ETV Bharat / state

8 ವರ್ಷ ಹೃದಯದಲ್ಲಿದಲ್ಲಿಟ್ಟುಕೊಂಡವಳ ಬದುಕಲ್ಲಿ ಮತ್ತೋರ್ವನ ಎಂಟ್ರಿ : ನೊಂದ ಪ್ರೇಮಿ ಆತ್ಮಹತ್ಯೆ

author img

By

Published : Oct 20, 2021, 9:21 PM IST

Updated : Oct 20, 2021, 9:54 PM IST

young man commits suicide over love failure in kodagu
ಪ್ರೇಮಿ ಆತ್ಮಹತ್ಯೆ

ಮೃತ ದರ್ಶನ್ ಮಧ್ಯಪ್ರದೇಶದ ಸಿಂಗ್ರೌಳಿ ಎಂಬಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಈತ ತನ್ನದೇ ಗ್ರಾಮದ ಯುವತಿಯನ್ನು ಕಳೆದ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ. ಮನೆಯವರ ಒಪ್ಪಿಗೆ ಮೇರೆಗೆ ಯುವತಿ ಮದುವೆಯಾಗಲು ಒಪ್ಪಿದ್ದಳಂತೆ..

ಕೊಡಗು : ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾಗಿ ಸುಂದರ ಬದುಕು ಸಾಗಿಸುವ ಕನಸು ಕಂಡಿದ್ದ. ಆದರೆ, ಅಲ್ಲಿ ನಡೆದಿದ್ದೇ ಬೇರೆ. ತನಗೆ ಹೃದಯ ಕೊಟ್ಟಿದ್ದ ಆಕೆ ಬೇರೆ ಯುವಕನನ್ನು ಪ್ರೀತಿ ಮಾಡುತ್ತಿದ್ದಾಳೆಂದು ಗೊತ್ತಾದಾಗ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪ್ರೇಮಿ ಆತ್ಮಹತ್ಯೆ

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮಾಯಾಮುಡಿ ಸಮೀಪದ ಸುಳುಗೋಡು ನಿವಾಸಿ ದರ್ಶನ್ ಲವ್​ ಮಾಡಿದ ಹುಡುಗಿ ಬೇರೆಯವರನ್ನು ಪ್ರೀತಿಸುತ್ತಿದ್ದ ವಿಷಯ ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಕೊಡಗು ಎಸ್ಪಿಗೂ ಪತ್ರವೊಂದನ್ನು ಬರೆದು ನೇಣಿಗೆ ಕೊರಳೊಡ್ಡಿದ್ದಾನೆ.

ಯುವತಿ ಮತ್ತು ಮನೆಯವರು ನನ್ನ ಸಾವಿಗೆ ಕಾರಣ ಎಂದು ಡೆತ್‌ನೋಟ್ ಬರೆದಿದ್ದಾನೆ. ಇತ್ತ ಮಗನ ಉಜ್ವಲ ಭವಿಷ್ಯದ ಬಗ್ಗೆ ಕನಸು ಕಾಣುತ್ತಿದ್ದ ಆತನ ಪೋಷಕರು ಭಾರವಾದ ಮನಸ್ಸಿನಿಂದ ಮನೆ ಮಗನ ಮೃತದೇಹದ ಅಂತ್ಯಸಂಸ್ಕಾರ ಮಾಡಿದ್ದಾರೆ.

ಮೃತ ದರ್ಶನ್ ಮಧ್ಯಪ್ರದೇಶದ ಸಿಂಗ್ರೌಳಿ ಎಂಬಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಈತ ತನ್ನದೇ ಗ್ರಾಮದ ಯುವತಿಯನ್ನು ಕಳೆದ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ. ಮನೆಯವರ ಒಪ್ಪಿಗೆ ಮೇರೆಗೆ ಯುವತಿ ಮದುವೆಯಾಗಲು ಒಪ್ಪಿದ್ದಳಂತೆ.

ಆದರೆ, ಈಯುವತಿಗೆ ಏನಾಯಿತೊ ಏನೋ ಗೊತ್ತಿಲ್ಲ.ಕಳೆದ ನಾಲ್ಕು ತಿಂಗಳಿಂದ ಈಕೆಗೆ ಬೆಂಗಳೂರಿನಲ್ಲಿ ಪೊಲೀಸ್ ಸೇವೆಯಲ್ಲಿರುವ ಯುವಕನೊಂದಿಗೆ ಪ್ರೀತಿ ಬೆಳೆದಿದೆ. ಇದು ದರ್ಶನ್‌ಗೆ ಗೊತ್ತಾಗಿದೆ. ಇದರಿಂದ ಮನನೊಂದ ದರ್ಶನ್ ಮಧ್ಯಪ್ರದೇಶದಲ್ಲಿ ತಾನು ವಾಸವಿದ್ದ ಕೊಠಡಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇಂದು ಮೃತದೇಹವನ್ನು ಸುಳುಗೋಡು ಗ್ರಾಮಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮತ್ತೊಂದೆಡೆ ಯುವಕ ಸಾವಿಗೂ ಮುನ್ನ ಕೊಡಗು ಎಸ್ಪಿ ಕ್ಷಮಾ ಮಿಶ್ರಾ ಅವರಿಗೆ ಪತ್ರವೊಂದನ್ನು ಬರೆದಿದ್ದಾನೆ. ತನ್ನ ಸಾವಿಗೆ ಯುವತಿ ಹಾಗೂ ಅವಳ ಮನೆಯವರೇ ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ.

Last Updated :Oct 20, 2021, 9:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.