಾದಕ್ಕೆ ಕಾರಣವಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.