ETV Bharat / state

ಮಡಿಕೇರಿ: ತಂದೆಯಿಂದಲೇ ಮಗನ ಹತ್ಯೆ

author img

By

Published : Feb 19, 2023, 9:57 PM IST

Updated : Feb 19, 2023, 10:14 PM IST

madikeri-murder-of-son-by-father
ಮಡಿಕೇರಿ: ತಂದೆಯಿಂದಲೆ ಮಗನ ಹತ್ಯೆ

ಕೌಟುಂಬಿಕ ಕಲಹ- ಮಗನನ್ನೇ ಗುಂಡಿಕ್ಕಿ ಕೊಂದು ಪೊಲೀಸರಿಗೆ ಶರಣಾದ ತಂದೆ- ಕೊಡಗು ಜಿಲ್ಲೆಯಲ್ಲಿ ಪ್ರಕರಣ

ಮಡಿಕೇರಿ(ಕೊಡಗು): ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಂದೆಯೇ ಮಗನನ್ನು ಗುಂಡಿಕ್ಕಿ ಹತ್ಯೆಗೈದಿರುವ ಭಯಾನಕ ಘಟನೆ ಮಡಿಕೇರಿ ತಾಲೂಕಿನ ಕಟ್ಟೆಮಾಡು ಗ್ರಾಮದಲ್ಲಿ ನಡೆದಿದೆ. ಪುತ್ರ ನಿರೆನ್ (28)ಅನ್ನು ಹತ್ಯೆ ಮಾಡಿ ತಂದೆ ನಂದೇಟಿರ ಚಿಟ್ಟಿಯಪ್ಪ ಪೊಲೀಸರಿಗೆ ಶರಣಾಗಿದ್ದಾರೆ.

ಒಂದೇ ಮನೆಯಲ್ಲಿ ವಾಸ, ನಿತ್ಯವೂ ನಡೆಯುತ್ತಿತ್ತು ಜಗಳ.. ತಂದೆ ಮತ್ತು ಪುತ್ರ ಇಬ್ಬರು ಕೂಡ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಪುತ್ರ ನಿರೆನ್​ ತೋಟ ಮತ್ತು ಮನೆಯ ಕೆಲಸವನ್ನು ಮಾಡಿಕೊಂಡು ಸಂಸಾರವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದರು. ಆದರೆ ಇಷ್ಟೆಲ್ಲಾ ಕೆಲಸ ಮಾಡಿದರು ಮಗ ಮತ್ತು ಅಪ್ಪನ ನಡುವೆ ಸಣ್ಣ ಪುಟ್ಟ ಗಲಾಟೆಗಳು ನಡೆಯುತ್ತಿದ್ದವು. ಗಲಾಟೆ ತೀವ್ರ ವಿಕೋಪಕ್ಕೆ ತಿರುಗಿದ್ದು, ತಂದೆ ನಂದೇಟಿರ ಚಿಟ್ಟಿಯಪ್ಪ ಅವರು ಮನೆಯಲ್ಲಿದ್ದ ಬಂದೂಕನಿಂದ ಮಗ ನಿರೆನ್ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿ, ನಂತರ ಮಡಿಕೇರಿ ಪೊಲೀಸ್ ‌ಠಾಣೆಗೆ ಬಂದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಶರಣಾಗಿದ್ದಾರೆ ಎಂದು ಪೊಲೀಸ್​ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಮಡಿಕೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ, ಪೊಲೀಸರಿಂದ ಪರಿಶೀಲನೆ.. ಈ ಘಟನೆ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ‌ನಡೆಸಿದ್ದಾರೆ.

ಇದನ್ನೂ ಓದಿ : ಸೈಟಿನ ಹೆಸರಿನಲ್ಲಿ‌ ಸರ್ಕಾರಿ ನೌಕರನಿಗೆ ವಂಚನೆ: ಹಣ ಕೇಳಿದರೆ ಅತ್ಯಾಚಾರದ ದೂರು ಕೊಡುವುದಾಗಿ ಬೆದರಿಕೆ ಆರೋಪ

ಹೆತ್ತವಳನ್ನೇ ಕೊಂದ ಮಗ : ಓದುವಾಗ ಮೊಬೈಲ್​ ನೋಡುತ್ತಾ ಕುಳಿತಿದ್ದರಿಂದ ಬೈದು, ಕೆನ್ನಗೆ ಬಾರಿಸಿದ ತಾಯಿಯನ್ನು ಮಗನೊರ್ವ ಕೊಲೆ ಮಾಡಿರುವ ಘಟನೆ ಶುಕ್ರವಾರದಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಕೃತ್ಯದ ನಂತರ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವಂತೆ ಆತ ಬಿಂಬಿಸದ್ದ ಎಂದು ತಿಳಿದು ಬಂದಿದೆ.

ಪೊಲೀಸರು ಅನುಮಾನದಿಂದ ಹೊರಬಿತ್ತು ಸತ್ಯ.. ಪುಣೆಯ ಉರ್ಲಿ ಕಾಂಚನ್​ ನಿವಾಸಿ 37 ವರ್ಷದ ತಸ್ಲೀಮ್​ ಶೇಖ್​ ಎಂಬ ಮಹಿಳೆ ಮಗನಿಂದ ಕೊಲೆಯಾಗಿದ್ದಾರೆ. ಆರೋಪಿ ಜಿಶಾನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಈತ 12ನೇ ತರಗತಿ ಓದುತ್ತಿದ್ದ ಎಂದು ತಿಳಿದು ಬಂದಿದೆ. ತಸ್ಲೀಮ್​ ಸಾವಿನ ಬಗ್ಗೆ ವೈದ್ಯರು ಮತ್ತು ಪೊಲೀಸರು ಅನುಮಾನ ವ್ಯಕ್ತಪಡಿಸಿದಾಗ ಸತ್ಯ ಬಹಿರಂಗವಾಗಿದೆ.

ಕಾರ್​ ಪಾರ್ಕಿಂಗ್​ ವಿಚಾರಕ್ಕೆ ತಂದೆ, ಮಗನ ಮೇಲೆ ಗುಂಡಿನ ದಾಳಿ : ನವದೆಹಲಿಯ ಭಜನ್​ಪುರ್​ ಪ್ರದೇಶದಲ್ಲಿ ವಾಹನ ನಿಲುಗಡೆ ಸಂಬಂಧಿಸಿದಂತೆ ಜಗಳ ನಡೆದು ದುಷ್ಕರ್ಮಿಗಳು ತಂದೆ ಹಾಗೂ ಮಗನ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿರುವ ಘಟನೆ ಫೆ.17ರಂದು ನಡೆದಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ವಿರೇಂದ್ರ ಅಗರ್ವಾಲ್​ ಮತ್ತು ಅವರ ಪುತ್ರ ಸಚಿನ್​ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ : ಡ್ಯಾಂ ಬಳಿ ಪ್ಲಾಸ್ಟಿಕ್​ ಚೀಲದಲ್ಲಿ ಸುತ್ತಿ ಎಸೆದಿದ್ದ 20 ವರ್ಷದ ಯುವತಿಯ ಶವ ಪತ್ತೆ

Last Updated :Feb 19, 2023, 10:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.