ETV Bharat / state

ನದಿ-ದಡ ಆಟ ಆಡಿದ ಸೋಂಕಿತರು...

author img

By

Published : May 31, 2021, 7:19 PM IST

Updated : May 31, 2021, 10:05 PM IST

game
game

ಕೊರೊನಾ ಸೋಂಕಿತರಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ದಿಸಲು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿ ಸೋಂಕಿತರಿಗೆ ವಿಭಿನ್ನ ಆಟಗಳನ್ನು ಆಡಿಸಲಾಗುತ್ತಿದೆ.

ಗಂಗಾವತಿ: ಕೊರೊನಾ ಸೋಂಕಿತರಲ್ಲಿ ಉಂಟಾಗುತ್ತಿರುವ ಮಾನಸಿಕ ಹಾಗೂ ದೈಹಿಕ ಸಮಸ್ಯೆ ನಿವಾರಿಸುವ ಉದ್ದೇಶಕ್ಕೆ ತಾಲೂಕಿನ ಮಲ್ಲಾಪುರದಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿನ ಸೋಂಕಿತರಿಗೆ ವಿಭಿನ್ನ ಆಟಗಳನ್ನು ಆಡಿಸುವ ಮೂಲಕ ಗುಣಾತ್ಮಕ ಬದಲಾವಣೆಗೆ ಯತ್ನಿಸಲಾಗುತ್ತಿದೆ.

ತಾಲೂಕಿನ ಆರೋಗ್ಯ ಇಲಾಖೆಯ ಸಿಬ್ಬಂದಿ ನೆರವಿನಿಂದ ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿ, ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ನದಿ ಮತ್ತು ದಡ, ದೈಹಿಕ ಕಸರತ್ತಿನ ಆಟಗಳನ್ನು ಆಡಿಸುತ್ತಿದ್ದಾರೆ. ಈ ಮೂಲಕ ಸೋಂಕಿತರಲ್ಲಿ ಮಾನಸಿಕವಾಗಿ ಸದೃಢರನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ.

ಸೋಂಕಿತರಲ್ಲಿ ಮನೋಲ್ಲಾಸಕ್ಕಾಗಿ ನದಿ - ದಡದ ಆಟ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾಲೂಕು ಪಂಚಾಯಿತಿ ಇಒ ಮೋಹನ್, ಮನೆಯಿಂದ ಹಾಗೂ ಕುಟುಂಬದಿಂದ ದೂರವಿರುವ ಸೋಂಕಿತರು ಮಾನಸಿಕವಾಗಿ ಕುಗ್ಗಿರುತ್ತಾರೆ. ಅವರಲ್ಲಿ ಮತ್ತೆ ಉತ್ಸಾಹ ಮೂಡಿಸುವ ಉದ್ದೇಶಕ್ಕೆ ದೈಹಿಕ, ಬೌದ್ಧಿಕ ಕಸರತ್ತಿನ ಆಟ ಆಡಿಸಲಾಗುತ್ತಿದೆ ಎಂದರು.

Last Updated :May 31, 2021, 10:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.