ETV Bharat / state

3.5 ಕೋಟಿ ರೂ. ಮೊತ್ತದ ಕಾಮಗಾರಿ ಮೂರೇ ತಿಂಗಳಲ್ಲಿ ಜಲಹೋಮ

author img

By

Published : Oct 7, 2019, 4:28 PM IST

ಕೋಟಿ ಕೋಟಿ ಮೊತ್ತದ ಕಾಮಗಾರಿ ಮೂರೇ ತಿಂಗಳಲ್ಲಿ ಜಲಹೋಮ

ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ಗುಂಡೂರು-ಹುಳ್ಕಿಹಾಳ ಮಧ್ಯದ ಉಪ ಕಾಲುವೆಯಲ್ಲಿ ಕಳೆದ ಮೂರು ತಿಂಗಳ ಹಿಂದಷ್ಟೆ ನೀರಾವರಿ ಇಲಾಖೆಯಿಂದ ಕೈಗೊಂಡಿದ್ದ 3.5 ಕೋಟಿ ರೂ. ಮೊತ್ತದ ಕಾಂಕ್ರೀಟ್​ ಕಾಮಗಾರಿ ಕಿತ್ತು ಹೋಗಿ ನೀರುಪಾಲಾಗಿದೆ. ಪರಿಣಾಮ ಸಾಕಷ್ಟು ನೀರು ಹೊಲಕ್ಕೆ ನುಗ್ಗಿ ಭತ್ತದ ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ.

ಗಂಗಾವತಿ: ಕಳೆದ ಮೂರು ತಿಂಗಳ ಹಿಂದಷ್ಟೆ ನೀರಾವರಿ ಇಲಾಖೆ ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಸುಮಾರು 3.5 ಕೋಟಿ ರೂ. ಮೊತ್ತದ ಕಾಂಕ್ರೀಟ್​ ಕಾಮಗಾರಿ ನೀರುಪಾಲಾಗಿದೆ.

ಹೀಗಾಗಿ ಸಾಕಷ್ಟು ನೀರು ಹೊಲಕ್ಕೆ ನುಗ್ಗಿ ಭತ್ತ ಬೆಳೆ ಸಂಪೂರ್ಣ ಜಲಾವೃತವಾಗಿದೆ. ಅಲ್ಲದೆ ಗುಂಡೂರು ಮತ್ತು ಹುಳ್ಕಿಹಾಳ ಗ್ರಾಮದ ಸುಮಾರು ಮೂರು ಸಾವಿರ ಹೆಕ್ಟೇರ್​ ಪ್ರದೇಶದ ಭತ್ತದ ಬೆಳೆಯೂ ಹಾಳಾಗಿದೆ.

ಕೋಟಿ ಕೋಟಿ ಮೊತ್ತದ ಕಾಮಗಾರಿ ಮೂರೇ ತಿಂಗಳಲ್ಲಿ ಜಲಹೋಮ

ಕಳೆದ ಮೂರು ತಿಂಗಳ ಹಿಂದಷ್ಟೆ ಈ ಕಾಮಗಾರಿ ಕೈಗೊಳ್ಳಲಾಗಿತ್ತು. ಕಳಪೆ ಕಾಮಗಾರಿ ಮತ್ತು ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹೀಗಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ರೈತರೇ ಈ ಭಾಗದಲ್ಲಿ ಹಲವು ಕಾಮಗಾರಿ ಮಾಡಿಕೊಂಡಿದ್ದರು. ಆ ಕಾಮಗಾರಿ ಎಂದೂ ಈ ರೀತಿಯಾಗಿರಲಿಲ್ಲ ಎಂದು ರೈತ ಈರಪ್ಪ ಸತ್ಯನಾರಾಯಣ ಹೇಳಿದ್ದಾರೆ.

ಕಾಲುವೆಯ ಸಹಾಯಕ ಎಂಜಿನಿಯರ್ ಸೂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿತ್ತು ಹೋಗಿರುವ ಕಾಲುವೆಯ ಸ್ಥಳಕ್ಕೆ ಕಪ್ಪು ಮಣ್ಣು ಹಾಕಿ, ನೀರು ಹೊಲಕ್ಕೆ ನುಗ್ಗದಂತೆ ಕ್ರಮ ಕೈಗೊಂಡಿದ್ದಾರೆ.

