ETV Bharat / state

ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಆರೋಪ: ಅಧಿಕಾರಿಗಳಿಗೆ ಕೋಲಾರ ಡಿಸಿ ಖಡಕ್​ ವಾರ್ನಿಂಗ್​

author img

By

Published : May 20, 2019, 7:58 PM IST

Updated : May 20, 2019, 8:03 PM IST

ಅವೈಜ್ಞಾನಿಕ ರಸ್ತೆ ಕಾಮಗಾರಿ

ಬೆಂಗಳೂರಿನಿಂದ-ಚೆನೈಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯನ್ನು 2005 ರಲ್ಲಿ ಕೇಂದ್ರ ಸರ್ಕಾರ ದ್ವಿಮುಖ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಗಲೀಕರಣ ಮಾಡಿತ್ತು. ಆದ್ರೆ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದ ಹೆದ್ದಾರಿ ಈಗ ಸಾವಿನ ರಸ್ತೆಯಾಗಿ ಮಾರ್ಪಾಡಾಗಿದೆ. ಹೀಗಾಗಿ ಕೋಲಾರ ಡಿಸಿ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ.

ಕೋಲಾರ : ಬೆಂಗಳೂರಿನಿಂದ-ಚೆನ್ನೈಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-75 ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದ ಕೂಡಿದೆ. ಹೀಗಾಗಿ ಇದು ಸಾವಿನ ರಸ್ತೆಯಾಗಿ ಮಾರ್ಪಾಡಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ನ್ನು 2005 ರಲ್ಲಿ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ದಿಪಡಿಸಲು ನಿರ್ಧರಿಸಲಾಗಿತ್ತು. ಈ ಯೋಜನೆಯಡಿ 2005ರಲ್ಲಿ ಆರಂಭವಾಗಿದ್ದ ಕಾಮಗಾರಿ 2013/14 ರಲ್ಲಿ ಮುಕ್ತಾಯಗೊಂಡಿತ್ತು. ಸುಮಾರು 560 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹೆದ್ದಾರಿ, ಬೆಂಗಳೂರಿನಿಂದ-ಚೆನ್ನೈಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿ ಅಭಿವೃದ್ಧಿಯಾಯಿತು.

ಎಲ್ಲರೂ ಈ ಹೆದ್ದಾರಿಯಿಂದ ರಸ್ತೆ ಸಂಪರ್ಕ ಸುಧಾರಿಸಿತು ಎಂದೇ ಭಾವಿಸಿದ್ರು. ಆದ್ರೆ, ವಾಸ್ತವವಾಗಿ ನೋಡೋದಾದ್ರೆ ಹೆದ್ದಾರಿ ನಿರ್ಮಾಣ ಮಾಡಿದ ಖಾಸಗಿ ಕಂಪನಿಯೊಂದು ನಿಯಮಗಳನ್ನು ಗಾಳಿಗೆತೂರಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿದೆ. ಇದರ ಪರಿಣಾಮ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಹೆದ್ದಾರಿಯಲ್ಲಿ ಅಂಡರ್​ಪಾಸ್​ಗಳು, ಮೇಲ್ಸೇತುವೆಗಳು ಹಾಗೂ ಸರಿಯಾದ ಸೂಚನಾ ಫಲಕ, ಶೌಚಾಲಯ ವ್ಯವಸ್ಥೆ, ಲೈಟ್​ ವ್ಯವಸ್ಥೆ ಇಲ್ಲದ ಹಿನ್ನೆಲೆ ಹೆದ್ದಾರಿ ಸಾವಿನ ಮಾರ್ಗವಾಗಿ ಪರಿಣಮಿಸಿದೆ ಎಂಬ ಆರೋಪಗಳಿವೆ.

