ETV Bharat / state

ಕರ್ನಾಟಕ ವಿಧಾನಸಭಾ ಚುನಾವಣೆ: ಕೊಡಗು ಜಿಲ್ಲೆಯಲ್ಲಿ ಹೈ ಆಲರ್ಟ್​, ಮೂರು ಕಡೆ ಅಂತಾರಾಜ್ಯ ಚೆಕ್​​ಪೋಸ್ಟ್ ಸ್ಥಾಪನೆ

author img

By

Published : Mar 30, 2023, 5:39 PM IST

Updated : Mar 30, 2023, 7:27 PM IST

establishment of inter state check post on three sides in Kodagu district
ಕರ್ನಾಟಕ ವಿಧಾನಸಭಾ ಚುನಾವಣೆ: ಕೊಡಗು ಜಿಲ್ಲೆಯಲ್ಲಿ ಹೈ ಆಲರ್ಟ್​, ಮೂರು ಕಡೆ ಅಂತರರಾಜ್ಯ ಚೆಕ್​​ಪೋಸ್ಟ್ ಸ್ಥಾಪನೆ

ಕೊಡಗು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ ಎಂದು ಕೊಡಗು ಜಿಲ್ಲಾ ಎಸ್​ಪಿ ರಾಮರಾಜನ್ ತಿಳಿಸಿದರು.

ಕರ್ನಾಟಕ ವಿಧಾನಸಭಾ ಚುನಾವಣೆ: ಕೊಡಗು ಜಿಲ್ಲೆಯಲ್ಲಿ ಹೈ ಆಲರ್ಟ್​, ಮೂರು ಕಡೆ ಅಂತಾರಾಜ್ಯ ಚೆಕ್​​ಪೋಸ್ಟ್ ಸ್ಥಾಪನೆ

ಕೊಡಗು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಬುಧವಾರದಿಂದ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿ ಪೊಲೀಸ್​ ಇಲಾಖೆ ಹೈ ಅಲರ್ಟ್​ ಆಗಿದ್ದು, ಜಿಲ್ಲೆಯ ಗಡಿ‌ಭಾಗದ ಪ್ರದೇಶಗಳಲ್ಲಿ ಚೆಕ್​​ಪೋಸ್ಟ್​ ನಿರ್ಮಿಸಲಾಗಿದೆ ಎಂದು ಕೊಡಗು ಜಿಲ್ಲಾ ವರಿಷ್ಠಾಧಿಕಾರಿ ರಾಮರಾಜನ್ ಹೇಳಿದ್ದಾರೆ.

ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ಕುಟ್ಟ, ಮಾಕುಟ್ಟ, ಕರಿಕೆ ಭಾಗಗಳಲ್ಲಿ ಅಂತಾರಾಜ್ಯ ಚೆಕ್‍ಪೋಸ್ಟ್ ಹಾಗೂ ಅಂತರ್ ಜಿಲ್ಲೆಯ 11 ಚೆಕ್​ಪೋಸ್ಟ್​​ಗಳನ್ನು ಸ್ಥಾಪನೆ ಮಾಡಲಾಗಿದ್ದು, ಹಗಲು ರಾತ್ರಿ ಚೆಕ್​ಪೋಸ್ಟ್​ಗಳಲ್ಲಿ ತಪಾಸಣೆ ನಡೆಸಲಾಗುತ್ತದೆ ಎಂದು ಹೇಳಿದರು. ತಪಾಸಣೆ ನಡೆಸುವ ಚೆಕ್​ಪೋಸ್ಟ್​​ಗಳಲ್ಲಿ ಸಿಸಿ ಕ್ಯಾಮರಾಗಳ‌ನ್ನು ಅಳವಡಿಸಲಾಗಿದ್ದು, ವಾಹನ ತಪಾಸಣೆ ವೇಳೆ ವಿಡಿಯೋ ಚಿತ್ರಿಕರಣ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಗೃಹೋಪಯೋಗಿ ವಸ್ತುಗಳ ಸಾಗಟಕ್ಕೆ ಬ್ರೇಕ್ : ದಾಖಲೆಯಿಲ್ಲದೇ 50 ಸಾವಿರ ರೂ. ಗಿಂತ ಹೆಚ್ಚು ಹಣವನ್ನು ಕೊಂಡೊಯ್ಯುವಂತಿಲ್ಲ, ಸೀರೆ, ಕುಕ್ಕರ್ ಸೇರಿದಂತೆ ಇತರ ಗೃಹೋಪಯೋಗಿ ವಸ್ತುಗಳ ಸಾಗಣೆಗೆ ಬ್ರೇಕ್ ಹಾಕಲಾಗಿದೆ. ಮಾರಾಟದ ವಸ್ತುಗಳಿಗೆ ದಾಖಲೆ ನೀಡಿ ಸಾಗಿಸುವಂತೆ ಸೂಚನೆ ನೀಡಲಾಗಿದೆ. ಕೊಡಗು ಜಿಲ್ಲೆಯ ಪ್ರವೇಶದಲ್ಲಿಯೇ ಪ್ರತಿ ವಾಹನಗಳನ್ನೂ ಚೆಕ್ ಮಾಡಲಾಗುತ್ತದೆ ಎಂದು ಹೇಳಿದರು.

