ETV Bharat / state

ಅನಧಿಕೃತ ಕಾಮಗಾರಿಗೆ ಚಾಲನೆ.. ಶಾಸಕ ರಂಜನ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲು..

author img

By

Published : May 14, 2020, 3:45 PM IST

ಅನಧಿಕೃತ ಕಾಮಗಾರಿಗೆ ಚಾಲನೆ ನೀಡಿದ ಆರೋಪದ ಮೇರೆಗೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸೇರಿದಂತೆ ಹಲವರ ವಿರುದ್ಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

MLA Appacchu Ranjan
ಕಾಮಗಾರಿಗೆ ಚಾಲನೆ

ಕೊಡಗು : ಸುಪ್ರೀಂಕೋರ್ಟ್ ಆದೇಶ ಇಲ್ಲದೇ ಇದ್ದರೂ ಅನಧಿಕೃತ ಕಾಮಗಾರಿಗೆ ಚಾಲನೆ ನೀಡಿದ ಆರೋಪದ ಮೇರೆಗೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸೇರಿ ಹಲವರ ವಿರುದ್ಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅನಧಿಕೃತ ಕಾಮಗಾರಿಗೆ ಚಾಲನೆ ನೀಡಿದ ಶಾಸಕ?

₹89 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಕುಶಾಲನಗರ ವ್ಯಾಪ್ತಿಯ ಕಾವೇರಿ ನದಿಯಲ್ಲಿ ಹೂಳು ತೆಗೆಯುವ ಕಾಮಗಾರಿಗೆ ಅನಧಿಕೃತ ಚಾಲನೆ ನೀಡಿದ್ದರಿಂದ ಶಾಸಕ ರಂಜನ್ ಸೇರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಪುರುಶೋತ್ತಮ್ ರೈ, ಕಾವೇರಿ ನದಿ ರಕ್ಷಣಾ ವೇದಿಕೆ ಮುಖಂಡ ಚಂದ್ರಮೋಹನ್, ಕಾವೇರಿ ನೀರಾವರಿ ನಿಗಮದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ರಾಜುಗೌಡ ಹಾಗೂ ಕುಶಾಲನಗರ ನಿವಾಸಿ ಎಂ ಎಂ ಚರಣ್ ವಿರುದ್ಧ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ಹೆಚ್ ಎಸ್‌ ಅಶೋಕ್ ದೂರು ನೀಡಿದ್ದಾರೆ.‌

ಅಲ್ಲದೆ ಬಸವಣ್ಣ ದೇವರ ಬನ ಟ್ರಸ್ಟ್​ನಿಂದಲೂ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.