ETV Bharat / state

24 ಗಂಟೆಗಳಿಂದ ಆಕ್ಸಿಜನ್​ಗಾಗಿ ಕಾದು ನಿಂತ ಟ್ಯಾಂಕರ್​​... ಮುಂದೇನಾಯ್ತು?

author img

By

Published : May 6, 2021, 1:22 PM IST

s muniswamy arranged oxygen to kolar
24 ಗಂಟೆಗಳಿಂದ ಆಕ್ಸಿಜನ್​ಗಾಗಿ ಕಾದು ನಿಂತ ಟ್ಯಾಂಕರ್ - ಮುಂದೇನಾಯ್ತು?

ಬೆಂಗಳೂರಿನ ಮಹದೇವಪುರ ಕ್ಷೇತ್ರದ ಗರುಡಾಚಾರ್ ಪಾಳ್ಯದಲ್ಲಿ ಇರುವಂತಹ ಬುರುಕ ಗ್ಯಾಸ್ ಲಿಮಿಟೆಡ್​ನಲ್ಲಿ ಮಾಲೂರಿನ ವೆಂಕಟೇಶ್ವರ ಏರ್ ಪ್ರೊಡಕ್ಟ್ ಲಾರಿಯು ಕಳೆದ 24 ಗಂಟೆಗಳಿಂದ ಆಕ್ಸಿಜನ್​ಗಾಗಿ ಕಾಯುತ್ತಿತ್ತು. ಸುಮಾರು 11 ಗಂಟೆ ಸಮಯದಲ್ಲಿ ಜಿಲ್ಲಾಧಿಕಾರಿಗಳು ಸಂಸದ ಎಸ್.ಮುನಿಸ್ವಾಮಿ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಬಳಿಕ ಸಂಸದರು ಸಂಬಂಧಪಟ್ಟವರೊಂದಿಗೆ ಮಾತನಾಡಿ ಸ್ಥಳದಲ್ಲಿಯೇ ಇದ್ದು ಆಕ್ಸಿಜನ್ ತುಂಬಿಸಿ ಕಳಿಸಿಕೊಟ್ಟಿದ್ದಾರೆ.

ಕೋಲಾರ: ಕೋಲಾರಕ್ಕೆ ಬರಬೇಕಿದ್ದ ಆಕ್ಸಿಜನ್ ಟ್ಯಾಂಕರ್ 24 ಗಂಟೆಗಳಿಂದ ಗ್ಯಾಸ್ ಗೋಡನ್ ಬಳಿ ಕಾಯುತ್ತಿದ್ದದನ್ನು ಮನಗಂಡ ಸಂಸದ ಎಸ್.ಮುನಿಸ್ವಾಮಿ ತಡರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟವರೊಂದಿಗೆ ಮಾತನಾಡಿ,‌ ಖುದ್ದು ಸ್ಥಳದಲ್ಲಿಯೇ ಇದ್ದು ಆಕ್ಸಿಜನ್ ತುಂಬಿಸಿ ಕಳಿಸಿರುವಂತಹ ಘಟನೆ ಕಳೆದ ರಾತ್ರಿ ಜರುಗಿದೆ‌.

ಬೆಂಗಳೂರಿನ ಮಹದೇವಪುರ ಕ್ಷೇತ್ರದ ಗರುಡಾಚಾರ್ ಪಾಳ್ಯದಲ್ಲಿ ಇರುವಂತಹ ಬುರುಕ ಗ್ಯಾಸ್ ಲಿಮಿಟೆಡ್​ನಲ್ಲಿ ಮಾಲೂರಿನ ವೆಂಕಟೇಶ್ವರ ಏರ್ ಪ್ರೊಡಕ್ಟ್ ಲಾರಿಯು ಕಳೆದ 24 ಗಂಟೆಗಳಿಂದ ಆಕ್ಸಿಜನ್​ಗಾಗಿ ಕಾಯುತ್ತಿತ್ತು. ಸುಮಾರು 11 ಗಂಟೆ ಸಮಯದಲ್ಲಿ ಜಿಲ್ಲಾಧಿಕಾರಿಗಳು ಸಂಸದ ಎಸ್.ಮುನಿಸ್ವಾಮಿ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ, ತಕ್ಷಣ ಎಚ್ಚೆತ್ತ ಸಂಸದರು ಸ್ಥಳಕ್ಕೆ ಭೇಟಿ ನೀಡಿ ಬುರುಕ ಗ್ಯಾಸ್ ಲಿಮಿಟೆಡ್​ನ ಮ್ಯಾನೇಜಿಂಗ್ ಡೈರೆಕ್ಟರ್ ಗುರುಪ್ರಸಾದ್ ಅವರೊಂದಿಗೆ ಮಾತನಾಡಿದರು. ಡ್ರಗ್ ಕಂಟ್ರೋಲರ್​ಗಳಾದ ರಾಜೇಶ್ ಮತ್ತು ಮಹೇಶ್, ಆಪರೇಟರ್ಸ್​​ ಭೇಟಿ ಮಾಡಿ, ಕಳೆದ 24 ಗಂಟೆಗಳಿಂದ ಆಕ್ಸಿಜನ್​​ಗಾಗಿ ಕಾಯುತ್ತಿದ್ದಂತಹ ಟ್ಯಾಂಕರ್​​ಗೆ ಆಕ್ಸಿಜನ್ ತುಂಬಿಸಿ ಮಧ್ಯರಾತ್ರಿ 1 ಗಂಟೆಗೆ ಟ್ಯಾಂಕರ್ ಕಳುಹಿಸಿದರು.

ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತದ ತನಿಖೆ... ಎರಡನೇ ದಿನವೂ ದಾಖಲೆಗಳ ಜಪ್ತಿ

ಈ ವೇಳೆ ಮಾತನಾಡಿದ ಅವರು, ಕೋಲಾರ ಜಿಲ್ಲೆಗೆ ಆಕ್ಸಿಜನ್ ಬಹಳ ಅವಶ್ಯಕತೆ ಇದೆ. ಘಟನೆ ನನ್ನ ಗಮನಕ್ಕೆ ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಸಂಬಂಧಪಟ್ಟವರೊಂದಿಗೆ ಮಾತನಾಡಿ ಆಕ್ಸಿಜನ್ ಕಳಿಸಲಾಗಿದೆ ಎಂದರು. ಅಲ್ಲದೇ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಜನರು ಹೆಚ್ಚು ಜಾಗರೂಕರಾಗಿರಬೇಕು. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸರ್ಕಾರ ಮಾಡಿರುವಂತಹ ಜನತಾ ಕರ್ಫ್ಯೂವನ್ನು ಪಾಲಿಸಬೇಕೆಂದರು‌. ಅತೀ ಶೀಘ್ರದಲ್ಲೇ ಜಿಲ್ಲೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ತೆರೆಯುವುದಾಗಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.