ಅವೈಜ್ಞಾನಿಕ ರಸ್ತೆ ಕಾಮಗಾರಿ

ಹೀಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲಿಂದ ಮೇಲೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾಧಿಕಾರಿ ಎಚ್ಚೆತ್ತುಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆ ಪಡೆದಿದ್ದ ಕಂಪನಿಯವರನ್ನು ಕರೆಸಿ ಸಭೆ ನಡೆಸಿದ್ದರು. ಈ ವೇಳೆ ಅಪಘಾತ ವಲಯಗಳನ್ನು ಸೂಚಿಸಿ, ಅಲ್ಲಿ ಅಂಡರ್​ಪಾಸ್ ನಿರ್ಮಾಣ, ಮೇಲ್ಸೇತುವೆ, ಹಾಗೂ ಸೂಚನಾ ಫಲಕಗಳು ಸೇರಿದಂತೆ ಸರ್ವೀಸ್​ ರಸ್ತೆ ನಿರ್ಮಿಸುವಂತೆ ನಾಲ್ಕೈದು ಬಾರಿ ಹೇಳಿದ್ದರು. ಆದ್ರೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಈಗ ಅಧಿಕಾರಿಗಳಿಗೆ ಡೆಡ್​​ಲೈನ್​ ನೀಡಿದ್ದು, ಅಷ್ಟರೊಳಗೆ ಹೆದ್ದಾರಿಯಲ್ಲಿನ ಲೋಪಗಳನ್ನು ಸರಿಮಾಡದಿದ್ದರೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಖಡಕ್​ ಎಚ್ಚರಿಕೆ ನೀಡಿದ್ದಾರೆ.

Intro:ಆಂಕರ್: ಅದು ಬೆಂಗಳೂರಿನಿಂದ-ಚೆನೈಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ, 2005 ರಲ್ಲಿ ಕೇಂದ್ರ ಸರ್ಕಾರ ದ್ವಿಮುಖ ರಸ್ತೆಯನ್ನು ಚತುಷ್ಪತ ರಸ್ತೆಯನ್ನಾಗಿ ಅಗಲೀಕರಣ ಮಾಡಿತ್ತು, ಆದ್ರೆ ಅವೈಜ್ನಾನಿಕ ಹಾಗೂ ಕಳಪೆ ಕಾಮಗಾರಿಯಿಂದ ಹೆದ್ದಾರಿ ಈಗ ಸಾವಿನ ರಸ್ತೆಯಾಗಿ ಮಾರ್ಪಾಟಾಗಿದೆ...

Body:ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ವಲಯಗಳನ್ನು ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು, ಮತ್ತೊಂದೆಡೆ ಹೆದ್ದಾರಿ ತಡೆದು ಪ್ರತಿಭಟನೆ ಮಾಡುತ್ತಿರುವ ಜನರು, ಇದೆಲ್ಲಾ ಕಂಡು ಬಂದಿದ್ದು ಕೋಲಾರದಲ್ಲಿ.ಚೆನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75,ಈ ರಸ್ತೆಯನ್ನು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2005 ರಲ್ಲಿ ದ್ವಿಮುಖ ರಸ್ತೆಯನ್ನು ಚತುಷ್ಪತ ರಸ್ತೆ ಯನ್ನಾಗಿ ಅಭಿವೃದ್ದಿ ಪಡಿಸಲು ನಿರ್ಧರಿಸಿ 2005 ರಲ್ಲಿ ಆರಂಭವಾದ ಕಾಮಗಾರಿ 2013/14 ರಲ್ಲಿ ಮುಕ್ತಾಯವಾಯಿತು. ಸುಮಾರು 560 ಕೋಟಿ ರೂಪಾಯಿ ವ್ಯಚ್ಚದಲ್ಲಿ ನಿರ್ಮಾಣ ಮಾಡಲಾದ ಹೆದ್ದಾರಿ ಬೆಂಗಳೂರಿನಿಂದ-ಮದ್ರಾಸ್​ಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿ ಅಭಿವೃದ್ದಿ ಪಡಿಸಿತು, ಎಲ್ಲರೂ ಈ ಹೆದ್ದಾರಿಯಿಂದ ರಸ್ತೆ ಸಂಪರ್ಕ ಸುಧಾರಿಸಿತು ಎಂದೇ ಭಾವಿಸಿದ್ರು, ಆದ್ರೆ ವಾಸ್ತವವಾಗಿ ನೋಡೋದಾದ್ರೆ ಹೆದ್ದಾರಿ ನಿರ್ಮಾಣ ಮಾಡಿದ ಲ್ಯಾನ್ಕೋ ಕಂಪನಿ ಹೆದ್ದಾರಿ ನಿಯಮಗಳನ್ನು ಗಾಳಿಗೆತೂರಿ ಅವೈಜ್ನಾನಿಕವಾಗಿ ಹೆದ್ದಾರಿ ನಿರ್ಮಾಣ ಮಾಡಿರುವ ಪರಿಣಾಮ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಹೆದ್ದಾರಿಯಲ್ಲಿ ಅಂಡರ್​ಪಾಸ್​ಗಳು, ಮೇಲ್ಸೇತುವೆಗಳು, ಹಾಗೂ ಸರಿಯಾದ ಸೂಚನಾ ಫಲಕ, ಶೌಚಾಲಯ ವ್ಯವಸ್ಥೆ, ಲೈಟ್​ ವ್ಯವಸ್ಥೆ ಮಾಡದ ಹಿನ್ನೆಲೆ ಹೆದ್ದಾರಿ ಸಾವಿನ ಮಾರ್ಗವಾಗಿ ಪರಿಣಮಿಸಿದೆ.

