ETV Bharat / state

ಕಾರಟಗಿ, ಶ್ರೀರಾಮನಗರದಲ್ಲಿ ಹೆಚ್ಚುವರಿ 60 ಆಕ್ಸಿಜನ್ ಬೆಡ್: ಶಾಸಕ ದಢೇಸೂಗೂರು

author img

By

Published : May 9, 2021, 9:43 AM IST

Gangavathi
ಜಮಾಪುರದ ಕೋವಿಡ್ ಕೇರ್ ಸೆಂಟರ್​ಗೆ ಭೇಟಿ ನೀಡಿದ ಶಾಸಕ ಬಸವರಾಜ ದಢೇಸ್ಗೂರು

ಬೆಡ್ ಕೊರತೆಗೆ ಪರ್ಯಾಯವಾಗಿ ಕಾರಟಗಿ ಹಾಗೂ ಶ್ರೀರಾಮನಗರದಲ್ಲಿ ತಲಾ 30 ಬೆಡ್​ಗಳ ಕೋವಿಡ್​ ಕೇಂದ್ರ ಆರಂಭಿಸಲಾಗುವುದು ಎಂದು ಶಾಸಕ ಬಸವರಾಜ ದಢೇಸೂಗೂರು ಹೇಳಿದರು.

ಗಂಗಾವತಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿದ್ದು ಜಿಲ್ಲಾಸ್ಪತ್ರೆ ಹಾಗೂ ಗಂಗಾವತಿಯ ತಾಲೂಕು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೆಡ್ ಕೊರತೆ ಉಂಟಾಗುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಶಾಸಕ ಬಸವರಾಜ ದಢೇಸೂಗೂರು ತಿಳಿಸಿದರು.

ಜಮಾಪುರದ ಕೋವಿಡ್ ಕೇರ್ ಸೆಂಟರ್​ಗೆ ಭೇಟಿ ನೀಡಿದ ಶಾಸಕ ಬಸವರಾಜ ದಢೇಸೂಗೂರು

ಜಮಾಪುರದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 100 ಬೆಡ್​ಗಳ ಕೋವಿಡ್ ಕೇರ್ ಸೆಂಟರ್​ಗೆ ಭೇಟಿ ನೀಡಿ, ಬಳಿಕ ಮಾತನಾಡಿದ ಶಾಸಕರು, ಬೆಡ್ ಕೊರತೆಗೆ ಪರ್ಯಾಯವಾಗಿ ಕಾರಟಗಿ ಹಾಗೂ ಶ್ರೀರಾಮನಗರದಲ್ಲಿ ತಲಾ 30 ಬೆಡ್​ಗಳ ಕೋವಿಡ್​ ಕೇಂದ್ರ ಆರಂಭಿಸಲಾಗುವುದು.

ಆಕ್ಸಿಜನ್ ಸಹಿತ 60 ಬೆಡ್ ನಿರ್ಮಾಣವಾದರೆ ಕಾರಟಗಿ, ಕನಕಗಿರಿ ಭಾಗದ ಜನರು ನಡೆಸುತ್ತಿರುವ ಪರದಾಟ ಕೊಂಚ ಮಟ್ಟಿಗೆ ತಗ್ಗಲಿದೆ. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಶೀಘ್ರ ಜಾರಿಗೆ ತರಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.