ETV Bharat / state

ಅಗ್ನಿಪಥ್​​ ಯೋಜನೆ ವಿರೋಧಿಸುವವರು ದೇಶ ಪ್ರೇಮಿಗಳಲ್ಲ, ದೇಶದ್ರೋಹಿಗಳು : ಸಂಸದ ಮುನಿಸ್ವಾಮಿ

author img

By

Published : Jun 18, 2022, 4:32 PM IST

muniswamy
ಮುನಿಸ್ವಾಮಿ

ಅಗ್ನಿಪಥ್​ ಯೋಜನೆಯನ್ನು ವಿರೋಧಿಸುವವರು ದೇಶ ಪ್ರೀಮಿಗಳಲ್ಲ, ದೇಶದ್ರೋಹಿಗಳು ಎಂದು ಕೋಲಾರ ಸಂಸದ ಮುನಿಸ್ವಾಮಿ ಪ್ರತಿಭಟನೆಕಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಹಿಂದೆ ವಿರೋಧ ಪಕ್ಷದ ಕೈವಾಡವಿದೆ ಎಂದು ಆರೋಪಿಸಿದ್ದಾರೆ..

ಕೋಲಾರ : ಅಗ್ನಿಪಥ್​ ಯೋಜನೆ ಕುರಿತು ಇಗಾಗಲೇ ದೇಶಾದ್ಯಂತ ಬಿಗುವಿನ ವಾತವರಣ ಏರ್ಪಟ್ಟಿದೆ. ಕೇಂದ್ರ ಸರ್ಕಾರದ ಈ ಯೋಜನೆಯನ್ನು ಪ್ರತಿಭಟನಕಾರರು ವಿರೋಧಿಸುತ್ತಿದ್ದಾರೆ. ಇದನ್ನು ಖಂಡಿಸಿ ಮಾತನಾಡಿರುವ ಕೋಲಾರ ಬಿಜೆಪಿ ಸಂಸದ ಎಸ್​ ಮುನಿಸ್ವಾಮಿ ಅವರು, ಅಗ್ನಿಪಥ್ ಯೋಜನೆಯನ್ನ ವಿರೋಧಿಸುವವರು ದೇಶ ಪ್ರೇಮಿಗಳಲ್ಲ. ಅವರೆಲ್ಲರೂ ದೇಶದ್ರೋಹಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಭ್ರಷ್ಟಾಚಾರವಿಲ್ಲದೆ ಆಡಳಿತ ನಡೆಸುತ್ತಿರುವ ಪಕ್ಷ ಬಿಜೆಪಿ ಆಗಿದ್ದರಿಂದ ಇದರ ವಿರುದ್ಧ ವಿರೋಧ ಪಕ್ಷದವರು ಈ ರೀತಿಯ ಕೃತ್ಯಗಳನ್ನು ಮಾಡಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಗೆ ಸ್ವಾಗತ ಎಂದು ಸಂಸದ ಹೇಳಿಕೆ ನೀಡಿದ್ದಾರೆ. ಪ್ರತಿಭಟನೆ ನಡೆಸುತ್ತಿರುವವರ ಹಿಂದೆ ಕಾರ್ಪೊರೇಟ್ ವರ್ಗದವರು, ವಿರೋಧ ಪಕ್ಷದವರು ಇದ್ದಾರೆ ಎಂದು ಆರೋಪಿಸಿದ್ದಾರೆ.

ಅಗ್ನಿಪಥ್‌ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಕುರಿತಂತೆ ಸಂಸದ ಮುನಿಸ್ವಾಮಿ ಪ್ರತಿಕ್ರಿಯೆ ನೀಡಿರುವುದು..

ದೇಶದ ಭದ್ರತೆ ಹಾಗೂ ಉದ್ಯೋಗ ಸೃಷ್ಟಿಸುವ ಸಲುವಾಗಿ ಅಗ್ನಿಪಥ್ ಯೋಜನೆ ಜಾರಿಗೆ ತರಲಾಗಿದೆ. ಇದರಲ್ಲಿ ಬಲವಂತ ಇಲ್ಲ, ಇಚ್ಚಾನುಸಾರ ಸೇನೆಗೆ ಸೇರಲು ಅವಕಾಶ ನೀಡಲಾಗಿದೆ. ಅಲ್ಲದೇ ಕೇಂದ್ರ ಸರ್ಕಾರ ಹಾಗೂ ರಕ್ಷಣ ಸಚಿವರು ಯಾರನ್ನೂ ಸಹ ಬಲವಂತ ಮಾಡ್ತಿಲ್ಲ, ಇಷ್ಟ ಇರುವವರಿಗೆ ಮಾತ್ರ ಸೇನೆಗೆ ಸೇರಲು ಅವಕಾಶ ಮಾಡಿಕೊಡಲಾಗಿದೆ. 18 ರಿಂದ 21 ವರ್ಷದ ಯುವಕ-ಯುವತಿಯರು ಸೇನೆಗೆ ಸೇರಬಹುದಾಗಿದೆ ಎಂದರು.

ನಮ್ಮಲ್ಲಿ ಸಾಕಷ್ಟು ಮಂದಿ ಸೇನಾ ನಿವೃತ್ತಿ ಬಳಿಕ ಬೇರೆ ಬೇರೆ ಸರ್ಕಾರಿ ಕೆಲಸದಲ್ಲಿ ತೊಡಗಿದ್ದಾರೆ. ಸೇನೆಗೆ ಸೇರಲು ಇಚ್ಚಿಸುವ ಸಾಕಷ್ಟು ಜನ ಯುವಕರು ಅವಕಾಶ ಸಿಗದೆ ಕಾದು ಸಾಲಿನಲ್ಲಿ ನಿಂತು ವಾಪಸ್ಸ್ ಆಗಿರುವುದನ್ನ ನೋಡಿದ್ದೇವೆ, ಇದಕ್ಕೆ ವಿರೋಧ ಮಾಡ್ತಾ ಇರೋರು ಎಲ್ಲರೂ ದೇಶ ಪ್ರೇಮಿಗಳಲ್ಲ. ಅವ್ರೆಲ್ಲಾ ದೇಶದ್ರೋಹಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಗ್ನಿಪಥ್ ಯೋಜನೆ ವಿರೋಧಿಸುವವರ ಹಿಂದೆ ವಿರೋಧ ಪಕ್ಷಗಳು, ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳ ಕೈವಾಡ ಇದೆ. ಅವರೇ ಈ ಅಗ್ನಿಪಥ್ ಯೋಜನೆ ವಿರೋಧಿಸಿ ರೈಲುಗಳಿಗೆ ಬೆಂಕಿ ಹಚ್ಚುತಿದ್ದಾರೆ ಎಂದರು. ದುಷ್ಕೃತ್ಯಗಳಲ್ಲಿ ಭಾಗಿಯಾಗಿರುವವರ ಮೇಲೆ ಕಾನೂನು ಕ್ರಮಕೈಗೊಳ್ಳುತ್ತದೆ. ಆದರೆ, ಇದರಲ್ಲಿ ರಾಜಕಾರಣ ಮಾಡುವುದು, ಹೋರಾಟ ಮಾಡುವುದು, ಸಾರ್ವಜನಿಕರಿಗೆ ತೊಂದರೆ ಕೊಡುವುದು ಮಾಡಿದರೆ, ನಮ್ಮಲ್ಲಿ ಕಾನೂನು ಸುವ್ಯವಸ್ಥೆ ಗಟ್ಟಿಯಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲೂ ಅಗ್ನಿಪಥ ವಿರುದ್ಧ ಯುವಕರ ಸಿಟ್ಟು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.