ETV Bharat / state

ವಾಲಿ​ಬಾಲ್​ ವಿಚಾರಕ್ಕೆ ಗಲಾಟೆ: ಕೋಲಾರದಲ್ಲಿ ಮೂವರಿಗೆ ಚಾಕು ಇರಿತ

author img

By

Published : May 21, 2020, 9:04 AM IST

Updated : May 21, 2020, 9:48 AM IST

knife stabbing on three person in kolar
ಮೂವರಿಗೆ ಚಾಕು ಇರಿತ

ವಾಲಿವಾಲ್ ಕೋರ್ಟ್ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದೆ. ಈ ವೇಳೆ ಒಂದು ಗುಂಪು ಖಾರದ ಪುಡಿ ಎರಚಿ ಮೂವರಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದೆ. ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಕೋಲಾರ: ವಾಲಿಬಾಲ್ ಆಟದ ವಿಚಾರಕ್ಕೆ ಗಲಾಟೆ ಉಂಟಾಗಿ ಮೂವರಿಗೆ ಚಾಕು ಇರಿದಿರುವ ಘಟನೆ ತಾಲೂಕಿನ ಕೆ.ಬಿ. ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ವಾಲಿವಾಲ್ ಕೋರ್ಟ್ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದೆ. ಈ ವೇಳೆ ಒಂದು ಗುಂಪು ಖಾರದ ಪುಡಿ ಎರಚಿ ಮೂವರಿಗೆ ಚಾಕುವಿನಿಂದ ಇರಿದಿದೆ.

ಮಂಜುನಾಥ್ (38), ಅಮರೇಶ್ (28), ಮಣಿ (24) ಚಾಕು ಇರಿತಕ್ಕೊಳಗಾದವರು. ವಿನೋದ್, ಮಂಜುನಾಥ್, ಮುನಿಯಪ್ಪ, ರಾಜಣ್ಣ, ಮುತ್ತು ಹಲ್ಲೆ ಮಾಡಿದ ಆರೋಪಿಗಳು. ಇನ್ನು ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಈ ಮೂವರ ಬೆನ್ನು, ಹೊಟ್ಟೆ ಹಾಗೂ ಕಿಡ್ನಿ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.

Last Updated :May 21, 2020, 9:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.