ಮಂಗಳೂರು ಮತ್ತು ಮೈಸೂರು ಹಾಗೂ ಹಾಸನ ಜಿಲ್ಲೆಗಳಿಂದ ಬರುವ ವಾಹನಗಳನ್ನು ಚೆಕ್​ಪೋಸ್ಟ್​ಗಳಲ್ಲಿ ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜನೆ ಮಾಡಿದ್ದು, ಎಂಸಿಸಿ ಇಬ್ಬರು ನೋಡಲ್ ಅಧಿಕಾರಿಗಳು, 41 ಸೆಕ್ಟರ್ ಅಧಿಕಾರಿಗಳು, 14 ಫ್ಲೈಯಿಂಗ್ ಸ್ಕ್ವಾಡ್, 42 ಸ್ಟಾಟಿಕ್ ಸರ್ವೆಲೆನ್ಸ್ ತಂಡ ರಚಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದ್ದು. ಗೂಂಡಾ ಕಾಯ್ದೆ ಅಡಿಯಲ್ಲಿ ಕುಶಾಲನಗರ ಮತ್ತು ಸೋಮವಾರಪೇಟೆಯ ಇಬ್ಬರು ರೌಡಿಗಳನ್ನು ಗಡಿಪಾರು ಮಾಡಲಾಗಿದೆ. ಕೊಡಗು ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಮಾಹಿತಿ ನೀಡಿದರು.

ಇದನ್ನೂ ಓದಿ : ಅನಧಿಕೃತ ಪ್ಲಾಂಟೇಷನ್ ಬೆಳೆ ಬೆಳೆದ ಜಮೀನು ಗುತ್ತಿಗೆ ನೀಡಿ ಸಕ್ರಮಗೊಳಿಸಲು ಕ್ರಮ: ಸಚಿವ ಅಶೋಕ್

ನೀತಿ ಸಂಹಿತೆ ಎಫೆಕ್ಟ್ ಪ್ರವಾಸಿಮಂದಿರ ಕ್ಲೋಸ್, ಸರ್ಕಾರಿ ಬ್ಯಾನರ್​ಗಳ ತೆರವು: ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಚಾಮರಾಜನಗರ ಜಿಲ್ಲೆಯಲ್ಲಿ ರಾಜಕೀಯ ಸಭೆ, ರಾಜಕೀಯ ಮುಖಂಡರ ವಾಸ್ತವ್ಯ, ಸಮಾರಂಭಗಳಿಗೆ ಪ್ರವಾಸಿ ಮಂದಿರದಲ್ಲಿ ನಿರ್ಬಂಧ ಹೇರಲಾಗಿದೆ. ಹಾಗೂ ಪ್ರವಾಸಿ ಮಂದಿರದ ಗೇಟ್​ಗೆ ನೀತಿ ಸಂಹಿತೆ ಜಾರಿಯಾದ ಸಂಬಂಧ ಬೋರ್ಡ್​ಗಳನ್ನು ಹಾಕಲಾಗಿದೆ. ಪ್ರವಾಸಿ ಮಂದಿರದಲ್ಲಿದ್ದ ಶಾಸಕರ ಕಚೇರಿ ತೆರವಾಗಿದ್ದು, ಅವರಿಗೆ ಸಂಬಂಧಿಸಿದ ವಸ್ತಗಳು, ಕಡತಗಳನ್ನು ಇಂದು ತೆಗೆದುಕೊಂಡು ಹೋಗಿದ್ದರು. ಚಾಮರಾಜನಗರ ಜಿಲ್ಲಾಡಳಿತದ ಆವರಣದಲ್ಲಿ ಅಳವಡಿಸಲಾಗಿದ್ದ ರಾಜಕೀಯ ಪಕ್ಷಗಳು, ಸರ್ಕಾರಿ ಯೋಜನೆಗಳ ಪ್ರಚಾರದ ಬ್ಯಾನರ್ ಗಳನ್ನು ತೆರವುಗೊಳಿಸುತ್ತಿರುವುದು ಕಂಡುಬಂದಿತ್ತು.

ಇದನ್ನೂ ಓದಿ : ಡ್ರೈವಿಂಗ್​ ಲೈಸೆನ್ಸ್​ಗಾಗಿ 960 ಬಾರಿ ಪ್ರಯತ್ನ : ₹11 ಲಕ್ಷ ಖರ್ಚು, ನಿರಂತರ ಪ್ರಯತ್ನಕ್ಕೆ ಸಿಕ್ಕಿತು ಲೈಸೆನ್ಸ್!​

Last Updated :Mar 30, 2023, 7:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.