Intro:ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ಗುಂಡೂರು-ಹುಳ್ಕಿಹಾಳ ಮಧ್ಯದ ಉಪ ಕಾಲುವೆಯಲ್ಲಿ ಕಳೆದ ಮೂರು ತಿಂಗಳ ಹಿಂದಷ್ಟೆ ನೀರಾವರಿ ಇಲಾಖೆಯಿಂದ ಕೈಗೊಂಡಿದ್ದ 3.5 ಕೋಟಿ ಮೊತ್ತದ ಸಿಸಿ ಕಾಮಗಾರಿ ಕಿತ್ತು ನೀರು ಪಾಲಾಗಿದೆ. ಪರಿಣಾಮ ಸಾಕಷ್ಟು ನೀರು ಹೊಲಕ್ಕೆ ನುಗ್ಗಿ ಭತ್ತದ ಬೆಳೆಗಳು ಸಂಪೂರ್ಣ ಜಲಾವೃತವಾಗಿದೆ.
Body:3.5 ಕೋಟಿ ಮೊತ್ತದ ಕಾಮಗಾರಿ: ಮೂರೆ ತಿಂಗಳಲ್ಲಿ ಜಲಹೋಮ
ಗಂಗಾವತಿ:
ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ಗುಂಡೂರು-ಹುಳ್ಕಿಹಾಳ ಮಧ್ಯದ ಉಪ ಕಾಲುವೆಯಲ್ಲಿ ಕಳೆದ ಮೂರು ತಿಂಗಳ ಹಿಂದಷ್ಟೆ ನೀರಾವರಿ ಇಲಾಖೆಯಿಂದ ಕೈಗೊಂಡಿದ್ದ 3.5 ಕೋಟಿ ಮೊತ್ತದ ಸಿಸಿ ಕಾಮಗಾರಿ ಕಿತ್ತು ನೀರು ಪಾಲಾಗಿದೆ. ಪರಿಣಾಮ ಸಾಕಷ್ಟು ನೀರು ಹೊಲಕ್ಕೆ ನುಗ್ಗಿ ಭತ್ತದ ಬೆಳೆಗಳು ಸಂಪೂರ್ಣ ಜಲಾವೃತವಾಗಿದೆ.
ಘಟನೆಯಿಂದಾಗಿ ಗುಂಡೂರು ಮತ್ತು ಹುಳ್ಕಿಹಾಳ ಗ್ರಾಮದ ಸುಮಾರು ಮೂರು ಸಾವಿರ ಹೆಕ್ಟೇರು ಪ್ರದೇಶದಲ್ಲಿನ ಭತ್ತದ ಬೆಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕಳೆದ ಮೂರು ತಿಂಗಳ ಹಿಂದಷ್ಟೆ ಈ ಕಾಮಗಾರಿ ಕೈಗೊಳ್ಳಲಾಗಿತ್ತು.
'ಕಳಪೆ ಕಾಮಗಾರಿ ಮತ್ತು ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದೆ. ಕಳೆದ ನಾಲ್ಕು ದಶಕಗಳಿಂದ ರೈತರೆ ಸಣ್ಣಾಪುರ ಕಾಮಗಾರಿ ಮಾಡಿಕೊಂಡಿದ್ದರು. ಆದರೆ ಎಂದೂ ಈ ರೀತಿಯಾಗಿರಲಿಲ್ಲ' ಎಂದು ರೈತರಾದ ಈರಪ್ಪ, ಸತ್ಯನಾರಾಯಣ ಆರೋಪಿಸಿದ್ದಾರೆ.
31ನೇ ವಿತರಣಾ ಕಾಲುವೆಯ ಸಹಾಯಕ ಎಂಜಿನೀಯರ್ ಸೂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಿತ್ತು ಹೋಗಿರುವ ಕಾಲುವೆಯ ಸ್ಥಳಕ್ಕೆ ಕಪ್ಪುಮಣ್ಣು ಹಾಕಿ ನೀರು ಹೊಲಕ್ಕೆ ನುಗ್ಗದಂತೆ ಕ್ರಮ ಕೈಗೊಂಡಿದ್ದಾರೆ.
Conclusion:31ನೇ ವಿತರಣಾ ಕಾಲುವೆಯ ಸಹಾಯಕ ಎಂಜಿನೀಯರ್ ಸೂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಿತ್ತು ಹೋಗಿರುವ ಕಾಲುವೆಯ ಸ್ಥಳಕ್ಕೆ ಕಪ್ಪುಮಣ್ಣು ಹಾಕಿ ನೀರು ಹೊಲಕ್ಕೆ ನುಗ್ಗದಂತೆ ಕ್ರಮ ಕೈಗೊಂಡಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.