ಬೈಟ್​:1 ಮುರಳಿಗೌಡ (ಹೆದ್ದಾರಿ ಪ್ರಾಧಿಕಾರದ ವಿರುದ್ದ ದೂರುದಾರ)

ಹೀಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲಿಂದ ಮೇಲೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲೇ ಕೋಲಾರ ಜಿಲ್ಲಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಗುತ್ತಿಗೆ ಪಡೆದಿದ್ದ ಲ್ಯಾನ್ಕೋ ಕಂಪನಿಯವರನ್ನು ಕರೆಸಿ ಸಭೆ ನಡೆಸಿ, ಅಪಘಾತ ವಯಗಳನ್ನು ಸೂಚಿಸಿ, ಅಲ್ಲಿ ಅಂಡರ್​ಪಾಸ್ ನಿರ್ಮಾಣ, ಮೇಲ್ಸೇತುವೆ, ಹಾಗೂ ಸೂಚನಾ ಫಲಕಗಳನ್ನು, ಸರ್ವೀಸ್​ ರಸ್ತೆ ನಿರ್ಮಾಣ ಮಾಡಲು ಈಗಾಗಲೇ ನಾಲ್ಕೈದು ಬಾರಿ ಸಭೆ ಮಾಡಿ ಸೂಚನೆ ನೀಡಿದೆಯಾದ್ರು ಹೆದ್ದಾರಿಪ್ರಾಧಿಕಾರದ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಪರಿಣಾಮವಾಗಿ ಕೋಲಾರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಧಿಕಾರಿಗಳಿಗೆ ಡೆಡ್​ ಲೈನ್​ ನೀಡಿದ್ದು, ಅಷ್ಟರೊಳಗೆ ಹೆದ್ದಾರಿಯಲ್ಲಿನ ಲೋಪಗಳನ್ನು ಸರಿಮಾಡದೆ ಹೊದಲ್ಲಿ ಅವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೈಟ್​:2 ಜೆ.ಮಂಜುನಾಥ್​ (ಜಿಲ್ಲಾಧಿಕಾರಿ) Conclusion:ಒಟ್ಟಾರೆ ರಾಷ್ಟ್ರೀಯ ಹೆದ್ದಾರಿ-75 ಹೊಸದಾಗಿ ನಿರ್ಮಾಣ ಮಾಡಿ ಬೆಂಗಳೂರಿನಿಂದ-ಮದ್ರಾಸ್​ಗೆ ಒಳ್ಳೆಯ ಸಂಪರ್ಕ ಕಲ್ಪಿಸಿತಾದರೂ, ಅವೈಜ್ನಾನಿಕ ಕಾಮಗಾರಿಯಿಂದಾಗಿ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುವ ಮೂಲಕ ಸಾವಿನ ದಾರಿಯಾಗಿ ಪರಿಣಮಿಸಿದ್ದು, ಕೂಡಲೇ ಹೆದ್ದಾರಿ ಪ್ರಾಧಿಕಾರ ಹೆದ್ದಾರಿಯ ಲೋಪಗಳನ್ನು ಸರಿಪಡಿಸಬೇಕಿದೆ...
Last Updated :May 20, 2019, 8:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.